ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Sunday 21 August 2016

ಈವರೆಗೆ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ವಿವರ

ಕನ್ನಡ ಸಾಹಿತ್ಯ ಸಮ್ಮೇಳನಗಳು
ಕ್ರಮಸಂಖ್ಯೆ ವರ್ಷ ಸ್ಥಳ
೧ ೧೯೧೫ ಬೆಂಗಳೂರು ಎಚ್.ವಿ.ನಂಜುಂಡಯ್ಯ
೨ ೧೯೧೬ ಬೆಂಗಳೂರು ಎಚ್.ವಿ.ನಂಜುಂಡಯ್ಯ
೩ ೧೯೧೭ ಮೈಸೂರುಎಚ್.ವಿ.ನಂಜುಂಡಯ್ಯ
೪ ೧೯೧೮ ಧಾರವಾಡ ಆರ್.ನರಸಿಂಹಾಚಾರ್
೫ ೧೯೧೯ ಹಾಸನ ಕರ್ಪೂರ ಶ್ರೀನಿವಾಸರಾವ್
೬ ೧೯೨೦ ಹೊಸಪೇಟೆ ರೊದ್ದ ಶ್ರೀನಿವಾಸರಾವ
೭ ೧೯೨೧ ಚಿಕ್ಕಮಗಳೂರು ಕೆ.ಪಿ.ಪುಟ್ಟಣ್ಣ ಶೆಟ್ಟಿ
೮ ೧೯೨೨ ದಾವಣಗೆರೆ ಎಂ.ವೆಂಕಟಕೃಷ್ಣಯ್ಯ
೯ 1೯೨೩ ಬಿಜಾಪುರ ಸಿದ್ಧಾಂತಿ ಶಿವಶಂಕರಶಾಸ್ತ್ರಿ
೧೦ ೧೯೨೪ ಕೋಲಾರ ಹೊಸಕೋಟೆ ಕೃಷ್ಣಶಾಸ್ತ್ರಿ
೧೧ ೧೯೨೫ ಬೆಳಗಾವಿ ಬೆನಗಲ್ ರಾಮರಾವ್
೧೨ ೧೯೨೬ ಬಳ್ಳಾರಿ ಫ.ಗು.ಹಳಕಟ್ಟಿ
೧೩ ೧೯೨೭ ಮಂಗಳೂರು ಆರ್.ತಾತಾಚಾರ್ಯ
೧೪ ೧೯೨೮ ಕಲಬುರ್ಗಿಬಿ ಎಂ ಶ್ರೀ
೧೫ ೧೯೨೯ ಬೆಳಗಾವಿ ಮಾಸ್ತಿ ವೆಂಕಟೇಶಅಯ್ಯಂಗಾರ್
೧೬ ೧೯೩೦ ಮೈಸೂರು ಆಲೂರು ವೆಂಕಟರಾಯರು
೧೭ ೧೯೩೧ ಕಾರವಾರ ಮುಳಿಯ ತಿಮ್ಮಪ್ಪಯ್ಯ
೧೮ ೧೯೩೨ ಮಡಿಕೇರಿಡಿ ವಿ ಜಿ
೧೯ ೧೯೩೩ ಹುಬ್ಬಳ್ಳಿ ವೈ.ನಾಗೇಶ ಶಾಸ್ತ್ರಿ
೨೦ ೧೯೩೪ ರಾಯಚೂರು ಪಂಜೆ ಮಂಗೇಶರಾಯರು
೨೧ ೧೯೩೫ ಮುಂಬಯಿ ಎನ್.ಎಸ್.ಸುಬ್ಬರಾವ್
೨೨ ೧೯೩೭ ಜಮಖಂಡಿ ಬೆಳ್ಳಾವೆವೆಂಕಟನಾರಣಪ್ಪ
೨೩ ೧೯೩೮ ಬಳ್ಳಾರಿ ರಂಗನಾಥ ದಿವಾಕರ
೨೪ ೧೯೩೯ ಬೆಳಗಾವಿ ಮುದವೀಡುಕೃಷ್ಣರಾಯರು
೨೫ ೧೯೪೦ ಧಾರವಾಡ ವೈ.ಚಂದ್ರಶೇಖರ ಶಾಸ್ತ್ರಿ
೨೬ 1೯೪೧ ಹೈದರಾಬಾದ್ ಎ.ಆರ್.ಕೃಷ್ಣಶಾಸ್ತ್ರಿ
೨೭ ೧೯೪೩ ಶಿವಮೊಗ್ಗ ದ.ರಾ.ಬೇಂದ್ರೆ
೨೮ ೧೯೪೪ ರಬಕವಿ ಎಸ್.ಎಸ್.ಬಸವನಾಳ
೨೯ ೧೯೪೫ ಮದರಾಸು ಟಿ ಪಿ ಕೈಲಾಸಂ
೩೦ ೧೯೪೭ ಹರಪನಹಳ್ಳಿ ಸಿ.ಕೆ.ವೆಂಕಟರಾಮಯ್ಯ
೩೧ ೧೯೪೮ ಕಾಸರಗೋಡುತಿ.ತಾ.ಶರ್ಮ
೩೨ ೧೯೪೯ ಕಲಬುರ್ಗಿ ಉತ್ತಂಗಿ ಚನ್ನಪ್ಪ
೩೩ ೧೯೫೦ ಸೊಲ್ಲಾಪುರ ಎಮ್.ಆರ್.ಶ್ರೀನಿವಾಸಮೂರ್ತಿ
೩೪ ೧೯೫೧ ಮುಂಬಯಿ ಗೋವಿಂದ ಪೈ
೩೫ ೧೯೫೨ ಬೇಲೂರು ಎಸ್.ಸಿ.ನಂದೀಮಠ
೩೬ ೧೯೫೪ ಕುಮಟಾ ವಿ.ಸೀತಾರಾಮಯ್ಯ
೩೭ ೧೯೫೫ ಮೈಸೂರು ಶಿವರಾಮ ಕಾರಂತ
೩೮ ೧೯೫೬ ರಾಯಚೂರು ಶ್ರೀರಂಗ
೩೯ ೧೯೫೭ ಧಾರವಾಡ ಕುವೆಂಪು
೪೦ ೧೯೫೮ ಬಳ್ಳಾರಿ ವಿ.ಕೆ.ಗೋಕಾಕ
41 ೧೯೫೯ ಬೀದರ ಡಿ.ಎಲ್.ನರಸಿಂಹಾಚಾರ್
೪೨ ೧೯೬೦ ಮಣಿಪಾಲ ಅ.ನ. ಕೃಷ್ಣರಾಯ೪
೩೧೯೬೧ ಗದಗ ಕೆ.ಜಿ.ಕುಂದಣಗಾರ
೪೪ ೧೯೬೩ ಸಿದ್ದಗಂಗಾ ರಂ.ಶ್ರೀ.ಮುಗಳಿ
೪೫ ೧೯೬೫ಕಾರವಾರಕಡೆಂಗೋಡ್ಲು ಶಂಕರಭಟ್ಟ
೪೬ ೧೯೬೭ ಶ್ರವಣಬೆಳಗೊಳ ಆ.ನೇ.ಉಪಾಧ್ಯೆ
೪೭ ೧೯೭೦ ಬೆಂಗಳೂರು ದೇ.ಜವರೆಗೌಡ
೪೮ ೧೯೭೪ ಮಂಡ್ಯ ಜಯದೇವಿತಾಯಿ ಲಿಗಾಡೆ
೪೯ ೧೯೭೬ ಶಿವಮೊಗ್ಗ ಎಸ್.ವಿ.ರಂಗಣ್ಣ
೫೦ ೧೯೭೮ ದೆಹಲಿ ಜಿ.ಪಿ.ರಾಜರತ್ನಂ
೫೧ ೧೯೭೯ ಧರ್ಮಸ್ಥಳ ಗೋಪಾಲಕೃಷ್ಣ ಅಡಿಗ
೫೨ ೧೯೮೦ ಬೆಳಗಾವಿ ಬಸವರಾಜ ಕಟ್ಟೀಮನಿ
೫೩ ೧೯೮೧ ಚಿಕ್ಕಮಗಳೂರು ಪು.ತಿ.ನರಸಿಂಹಾಚಾರ್
೫೪ ೧೯೮೧ ಮಡಿಕೇರಿ ಶಂ.ಬಾ.ಜೋಶಿ
೫೫ ೧೯೮೨ ಶಿರಸಿ ಗೊರೂರು ರಾಮಸ್ವಾಮಿಐಯಂಗಾರ್
೫೬ ೧೯೮೪ ಕೈವಾರ ಎ.ಎನ್.ಮೂರ್ತಿ ರಾವ್
೫೭ ೧೯೮೫ ಬೀದರ್. ಹಾ.ಮಾ.ನಾಯಕ
೫೮ ೧೯೮೭ ಕಲಬುರ್ಗಿ ಸಿದ್ದಯ್ಯ ಪುರಾಣಿಕ
೫೯ ೧೯೯೦ ಹುಬ್ಬಳ್ಳಿ ಆರ್.ಸಿ.ಹಿರೇಮಠ
೬೦ ೧೯೯೧ ಮೈಸೂರು ಕೆ.ಎಸ್. ನರಸಿಂಹಸ್ವಾಮಿ
೬೧ ೧೯೯೨ ದಾವಣಗೆರೆ ಜಿ.ಎಸ್.ಶಿವರುದ್ರಪ್ಪ
೬೨ ೧೯೯೩ ಕೊಪ್ಪ್ಪಳ ಸಿಂಪಿ ಲಿಂಗಣ್ಣ
೬೩ ೧೯೯೪ ಮಂಡ್ಯ ಚದುರಂಗ
೬೫ ೧೯೯೬ ಹಾಸನ ಚನ್ನವೀರ ಕಣವಿ
೬೬ ೧೯೯೭ ಮಂಗಳೂರು ಕಯ್ಯಾರ ಕಿಞ್ಞಣ್ಣ ರೈ
೬೭ ೧೯೯೯ ಕನಕಪುರ ಎಸ್.ಎಲ್.ಭೈರಪ್ಪ
೬೮ ೨೦೦೦ ಬಾಗಲಕೋಟೆ ಶಾಂತಾದೇವಿ ಮಾಳವಾಡ
೬೯ ೨೦೦೨ ತುಮಕೂರು ಯು.ಆರ್. ಅನಂತಮೂರ್ತಿ
೭೦ ೨೦೦೩ ಮೂಡುಬಿದಿರೆ ಕಮಲಾ ಹಂಪನಾ
೭೨ ೨೦೦೬ ಬೀದರ್ ಶಾಂತರಸ ಹೆಂಬೆರಳು
೭೩ ೨೦೦೭ ಶಿವಮೊಗ್ಗ ನಿಸಾರ್ ಅಹಮ್ಮದ್
೭೪ ೨೦೦೮ ಉಡುಪಿ ಎಲ್. ಎಸ್. ಶೇಷಗಿರಿ ರಾವ್
೭೫ ೨೦೦೯ ಚಿತ್ರದುರ್ಗ ಎಲ್. ಬಸವರಾಜು
೭೬ ೨೦೧೦ ಗದಗ ಗೀತಾ ನಾಗಭೂಷಣ
೭೭ ೨೦೧೧ ಬೆಂಗಳೂರು ಜಿ. ವೆಂಕಟಸುಬ್ಬಯ್ಯ
೭೮ ೨೦೧೨ ಗಂಗಾವತಿ ಸಿ.ಪಿ ಕೃಷ್ಣಕುಮಾರ್
೭೯ ೨೦೧೩ ವಿಜಾಪುರ ಕೋ.ಚನ್ನಬಸಪ್ಪ
೮೦ ೨೦೧೪ ಕೊಡಗು ನಾ ಡಿಸೋಜ
೮೧ ೨೦೧೫ ಶ್ರವಣಬೆಳಗೊಳ ಡಾ. ಸಿದ್ದಲಿಂಗಯ್ಯ

Tuesday 16 August 2016

ನನ್ನ ಟೀಚರ್ ಹೇಗಿರಬೇಕು ಗೊಯತ್ತಾ.

ನನ್ನ ಟೀಚರ್ ಹೇಗಿರಬೇಕು ಗೊತ್ತಾ..?

ಅರಿತೋ ಅರಿಯದೆಯೋ ನಾ ತಪ್ಪು ಮಾಡಿದರೂ ಸ್ನೇಹ ಪ್ರೀತಿಯಿಂದ  ತಿಳಿ ಹೇಳಿ ನನಗರಿತೋ ಅರಿಯದೆಯೋ  ನನ್ನೊಳಗಿರುವ ಒಂದಿಷ್ಟು ಪ್ರತಿಭೆಯನ್ನಾದರೂ ಹೆಕ್ಕಿ  ನನ್ನ ಆಸೆ ಕನಸುಗಳನ್ನು ಆಲಿಸಿ., ಆಸಕ್ತಿಗಳನ್ನೂ ಗಮನಿಸಿ ಹೆಚ್ಚು ಅವಕಾಶ ನೀಡಿ  ಪ್ರೋತ್ಸಾಹಿಸಬೇಕು.
ಅಂದಿನ ಪಾಠ ಅಂದು ಓದಿದರೂ ಸರಿ ಓದದಿದ್ದರೂ ಸರಿ,  ಅಂಕಪಟ್ಟಿ ತುಂಬಾ ಅತಿ ಹೆಚ್ಚು ಅಂಕ ಇದ್ದರೂ,  ಇರದಿದ್ದರೂ ಕಣ್ಣತುಂಬ ಕನಸು ಬಿತ್ತಿ ಬದುಕಿಗಾಗಿ ಸ್ಪಷ್ಟ ಗುರಿ ಬೆನ್ನತ್ತುವ ಕಾಯಕ ಕಲೆ  ಕರಗತಮಾಡಿಕೊಳ್ಳುವಂತೆ ಮಾಡಿದರೆ ಸಾಕು.ನನಗಾಗಿ ನಾನು ಭವಿಷ್ಯದ ಗುರಿ ಆಯ್ಕೆ ಮಾಡಿ ಮುನ್ನಡೆವ ಛಲಬಿತ್ತಿ ಉತ್ತಮ ಹವ್ಯಾಸಗಳನು ಮೈಗೂಡಿಸಿಕೊಳ್ಳುವಂತೆ ಮಾಡುವ  ಸೂಕ್ತ ಮಾರ್ಗದರ್ಶಕನಾಗಿರಬೇಕು. ಪರಿಶ್ರಮದ ದಾರಿಯಲ್ಲಿ  ಗುರಿಮುಟ್ಟುವವರೆಗೆ ಬಲತುಂಬುವ ತಂದೆ ತಾಯಿಯಂತಿರಬೇಕು. ಸಿಟ್ಟು ಸಿಡುಕತನವಿರದ ಶಾಂತ ಸ್ವರೂಪಿಯಾಗಿರಬೇಕು.ಜಾತಿ ,ಧರ್ಮದ ಅಂಧಾಬಿಮಾನದಿಂದ ಬೇಧಬಾವದಿಂದ ನೋಡದ ಮಾನವತಾವಾದಿಯಾಗಿರಬೇಕು.
ನನ್ನೊಳಗಿರುವ ಒಂದಿಷ್ಟು ಸೃಜನಶೀಲತೆಯನ್ನು  ಮುಕ್ತವಾಗಿ ಹೆಚ್ಚಿಸಿಕೊಳಲು  ನಮಗೆ ಸೂಕ್ತ ವೇದಿಕೆ ಕಲ್ಪಿಸುವ  ಆದರ್ಶಗುರುವಾಗಿರಬೇಕು. ಶಿಕ್ಷಕರು ಸ್ವತಹ ತಾವು ಅತ್ಯಂತ ಕ್ರಿಯಾಶೀಲರಾಗಿದ್ದು ಸದಾ ಉತ್ಸಾಹದಿಂದ ಚಟುವಟಿಕೆಯಿಂದ  ದೀಪದಂತೆ ಬೆಳಗುತ್ತಾ.   ನಮ್ಮನ್ನೂ ಜ್ಯೋತಿಯಂತೆ ಬೆಳಗಿಸಲು ಶ್ರಮಿಸುತ್ತಾ ಎಲ್ಲಾ ಮಕ್ಕಳ ಜೊತೆ ಬರೆಯಬೇಕು. ಅಗತ್ಯ ಬಿದ್ದರೆ ಸ್ವಲ್ಪ ಮಟ್ಟಿಗೆ ಮಾತಿನ ಪೆಟ್ಟು ನೀಡಲಿ , ಸ್ವಲ್ಪ ದೈಹಿಕ ದಂಡನೆಯನ್ನೂ ನೀಡಲಿ ಆದರೆ ಹೀಯಾಳಿಸಬಾರದು. ನನ್ನ ತಂದೆ ತಾಯಿಗೆ  ಸದಾ ನನ್ನ ಮೇಲೆ ಋಣಾತ್ಮಕ ಭಾವನೆ ಬರುವಂತೆ ನನ್ನ  ತಪ್ಪುಗಳನೆಲ್ಲಾ ಹೇಳಬಾರದು . ನನ್ನ ತಪ್ಪು ತಿದ್ದಿಕೊಳಲು ಉತ್ತಮ ಮಾರ್ಗದರ್ಶನ ನೀಡಬೇಕು.  ಅಂತಹ  ಸನ್ನಿವೇಶ ಸೃಷ್ಟಿಸಬೇಕು .
ಇಂದು  ನನಗಾಗಲಿ ನನ್ನ ಮಕ್ಕಳಿಗಾಗಲಿ ಅಂತಾ ಗುರುಗಳು ಸಿಕ್ಕಿರೂ ಕಲಿಸುವ ಮತ್ತು ಕಲಿಯುವವನ ನಡುವಿನ ವ್ಯವಸ್ಥೆ ನಮ್ಮಿಚ್ಚೆಯಂತೆ ಎಲ್ಲಾ ಕಲಿವ ಪ್ರಕ್ರಿಯೆ ಸರಾಗವಾಗಿ ನಡೆಯಲು ಪೂರಕವಾಗಿಲ್ಲ ಎನ್ನುವ  ವಿಪರ್ಯಾಸದೊಂದಿಗೆ ನನ್ನ ಅನಿಸಿಕೆಗೆ ಇಷ್ಟಕ್ಕೆ ಪೂರ್ಣ ವಿರಾಮ ಹಾಕುವೆ. #ರವಿರಾಜ್ ಸಾಗರ್.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...