ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 6 October 2017

ಒಂದು ಜಾನಪದ

🌸🌹ಕುದುರೇನ ತಂದೀವ್ನಿ🌹🌸

**********************************
-ಜಾನಪದ ಸಂಗ್ರಹ
**********************************

ಕುದುರೇನ ತಂದೀವ್ನಿ ಜೀನಾವ ಬಿಗ್ಸಿವ್ನಿ
ಬರಬೇಕು ತಂಗಿ ಮದುವೇಗೆ ll

ಅಂಗ್ಳ ಗುಡಿಸೋರಿಲ್ಲ ಗಂಗ್ಳ ತೊಳೆಯೋರಿಲ್ಲ
ಹೆಂಗೆ ಬರಲಣ್ಣ ಮದುವೇಗೆ ?
ಅಂಗ್ಳಾಕೆ ಆಳಿಡುವೆ ಗಂಗ್ಳಾಕೆ ತುತ್ತಿಡುವೆ
ಬರಬೇಕು ತಂಗಿ ಮದುವೇಗೆll ಕುll

ಮಳೆಯಾರ ಬಂದೀತು ಹೊಳೆಯಾರ ತುಂಬೀತು
ಹೆಂಗೆ ಬರಲಣ್ಣ ಮದುವೇಗೆ?
ಚಿನ್ನಾದ ಹರಿಗೋಲ್ಗೆ ರನ್ನಾದ ಹುಟ್ಟಾಕಿ
ಜೋಕೇಲಿ ನಿನ್ನ ಕರೆದೊಯ್ವೆ llಕುll

ಅಪ್ಪ ಇದ್ದರೆ ಎನ್ನ ಸುಮ್ಮಾನೆ ಕಳುವೋರೆ
ಅಮ್ಮ ಇಲ್ಲದಾ ಮನೆಯಲ್ಲಿ
ಬಂದಾರೆ ಬಂದೇನು ಅಂಗ್ಳದಾಗೆ ನಿಂದೇನು
ಕಣ್ಣಾಗೆ ಧಾರೆ ಎರೆದೇನು llಕುll

::::::::::::::::::::::::::::::::::::::::::::::::::::::::::::

Thursday 5 October 2017

ಇತಿಹಾಸದ ಪ್ರಮುಖ ಇಸವಿಗಳು.


ಕಾಲಾನುಕ್ರಮಣಿಕೆ

*ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.*
*ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.*
*ಕ್ರಿ.ಪೂ.1000 ಕಬ್ಬಿಣದ ಬಳಕೆ.*
*ಕ್ರಿ.ಪೂ.1000-500 ವೇದಗಳ ಕಾಲ*
*ಕ್ರಿ.ಪೂ.563-483 ಗೌತಮ ಬುದ್ಧನ ಕಾಲ*
*ಕ್ರಿ.ಪೂ.540-468 ಮಹಾವೀರನ ಕಾಲ*
*ಕ್ರಿ.ಪೂ.542-490 ಹರ್ಯಂಕ ಸಂತತಿ*
*ಕ್ರಿ.ಪೂ.413-362 ಶಿಶುನಾಗ ಸಂತತಿ.*
*ಕ್ರಿ.ಪೂ.362-324 ನಂದ ಸಂತತಿ.*
*ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ*
*ಕ್ರಿ.ಪೂ.324-183 ಮೌರ್ಯ ಸಂತತಿ.*
*ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ*
*ಕ್ರಿ.ಪೂ.298-273 ಬಿಂದುಸಾರನ ಕಾಲ.*
*ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.*
*ಕ್ರಿ.ಪೂ.185-147 ಶುಂಗ ಸಂತತಿ.*
*ಕ್ರಿ.ಪೂ.73-28 ಕಣ್ವರ ಆಳ್ವಿಕೆ.*
*ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.*
*ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.*
*ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)*

*ಕ್ರಿ.ಶ.78-101 ಕಾನಿಷ್ಕನ ಕಾಲ.*
*ಕ್ರಿ.ಶ.78 ಶಕ ಸಂವತ್ಸರ*
*ಕ್ರಿ.ಶ.320-540 ಗುಪ್ತ ಸಾಮ್ರಜ್ಯ.*
*ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.*
*ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.*
*ಕ್ರಿ.ಶ.535-757 ಬದಾಮಿಯ ಚಾಲುಕ್ಯರು.*
*ಕ್ರಿ.ಶ.300-888 ಕಂಚಿಯ ಪಲ್ಲವರು.*
*ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.*
*ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.*
*ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.*
*ಕ್ರಿ.ಶ.814-878 ಅಮೋಘವರ್ಷ ನೃಪತುಂಗ.* *ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.*
*ಕ್ರಿ.ಶ.760-1142 ಬಂಗಾಳದ ಪಾಲರು.*
*ಕ್ರಿ.ಶ.800-1036 ಕನೌಜಿನ ಪ್ರತಿಹಾರರು*
*ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.*
*ಕ್ರಿ.ಶ.907-1256 ಚೋಳ ಸಾಮ್ರಾಜ್ಯ.*
*ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.*
*ಕ್ರಿ.ಶ.974-1233 ಮಾಳ್ವದ ಪಾರಮಾರರು.*
*ಕ್ರಿ.ಶ. 1118-1190 ಬಂಗಾಳದ ಸೇನರು.*
*ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.*
*ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.*
*ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.*

*ಕ್ರಿ.ಶ.1290-1320  ಖಿಲ್ಜಿ ಸಂತತಿ.*
*ಕ್ರಿ.ಶ.1320-1414 ತುಘಲಕ್ ಸಂತತಿ.*
*ಕ್ರಿ.ಶ.1414-1451 ಸೈಯದ್ ಸಂತತಿ.*
*ಕ್ರಿ.ಶ. 1451-1525 ಲೂಧಿ ಸಂತತಿ.*
*ಕ್ರಿ.ಶ.1336-1649 ವಿಜಯನಗರದ ಆಳ್ವಕೆ.*
*ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.*
*ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ*. *ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.*
*ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.*
*ಕ್ರಿ.ಶ.1627-1680 ಶಿವಾಜಿಯ ಕಾಲ.*
*ಕ್ರಿ.ಶ.1757 ಪ್ಲಾಸಿ ಕದನ.*
*ಕ್ರಿ.ಶ.1764 ಬಕ್ಸಾರ ಕದನ.*
*ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.*
*ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.*
*ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.*
*ಕ್ರಿ.ಶ.1824-ಕಿತ್ತೂರು ದಂಗೆ.*
*ಕ್ರಿ.ಶ.1857 ಸಿಪಾಯಿ ದಂಗೆ.*
*ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.*
*ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.*
*1905- ಬಂಗಾಳ ವಿಭಜನೆ.*

*🔶1906-ಮುಸ್ಲಿಂ ಲೀಗ್ ಸ್ಥಾಪನೆ.*
*🔶1907- ಸೂರತ್ ಅಧಿವೇಶನ/ಸೂರತ್ ಒಡಕು*
*🔶1909- ಮಿಂಟೋ ಮಾಲ್ರೇ ಸುಧಾರಣೆ.*
*🔶1911- ಕಲ್ಕತ್ತಾ ಅಧಿವೇಶನ.*
*🔶1913 -ಗದ್ದಾರ್ ಪಕ್ಷ ಸ್ಥಾಪನೆ.*
*🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.*
*🔶1916 -ಲಕ್ನೋ ಅಧಿವೇಶನ.*
*🔶1917 -ಚಂಪಾರಣ್ಯ ಸತ್ಯಾಗ್ರಹ*
*🔶1918 -ಹತ್ತಿ ಗಿರಣಿ ಸತ್ಯಾಗ್ರಹ'*
*🔶1919 -ರೌಲತ್ ಕಾಯಿದೆ.*
*🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.*
*🔶1920 -ಖಿಲಾಪತ್ ಚಳುವಳಿ.*
*🔶1922 -ಚೌರಾಚೌರಿ ಘಟನೆ.*
*🔶1923 -ಸ್ವರಾಜ್ ಪಕ್ಷ ಸ್ಥಾಪನೆ.*
*🔶1927-ಸೈಮನ್ ಆಯೋಗ.*
*🔶1928- ನೆಹರು ವರದಿ.*
*🔶1929- ಬಾ‌ಡ್ರೋಲೀ ಸತ್ಯಾಗ್ರಹ.*
*🔶1930 -ಕಾನೂನ ಭಂಗ ಚಳುವಳಿ.*
*🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.*
*🔶1937 -ಪ್ರಾಂತೀಯ ಚುಣಾವಣೆ*
*🔶1939 -ತ್ರೀಪುರಾ ಬಿಕ್ಕಟ್ಟು.*
*🔶1940 -ಅಗಷ್ಟ ಕೊಡುಗೆ.*
*🔶1942 -ಕ್ರಿಪ್ಸ ಆಯೋಗ*
*🔶1945 -ಸಿಮ್ಲಾ ಸಮ್ಮೇಳನ*
*🔶1946- ಕ್ಯಾಬಿನೆಟ್ ಆಯೋಗ*
*🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.*
*⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ...*
*⭐1973-ಕರ್ನಾಟಕ ಮರುನಾಮಕರಣ.*

Sunday 10 September 2017

ಸರ್ಕಾರಿ ನೌಕರರ ಕುರಿತು ಮಹತ್ವದ ವಿಷಯಗಳು

ಸರ್ಕಾರಿ ನೌಕರರ ಕುರಿತಾದ ಕೆಲವು ಮಹತ್ವದ ಮಾಹಿತಿಗಳು

‬: ಬಹು ಪತ್ನಿತ್ವ ಪ್ರಕರಣದಲ್ಲಿ ದುರ್ನಡತೆ ಎಂದು ನೌಕರನ ಮೇಲೆ ಇಲಾಖಾ ವಿಚಾರಣೆ ಮಾಡುವಂತಿಲ್ಲ.
ILR-2007-KAR-3243
HC ಕರ್ನಾಟಕ W.P.NO 4133/2012 [ [GM-RES] 27/05/2013 ತೀರ್ಪು ಪ್ರಕಾರ ಕಡತಗಳಲ್ಲಿ ಲಭ್ಯವಿರುವ ಮಾಹಿತಿ ಮಾತ್ರ ಮಾಹಿತಿ ಹಕ್ಕಿನಲ್ಲಿ ಪಡೆಯಬಹುದು.
ಮಾಹಿತಿ ಹಕ್ಕು ಅಡಿ ಸರಕಾರೀ ನೌಕರರ ಮೇಲಿನ ಶಿಸ್ತು ಪ್ರಕರಣಗಳ ಮಾಹಿತಿಯನ್ನು ನೀಡಲು SC SLP [CIVIL] NO 27734 /2012 3/10/2012 ಅವಕಾಶವಿಲ್ಲ
ಸರಕಾರಿ ನೌಕರರ ಸೇವಾ ಪುಸ್ತಕವನ್ನು ಮಾಹಿತಿ ಹಕ್ಕು ಅರ್ಜಿಗೆ  ಬಹಿರಂಗ ಮಾಡುವಂತಿಲ್ಲ.KIC/13045/PTN/
2010--9/8/2010
ಮಾಹಿತಿ ಹಕ್ಕು ಅಡಿ ಒಂದು ವಿಷಯಕ್ಕೆ ಸಂಬಂಧಿಸಿ ಒಂದು ಅರ್ಜಿಯಲ್ಲಿ  ಮಾಹಿತಿ ಕೇಳಬಹುದು.. 
DPAR/14/RTI/2008-- 17/03/2008
ಸರಕಾರೀ ನೌಕರರ ಸೇವಾ ವಿವರಗಳನ್ನು ಮತ್ತು ಕುಟುಂಬ ಸದಸ್ಯರ ವಿವರಗಳನ್ನು ಮಾಹಿತಿ ಹಕ್ಕು ಕಲಂ ೮[೧]ಜೆ  ಪ್ರಕಾರ ಕೇಳಲು ಬರುವುದಿಲ್ಲ. KIC 66 APL 2006
‬: ಪತ್ರಿಕೆ ವರದಿ ಆಧರಿಸಿ ವಿಚಾರಣೆ ಅಧಿಕಾರಿಗಳು ಆಪಾದಿತ ನೌಕರನ ಮೇಲಿನ ಆರೋಪದ ಬಗ್ಗೆ ತೀರ್ಪು  ಬರೆಯುವ ಹಾಗಿಲ್ಲ 
AIR 1999 SC 3571 suprem court

[ ಬಹು ಪತ್ನಿತ್ವ ಪ್ರಕರಣದಲ್ಲಿ ದುರ್ನಡತೆ ಎಂದು ನೌಕರನ ಮೇಲೆ ಇಲಾಖಾ ವಿಚಾರಣೆ ಮಾಡುವಂತಿಲ್ಲ.
ILR-2007-KAR-3243
‬: HC ಕರ್ನಾಟಕ W.P.NO 4133/2012 [ [GM-RES] 27/05/2013 ತೀರ್ಪು ಪ್ರಕಾರ ಕಡತಗಳಲ್ಲಿ ಲಭ್ಯವಿರುವ ಮಾಹಿತಿ ಮಾತ್ರ ಮಾಹಿತಿ ಹಕ್ಕಿನಲ್ಲಿ ಪಡೆಯಬಹುದು.
ಮಾಹಿತಿ ಹಕ್ಕು ಅಡಿ ಸರಕಾರೀ ನೌಕರರ ಮೇಲಿನ ಶಿಸ್ತು ಪ್ರಕರಣಗಳ ಮಾಹಿತಿಯನ್ನು ನೀಡಲು SC SLP [CIVIL] NO 27734 /2012 3/10/2012 ಅವಕಾಶವಿಲ್ಲ
ಸರಕಾರಿ ನೌಕರರ ಸೇವಾ ಪುಸ್ತಕವನ್ನು ಮಾಹಿತಿ ಹಕ್ಕು ಅರ್ಜಿಗೆ  ಬಹಿರಂಗ ಮಾಡುವಂತಿಲ್ಲ.KIC/13045/PTN/
2010--9/8/2010
ಮಾಹಿತಿ ಹಕ್ಕು ಅಡಿ ಒಂದು ವಿಷಯಕ್ಕೆ ಸಂಬಂಧಿಸಿ ಒಂದು ಅರ್ಜಿಯಲ್ಲಿ  ಮಾಹಿತಿ ಕೇಳಬಹುದು.. 
DPAR/14/RTI/2008-- 17/03/2008
: ಸರಕಾರೀ ನೌಕರರ ಸೇವಾ ವಿವರಗಳನ್ನು ಮತ್ತು ಕುಟುಂಬ ಸದಸ್ಯರ ವಿವರಗಳನ್ನು ಮಾಹಿತಿ ಹಕ್ಕು ಕಲಂ ೮[೧]ಜೆ  ಪ್ರಕಾರ ಕೇಳಲು ಬರುವುದಿಲ್ಲ. KIC 66 APL 2006
‬: ಪತ್ರಿಕೆ ವರದಿ ಆಧರಿಸಿ ವಿಚಾರಣೆ ಅಧಿಕಾರಿಗಳು ಆಪಾದಿತ ನೌಕರನ ಮೇಲಿನ ಆರೋಪದ ಬಗ್ಗೆ ತೀರ್ಪು  ಬರೆಯುವ ಹಾಗಿಲ್ಲ 
AIR 1999 SC 3571 suprem court

Saturday 5 August 2017

ಎಲ್ಲದಕ್ಕೂ ರಾಜಕಾರಣಿಗಳೇ ಹೊಣೆಯೇ....

ಈ ವ್ಯವಸ್ಥೆಯ ಬಗ್ಗೆ  ಧನಿ ಎತ್ತಬೇಕಾದ ಚಿಂತಕರು ಬುದ್ಧಿಜೀವಿಗಳನ್ನು ಅಕಾಡೆಮಿಗಳ ಹುದ್ದೆಗಳಲ್ಲಿ ಬಂಧಿತರಾಗಿದ್ದರೆ..ಕೆಲವರು ಕೆಲವೇ ಸಿದ್ದಾಂತಗಳಿಗೆ ಅಂಟಿಕೊಂಡಿದ್ದಾರೆ... ಸಾಮಾನ್ಯರಿಗೆ ಈಗೀಗ ಸರಕಾರಿ ಸವಲತ್ತು ಕೊಡಿಸುವ ರಾಜಕಾರಣಿಗಳ ಸುತ್ತ ಸುತ್ತುವ ಅನಿವಾರ್ಯ. ಇನ್ನು ನೌಕರರಿಗೆ ತಿಂಗಳ ಸಂಬಳ ಹೆಚ್ಚಾದರೆ ಸಾಕು... ಎಲ್ಲ ಅಭಿವೃದ್ಧಿ  ಅಥವಾ ಸಮಸ್ಯೆಗೆ ಮುಖ್ಯಮಂತ್ರಿ ಅತ್ವಾ ಪ್ರಧಾನ ಮಂತ್ರಿ ಪರಿಹಾರ ಕೊಡಲು ಸಾಧ್ಯವಿಲ್ಲ... ಅತ್ವಾ ಅಧಿಕಾರದಲ್ಲಿದ್ದವರೆ ಎಲ್ಲದಕ್ಕೂ ಹೊಣೆಗಾರರಲ್ಲ. ಎಲ್ಲರೂ ಬದಲಾವಣೆಗೆ ಸ್ಪಂದಿಸಬೇಕು...ಹಕ್ಕಿನ ಜೊತೆಗೆ ಕರ್ತ್ಯವ್ಯ ನಿಭಾಯಿಸಬೇಕು...
         ಮೋದಿ. ನೇಹರು ,ಇಂದಿರಾಗಾಂಧಿ  ಎಲ್ಲರೂ ಅವರವರ ಶ್ರಮ ದೇಶಕ್ಕೆ ನೀಡಿದ್ದಾರೆ...  ಶ್ರಮ ಸಾಮಾನ್ಯರು  ಟೀಕಿಸುವಷ್ಟು ಕೆಳಮಟ್ಟದ್ದಲ್ಲ. ಎಲ್ಲ ಪ್ರಧಾನಿಗಳು ನಮ್ಮ ದೇಶದ ಏಳಿಗೆಗೆ ಒಂದಿಷ್ಟು ಶ್ರಮಿಸಿದ್ದಾರೆ... ಅವರವರ ರಾಜಕೀಯ ಭವಿಷ್ಯದ ಜೊತೆಗೆ ನಡೆದಿದ್ದಾರೆ... ಗಾಂಧಿಜಿಯಂತಹವರನ್ನು ಟೀಕಿಸುವ ಗುಂಪುಗಳಿವೆ.... ರಾಮನಲ್ಲೂ ದೋಷ ಹುಡುಕುವವರಿದ್ದಾರೆ..ಹೀಗಿರಲು ಸಾಮಾನ್ಯರು ಮತ್ತು ಅಸಮಾನ್ಯರು... ಅಧಿಕಾರಿಗಳು ಮತ್ತು ಆಡಳಿತ ಶಾಹಿಗಳು ಯಾರದು ಸರಿ ಯಾರದು ತಪ್ಪು...

Monday 31 July 2017

ಶಿಕ್ಷಣ ಇಲಾಖೆಯ ಸಂಪರ್ಕಕ್ಕೆ ದೂರವಾಣಿ ಕರೆ ಮಾಹಿತಿ


ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ಹೆಸರು ಮತ್ತು ಪದನಾಮ ಸಂಪರ್ಕ ಸಂಖ್ಯೆ ಮತ್ತು ಇ-ಮೇಲ್ ವಿಳಾಸ
01
ಶ್ರೀಮತಿ ಸೌಜನ್ಯ., ಭಾ.ಆ.ಸೇ.,
ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ,
ನೃಪತುಂಗ ರಸ್ತೆ, ಬೆಂಗಳೂರು.
ದೂರವಾಣಿ: +91-080-22214350.
ಫ್ಯಾಕ್ಷ್ : +91-080-22212137.
ಇ-ಮೇಲ್ : cpi.edu.sgkar@kar.nic.in
02
ಶ್ರೀ ವೀರಣ್ಣ ಜಿ.ತುರಮರಿ., ಕ.ಆ.ಸೇ.,
ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಧಾರವಾಡ.
ದೂರವಾಣಿ: +91-0836-2217062.
ಫ್ಯಾಕ್ಷ್ : +91-0836-2217067.
ಇ-ಮೇಲ್ : cpi.edu.kardwd@nic.in
03
ಶ್ರೀ ರಾಧಾಕೃಷ್ಣರಾವ್ ಮದನಕರ್., ಕ.ಆ.ಸೇ.,
ಅಪರ ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಕಲಬುರಗಿ.
ದೂರವಾಣಿ: +91-08472-266963.
ಫ್ಯಾಕ್ಷ್ : +91-08472-255172.
ಇ-ಮೇಲ್ : cpi.edu.karglb@nic.in
04
ಶ್ರೀಮತಿ ಎಸ್.ಕಾತ್ಯಾಯನಿ ದೇವಿ, ಕ.ಆ.ಸೇ.,
ಜಂಟಿ ನಿರ್ದೇಶಕರು(ಆಡಳಿತ)
ದೂರವಾಣಿ:+91-080-22213129.
ಫ್ಯಾಕ್ಷ್ : +91-080-22211086.
ಇ-ಮೇಲ್ : jdadmin.edu.sgkar@kar.nic.in
05
ಸಾರ್ವಜನಿಕ ಸಂಪರ್ಕಾಧಿಕಾರಿ
ದೂರವಾಣಿ:+91-080-22484716.
ಫ್ಯಾಕ್ಷ್ : +91-080-22211086.
ಇ-ಮೇಲ್ : cpipro.edu.sgkar@kar.nic.in
ಕೇಂದ್ರೀಕೃತ ದಾಖಲಾತಿ ಘಟಕದ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ಬಿ.ಇಡಿ., ಡಿ.ಇಡಿ. ಕೌನ್ಸಿಲಿಂಗ್ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ನೇಮಕಾತಿ ಕೌನ್ಸಿಲಿಂಗ್ ಇತ್ಯಾದಿ
06
ಶ್ರೀ ಡಿ.ಕೆ.ಶಿವಕುಮಾರ್,
ವಿಶೇಷಾಧಿಕಾರಿಗಳು ಹಾಗೂ ಸಹನಿರ್ದೇಶಕರು
ಕೇಂದ್ರೀಕೃತ ದಾಖಲಾತಿ ಘಟಕ[CAC]
ದೂರವಾಣಿ: +91-080-22228805, 22271866, 22483145.
ಮೊಬೈಲ್ : +91-9449823723.
ಇ-ಮೇಲ್ : cackarnataka@gmail.com
07
ಶ್ರೀ ಕೆ.ರತ್ನಯ್ಯ
ಉಪನಿರ್ದೇಶಕರು
ಕೇಂದ್ರೀಕೃತ ದಾಖಲಾತಿ ಘಟಕ[CAC]
ದೂರವಾಣಿ: +91-080-22228805, 22271866, 22483145.
ಮೊಬೈಲ್: +91-9483522744.
ಇ-ಮೇಲ್ : cackarnataka@gmail.com
ಪ್ರಾಥಮಿಕ ಶಿಕ್ಷಣ ನಿರ್ದೇಶನಾಲಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ನೇಮಕಾತಿ, ವರ್ಗಾವಣೆ ಇತ್ಯಾಧಿ.
08
ಶ್ರೀ ಕೆ.ಆನಂದ,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರಾಥಮಿಕ ಶಿಕ್ಷಣ
ದೂರವಾಣಿ: +91-080-22210117
ಮೊಬೈಲ್: +91-9448999411.
ಇ-ಮೇಲ್ : prydirector.edu.sgkar@nic.in
09
ಶ್ರೀ ಹಸನ್ ಮೊಹಿದ್ದೀನ್,
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರಾಥಮಿಕ ಶಿಕ್ಷಣ
Phone: +91-080-22215219
ಇ-ಮೇಲ್ : ddpiprimary.edu.sgkar@nic.in
ಪ್ರೌಢ ಶಿಕ್ಷಣ ನಿರ್ದೇಶನಾಲಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ನೇಮಕಾತಿ, ವರ್ಗಾವಣೆ ಇತ್ಯಾಧಿ.
10
ಶ್ರೀಮತಿ ಫಿಲೋಮಿನಾ ಲೋಬೋ.,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರೌಢ ಶಿಕ್ಷಣ
ದೂರವಾಣಿ: +91-080-22212873
ಮೊಬೈಲ್: +91-9448999421.
ಇ-ಮೇಲ್ : secdirector.edu.sgkar@nic.in
11
ಶ್ರೀ ಹೆಚ್.ಕೆ.ಲಿಂಗರಾಜು,
ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಪ್ರೌಢ ಶಿಕ್ಷಣ
ದೂರವಾಣಿ: +91-080-22246976
ಮೊಬೈಲ್: ddpisecondary.edu.sgkar@nic.in
ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯದ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ಮಾಹಿತಿ - ನೇಮಕಾತಿ, ವರ್ಗಾವಣೆ ಇತ್ಯಾಧಿ.
12
ಶ್ರೀಮತಿ ಜೋಹರ್ ಜಬೀನ್,
ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ,
ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ,
ದೂರವಾಣಿ: +91-080-22213766 ಫ್ಯಾಕ್ಷ್ :+91-22238718
ಮೊಬೈಲ್: +91-9448999442.
ಇ-ಮೇಲ್ : mindirector.edu.sgkar@nic.in
13
ಶ್ರೀ ಗಂಗಾಧರ್,
ಮುಖ್ಯ ಲೆಕ್ಕಾಧಿಕಾರಿಗಳು,
ದೂರವಾಣಿ: +91-080-22214352
ಇ-ಮೇಲ್ : cao.edu.karbng@nic.in
14
ಶ್ರೀ ಕಮಲಾಕರ ಟಿ ಎನ್
ಹಿರಿಯ ಸಹಾಯಕ ನಿರ್ದೇಶಕರು,
ಸಿಬ್ಬಂದಿ ಶಾಖೆ(ಅಧಿಕಾರಿಗಳು)
ದೂರವಾಣಿ: +91-080-22246975
ಇ-ಮೇಲ್ : soest1.edu.sgkar@nic.in
r

Sunday 23 July 2017

ಪುಸ್ತಕ ಪ್ರಕಟಣೆಗೆ ಮುಂದಾಗುವ ಮುನ್ನ ಗಮನಿಸಿ....

ಪುಸ್ತಕ ಪ್ರಕಟಣೆ : ಒಂದು ಸಲಹೆ
ನೀವು ಬರಹಗಾರರಾಗಿದ್ದು  ಹೊಸ ಪುಸ್ತಕವನ್ನು ನೀವೇ  ಪ್ರಕಟಿಸಬೇಕೇ ? ಇಲ್ಲಿ ಗಮನಿಸಿ :
* ಒಳ್ಳೆಯ ಬರಹಗಳನ್ನು ಆಯ್ದು ಗೆಳೆಯರಿಂದ- ಹಿರಿಯರಿಂದ ಓದಿಸಿ ಅಥವಾ ನೀವೇ ಒಂದು ಬಿಡುವಾದ ಸಮಯದಲ್ಲಿ ಓದಿ. ನಂತರ  ಮತ್ತೆ ಅವುಗಳಲ್ಲಿ ಸೂಕ್ತವೆನಿಸಿದ ಒಂದಷ್ಟು ಬರಹಗಳನ್ನು ಆಯ್ದು ವರ್ಗೀಕರಣ ಮಾಡಿಕೊಳ್ಳಿ.
ಉದಾ : ಕವಿತೆ/ಕಥೆಗಳು ಆದರೆ ಒಂದಾದಮೇಲೆ ಮತ್ತೊಂದು ಯಾವ ಕವಿತೆ /ಕಥೆ ಬರಬೇಕೆಂದು ಅನಿಸಿದೆಯೋ ಹಾಗೆ.
ಇತರ ಬರಹಗಳು ಆದರೆ ನಿಮಗೆ ಸೂಕ್ತವೆನಿಸಿದ ಅನುಕ್ರಮದಲ್ಲಿ ಬರಹಗಳನ್ನು ಸಿದ್ದಪಡಿಸಿಕೊಳ್ಳಿ. 
* ಡಿಜಿಟಲ್ ಪ್ರಿಂಟಿಂಗ್ ಇರುವ ಕಾರಣ ಎಲ್ಲವೂ ಈಗ ಕಂಪ್ಯೂಟರ್ ಮಯ. ಹಾಗಾಗಿ
ನಿಮ್ಮ ಬರಹಗಳನ್ನು  ಬಿಡುವಾದಾಗ ಟೈಪ್ ಮಾಡಿ ಅನುಕ್ರಮವಾಗಿ ಒಂದು ಫೈಲ್ ಮಾಡಿಟ್ಟುಕೊಳ್ಳಿ. ಹೀಗೆ ಟೈಪ್ ಮಾಡುವಾಗ ನುಡಿ -ಶ್ರೀಲಿಪಿ - ಬರಹಗಳನ್ನೇ ಹೆಚ್ಚು ಬಳಸಿ ಸಾಧ್ಯವಾಗದೇ ಇದ್ದಲ್ಲಿ ಯುನಿಕೋಡ್ ನಲ್ಲೇ  ( ಸಾಮಾನ್ಯವಾಗಿ ನಾವು ಬಳಸುವ ಗೂಗುಲ್ ಕನ್ನಡ ಟೈಪ್ ಮತ್ತು ಮೊಬೈಲ್ ನ ಜಸ್ಟ್ ಕನ್ನಡ ಟೈಪ್ ಗಳು ) ಟೈಪಿಸಿಕೊಳ್ಳಿ. ಆಮೇಲೆ ಅದನ್ನು ASCI ಆಗಿ ಕನ್ವರ್ಟ್ ಮಾಡಿಕೊಳ್ಳಬೇಕು. 
* ನಿಮಗೆ Page Layout ಮಾಡಲು ಬಂದ್ರೆ ನಿಮಗೆ ಇಷ್ಟವಾದ ವಿನ್ಯಾಸದಲ್ಲಿ Pagemaker, Indesign ಸಾಫ್ಟ್ವೇರ್ ಗಳಲ್ಲಿ  ಪುಟವಿನ್ಯಾಸ ಮಾಡಿ.  ಮಧ್ಯೆ ಮಧ್ಯೆ ನಿಮಗೆ ಬೇಕಾದ ರೇಖಾಚಿತ್ರಗಳನ್ನು ಕಲಾವಿದರಿಂದ ಬರೆಸಿಕೊಂಡು ಬಳಸಿಕೊಳ್ಳಿ. ಇಂಟರ್ನೆಟ್ ಚಿತ್ರಗಳನ್ನು ಬಳಸಿಕೊಳ್ಳುವಾಗ ಕಾಪಿ ರೈಟ್ ಇದೆಯೇ ಗಮನಿಸಿ. ಇದ್ದಲ್ಲಿ ಅಂತಹ ಚಿತ್ರವನ್ನೂ ಬಳಸಬೇಡಿರಿ. ಇಲ್ಲವಾದಲ್ಲಿ ಆರಾಮಾಗಿ ಬಳಸಿ ಮತ್ತು ಚಿತ್ರದ ಮೂಲವನ್ನು  ಪುಟದ ಕಡೆಯಲ್ಲೊ, ಪುಸ್ತಕದ ಕಡೆಯಲ್ಲೊ  ಹೆಸರಿಸಿ.   ನಿಮಗೆ ಸಾಧ್ಯವಿಲ್ಲ ಎಂದಾದರೆ DTP, ಗ್ರಾಫಿಕ್ಸ್ ಗಳು ಬೇಕಾದಷ್ಟಿವೆ. ಕನಿಷ್ಠ ಒಂದು ಪುಟಕ್ಕೆ 10 ರೂಪಾಯಿಯಂತೆ ನಿಮಗೆ ಪುಟವಿನ್ಯಾಸ ಮಾಡಿಕೊಡುತ್ತಾರೆ. ವಿನ್ಯಾಸ ಮುಗಿದ ನಂತರ Printout  ತೆಗೆಸಿಕೊಂಡು ಒಮ್ಮೆ Proof ನೋಡಿಕೊಂಡು ಬಿಡಿ. ಅಕ್ಷರ, ವ್ಯಾಕರಣ ದೋಷಗಳು ಇದ್ದಲ್ಲಿ ತಿದ್ದಿಸಿ.   
* ಮುನ್ನುಡಿ ಬೆನ್ನುಡಿಗಳನ್ನು ಬರೆಸುವುದಿದ್ದರೆ  1-2 ತಿಂಗಳು ಮುಂಚಿತವಾಗಿಯೇ ಬರೆಯುವವರಲ್ಲಿ ನಿಮ್ಮ ಬರಹದ ಪ್ರತಿಗಳನ್ನು ನೀಡಿರಿ.
* 1/8 ಕ್ರೌನ್ , 1/8 ಡೆಮಿ , 1/9 ಡೆಮಿ , 1/6 ಡೆಮಿ ಮುಂತಾದ ಪುಸ್ತಕದ ಗಾತ್ರಗಳಿವೆ. ನಿಮಗೆ ಬೇಕಾದ ಗಾತ್ರವನ್ನು ನಿರ್ಧರಿಸಿ ಮತ್ತು  ಕೆಲವು ವಿಶೇಷ ಗಾತ್ರಗಳಿಗೆ ಕಾಗದ ಸುಮ್ಮನೆ ಕತ್ತರಿಸಿ ಹಾಳಾಗುತ್ತದೆ. ಅದನ್ನು ಅದಷ್ಟೂ ತಡೆಗಟ್ಟಿ.
* ನಿಮ್ಮ ಬರಹಗಳಿಗೆ ತಕ್ಕ ಮುಖಪುಟ ವಿನ್ಯಾಸವನ್ನು ಮಾಡಿಸಿಕೊಳ್ಳಿ. ತುಂಬಾ ಚೆನ್ನ್ಗಿ ವಿನ್ಯಾಸ ಮಾಡುವ ಕಲಾವಿದರು ನಮ್ಮಲಿ ಸಿಗುತ್ತಾರೆ. ಕನಿಷ್ಠ ರೂ.2000ಕ್ಕೆಲ್ಲಾ ಒಳ್ಳೆಯ ವಿನ್ಯಾಸ ನಿಮಗೆ ಸಿಗುತ್ತದೆ. ಅಥವಾ ನೀವೇ ಬಣ್ಣ ಕಾಗದ ಇತ್ಯಾದಿಗಳ ಕೋಲಾಜ್ ಮಾಡಿ ಸಿದ್ದಪಡಿಸಿ ಅದನ್ನು ಗ್ರಾಫಿಕ್ಸ್ ನವರಲ್ಲಿ ಕೊಟ್ಟು ನಿಮ್ಮ ಪುಸ್ತಕದ ಅಳತೆಗಿಂತ ಅರ್ಧ ಸೆಮಿ ಹೆಚ್ಚಾಗಿಯೇ PSD ಫೋಟೋಶಾಪ್ ಫೈಲ್ ಮಾಡಿಸಿಕೊಳ್ಳಿ
* ಮುಖಪುಟ-ಒಳಪುಟ ವಿನ್ಯಾಸ ಮತ್ತು ಬರಹಗಳು ಒಂದಕ್ಕೊಂದು ಪೂರಕವಾಗಿಯೇ ಇರುವಂತೆ ನೋಡಿಕೊಳ್ಳಿ. ಇಲ್ಲವಾದರೆ ಎಲ್ಲವೂ ಏನೇನೋ ಹೇಳುತ್ತಾ ಆಭಾಸವಾಗಿಬಿಡುವ ಸಾಧ್ಯತೆಗಳಿವೆ.
*  ಸಿದ್ದವಾದ ಮುಖಪುಟದ PSD ಫೈಲ್ ಮತ್ತು ಬರಹಗಳ ಒಳಪುಟವಿನ್ಯಾಸವನ್ನು PDF ಫೈಲ್ ಮಾಡಿಕೊಂಡು ಬದ್ದತೆಯುಳ್ಳ ಒಳ್ಳೆ ಮುದ್ರಕರನ್ನು ಭೇಟಿಯಾಗಿ ದರವನ್ನು ಕುರಿತು ಚರ್ಚಿಸಿ.
* ಪುಸ್ತಕ ಮುದ್ರಣಕ್ಕೆ ಒಳ್ಳೆಯ ಗುಣಮಟ್ಟವನ್ನೇ ಆರಿಸಿ.
ಉದಾ: 70 GSM Maplitho ಕಾಗದ, ಮ್ಯಾಟ್ ಫಿನಿಷಿಂಗ್ ಇರುವ Multicolor  ಮುಖಪುಟವನ್ನು ಮಾಡಿಸಿಕೊಳ್ಳಿ. ಅಗತ್ಯ ಬಿದ್ದರೆ ಇನ್ನೂ ಹೆಚ್ಚಿನ ಗುಣಮಟ್ಟದ ಕಾಗದಕ್ಕೆ ಹೋಗಬಹುದು ಆದರೆ ಖರ್ಚು ಜಾಸ್ತಿಯಾಗುತ್ತದೆ.
ಕೆಳಗಿನದರದಲ್ಲಿ ಚೂರು ಹೆಚ್ಚು ಕಡಿಮೆಯಾಗಬಹುದು
70 GSM Maplitho - 4 color - 98/108 page - 1/8 ಕ್ರೌನ್ = ಕನಿಷ್ಠ ದರ ರೂ.18000
70 GSM Maplitho - 4 color - 98/108 page - 1/8 ಡೆಮಿ  = ಕನಿಷ್ಠ ದರ ರೂ.25000
70 GSM Maplitho - 4 color - 98/108 page - 1/9 ಡೆಮಿ  = ಕನಿಷ್ಠ ದರ ರೂ.23000
70 GSM Maplitho - 4 color - 98/108 page - 1/6 ಡೆಮಿ  = ಕನಿಷ್ಠ ದರ ರೂ.30000
* ಮುದ್ರಣಕ್ಕೆ ಕೊಟ್ಟ ಮೇಲೆ ಪೂರ್ಣಹಣವನ್ನು ಮುದ್ರಕರಿಗೆ ಪಾವತಿಸಿ. ಅದು ಒಳ್ಳೆಯ ಸಂಬಂಧವನ್ನು ಉಂಟು ಮಾಡುತ್ತದೆ. ಭಾಳಷ್ಟು ಪ್ರಕಾಶಕರು ಸರಿಯಾಗಿ ಹಣ ಪಾವತಿ ಮಾಡದೇ ಹೆಸರು ಕೆಡಿಸಿಕೊಂಡಿರುವುದೇ ಹೆಚ್ಚು :(  ಮಧ್ಯವರ್ತಿಗಳನ್ನು  ದೂರವಿಡಿ. ನೀವೇ ನೇರವಾಗಿ ಮುದ್ರಕರೊಂದಿಗೆ ಮಾತನಾಡಿ. ನಗದು ಹಣ ಪಾವತಿ ಮಾಡುವ ಬದಲು ಬ್ಯಾಂಕ್ , ಚೆಕ್ -ಡಿ‌ಡಿ ಮುಖಾಂತರ ಪಾವತಿ ಮಾಡಿ ಮತ್ತು ನಿಮ್ಮ ಮುದ್ರಣದ ಅವಶ್ಯಕತೆಗಳ ನಮೂದಾಗಿರುವ ( ಅಂದರೆ ಕಾಗದ - ಮುಖಪುಟ - ಸೈಜ್ ಗಳ ಕುರಿತ ಸ್ಪಷ್ಟ ಉಲ್ಲೇಖವಿರುವ) sale order ಅನ್ನು ಕೇಳಿ ಪಡೆದುಕೊಳ್ಳಿ. ಮುಂದೆ ಮೋಸ ಮಾಡಿದರೆ ಕಾನೂನು ಕ್ರಮ ಜರುಗಿಸಲು ಸಹಾಯವಾಗುತ್ತದೆ. ಮತ್ತು ಒಂದು ಬದ್ದತೆಯನ್ನು ಇಬ್ಬರಲ್ಲೂ ಉಂಟು ಮಾಡುತ್ತದೆ.
* ಪುಸ್ತಕವನ್ನು ISBN ನಲ್ಲಿ ರಿಜಿಸ್ಟರ್ ಮಾಡಬೇಕಿದ್ದರೆ 1-2 ತಿಂಗಳು ಮುಂಚಿತವಾಗಿಯೇ ನಿಮ್ಮ ಪುಸ್ತಕದ ಮುಖಪುಟದ ಪ್ರತಿಯೊಂದಿಗೆ ಕಲ್ಕತ್ತಾ ದಲ್ಲಿರುವ ಅದರ ಕೇಂದ್ರ ಕಚೇರಿಗೆ ಅರ್ಜಿ ಸಲ್ಲಿಸಿ ( ಈ ಅರ್ಜಿಯೂ ಇಂಟರ್ನೆಟ್ ನಲ್ಲಿ ಲಭ್ಯ. ಅದನ್ನು ಪ್ರಿಂಟ್ ತೆಗೆದು ವಿವರ ತುಂಬಿಸಿ ಮುಖಪುಟದ ಪ್ರತಿಯ ಜೊತೆ ಅವರ ವಿಳಾಸಕ್ಕೆ ಕಳುಹಿಸಿದರೆ ಸಾಕು. ಇದಕ್ಕೆ ಯಾವ ಶುಲ್ಕವೂ ಇಲ್ಲ.
ISBN ನಂಬರು ನಿಮಗೆ ಸಿಕ್ಕ ಮೇಲೆ ಅದನ್ನು ಪುಸ್ತಕದ ಮುಖಪುಟ ಮತ್ತು ಒಳಪುಟದಲ್ಲಿ ನಮೂದಿಸಿ.
* ISBN ಕಷ್ಟವೆನಿಸಿದರೆ ಮುದ್ರಣವಾದ ನಂತರದಲೇ ಬೆಂಗಳೂರಿನಲ್ಲಿರುವ ಕೇಂದ್ರ ಗ್ರಂಥಾಲಯಕ್ಕೆ ಹೋಗಿ ಪುಸ್ತಕದ 3 ಪ್ರತಿಗಳನ್ನು ಕೊಟ್ಟು ನಿಮ್ಮ ಪುಸ್ತಕದ ಕಾಪಿ ರೈಟ್ ಅನ್ನು ಕಾಯ್ದಿಸಿರಿಕೊಳ್ಳಿ.  ಇದಕ್ಕೆ ಯಾವ ಶುಲ್ಕವೂ ಇಲ್ಲ. ಉಚಿತ.
* ಗ್ರಂಥಾಲಯ ಇಲಾಖೆ ವರ್ಷಕ್ಕೆ ಎರಡು ಬಾರಿ ಆಯಾ ವರ್ಷ ಪ್ರಕಟಗೊಂಡ ಪುಸ್ತಕಗಳನ್ನು ಖರೀದಿಸಲು ಅರ್ಜಿ ಕರೆಯುತ್ತದೆ. ಬಹುಶಃ ಜೂನ್ ಮತ್ತು ಜನವರಿಯಲ್ಲಿ. ಆವಾಗ ಅರ್ಜಿಯ ಜೊತೆಯಲ್ಲಿ ನಿಮ್ಮ ಪುಸ್ತಕದ ಮೂರು ಪ್ರತಿ ಹಾಗೂ ಕಾಪಿ ರೈಟ್ ಮಾಡಿಸಿದ ಸರ್ಟಿಫಿಕೇಟ್ ನ ನೆರಳಚ್ಚು ಪ್ರತಿ ( ಜೇರಾಕ್ಸ್ ) ಜೊತೆಗೆ ಸರಿಯಾದ ಸಮಯಕ್ಕೆ ಸಲ್ಲಿಸಿ. ಆಯ್ಕೆ ಗೊಂಡಲ್ಲಿ 300 ಪ್ರತಿಗಳನ್ನು ಪರಿಣಿತರು ನಿರ್ಧರಿಸಿದ ಬೆಲೆಯಲ್ಲಿ ಕೊಂಡುಕೊಳ್ಳುತ್ತಾರೆ.
ಉದಾ : ಈ ಬೆಲೆಯು ಕಾಗದ, ಮುದ್ರಣ ಗುಣಮಟ್ಟದ ಮೇಲೆ ಅವಲಂಬಿತವಾಗಿದೆ. ಮತ್ತು ಒಂದು ಪುಟ ಇಂತಿಷ್ಟೂ ಎಂದು ನಿಗದಿ ಮಾಡಲಾಗುತ್ತದೆ. ಒಂದು ಅಂದಾಜು ಮಾಡುವುದಾದರೆ         
70 GSM Maplitho - 4 color - 108 page - 1/8 ಡೆಮಿ ಪುಸ್ತಕದ ಒಂದು ಪುಟಕ್ಕೆ 0.60 ಪೈಸೆ ಅಂದುಕೊಂಡರೆ  ರೂ. 64.80 ಯಂತೆ  
* ನಿಮಗೆ ಬೇಕಾದ ಪುಸ್ತಕದಂಗಡಿಗಳಿಗೆ ಕೊಡಬಹುದು. ಈಗೆಲ್ಲಾ ಶೇ. 40-50 ರಷ್ಟು ರಿಯಾಯಿತಿ ಕೇಳುವುದು ಸಾಮಾನ್ಯವಾಗಿದೆ. ಉಳಿದ ಹಣವು ಪುಸ್ತಕ ಮಾರಾಟವಾದ ನಂತರವೇ ನಿಮ್ಮನು ತಲುಪುವುದು. 
* ಪುಸ್ತಕಗಳನ್ನು ಕಡಿಮೆ ಬೆಲೆಯಿಟ್ಟು ನೇರ ಮಾರಾಟ ಮಾಡಿ. ( ಕಾರ್ಯಕ್ರಮಗಳಲ್ಲಿ ಸ್ಟಾಲ್ ಹಾಕುವುದು, ಆನ್ಲೈನ್ ಮೂಲಕ ಮಾರುವುದು (pay u money ಮುಂತಾದ ವೆಬ್ಸೈಟ್ ಗಳು ಮತ್ತು flipkart , amazon, snapdeal ಮಳಿಗೆಗಳು)  ಓದುಗರಿಗೂ ಒಳ್ಳೆಯ ಪುಸ್ತಕ ಒಳ್ಳೆಯ ದರಕ್ಕೆ ಸಿಗುವಂತಾಗಲಿ.
ಕನ್ನಡ ಪುಸ್ತಕಗಳ ಪ್ರಕಟಣೆಗೆ ಉತ್ಸುಕರಾಗಿರುವ ಜನರಿಗೆ ನನ್ನ ಶುಭ ಹಾರೈಕೆಗಳು. ಒಳ್ಳೆಯದಾಗಲಿ. ಮಧ್ಯವರ್ತಿಗಳನ್ನು ನಂಬಿ ಮೋಸಹೋಗಬೇಡಿ. ವಿಚಾರಿಸಿ ಮುನ್ನಡೆಯಿರಿ.
ಸಂಗ್ರಹ ಮಾಹಿತಿ...