ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Friday 17 March 2023

ಮಲ್ಕಾಪುರದ ಹಿರಿಯ ವಿದ್ಯಾರ್ಥಿಗಳಿಂದ ಅಪ್ಪು ಸ್ಪೂರ್ತಿ ದಿನ ಆಚರಣೆ -ಶಾಲೆಗೆ ಧಣಿಗೆ

ಅಪ್ಪು ಉತ್ಸವ *ಸ್ಪೂರ್ತಿ ದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿಗಳಿಂದ ಮಲ್ಕಾಪುರ ಶಾಲೆಗೆ ದೇಣಿಗೆ


ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಜನ್ಮದಿನಾಚರಣೆ ಪ್ರಯುಕ್ತ ಸ್ಪೂರ್ತಿ ದಿನಾಚರಣೆಯನ್ನು ಮಾನ್ವಿ ತಾಲೂಕಿನ ಮಲ್ಕಾಪುರ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳಿಂದ 
  ಆಚರಿಸಲಾಯಿತು.

ಸ್ಪೂರ್ತಿ ದಿನದ ಅಂಗವಾಗಿ ಹಿರಿಯ ವಿದ್ಯಾರ್ಥಿ ಮೇಘರಾಜ್ ಶಾಲಾ ಮಕ್ಕಳಿಗಾಗಿ 200 ಕುಡಿಯುವ ನೀರಿನ ಲೋಟಗಳನ್ನು ದೇಣಿಗೆ ನೀಡಿ, ಸಿಹಿ ವಿತರಿಸಿ ಆಚರಣೆಯನ್ನು ಅರ್ಥಪೂರ್ಣ ಗೊಳಿಸಿದರು. ಹಳ್ಳಿಯೊಂದರ ಶಾಲಾ ಹಿರಿಯ  ವಿದ್ಯಾರ್ಥಿಗಳ  ಈ ಕೊಡುಗೆ ಮಲ್ಕಾಪುರ ಗ್ರಾಮಕ್ಕೆ ಅಷ್ಟೇ ಅಲ್ಲ ರಾಜ್ಯದ ಎಲ್ಲೆಡೆ ವಿದ್ಯಾರ್ಥಿಗಳಿಗೆ ಮಾದರಿಯಾಗಿದೆ. 


ದೇಣಿಗೆ ನೀಡಿದ ಹಿರಿಯ ವಿದ್ಯಾರ್ಥಿ ಮೇಘರಾಜ್ ಮಲ್ಕಾಪುರ


ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಇದು ವಿಶೇಷವಾದ ನಡೆಯಾಗಿದೆ. ಈ ಮೂಲಕ ಇಂದಿನ ಯುವಕರು ಸರ್ಕಾರಿ ಶಾಲಾ ಸಬಲೀಕರಣಕ್ಕೆ ಕೈಲಾದ ದೇಣಿಗೆ ನೀಡಿ ಸಮಾಜ ಸೇವೆಗೆ ತೆರೆದುಕೊಳ್ಳಲು ಸ್ಪೂರ್ತಿ ತುಂಬಿದ ದಿನವೂ ಆಗಿದೆ.ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ನಿಜಕ್ಕೂ ಇಂದಿನ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ. ಎಂದು ಮಲ್ಕಾಪುರ ಶಾಲಾ ಶಿಕ್ಷಕ ಸಾಹಿತಿ ರವಿಚಂದ್ರ ಹೇಳಿದರು.

ಮುಖ್ಯ ಶಿಕ್ಷಕರಾದ ಮಲ್ಲಪ್ಪ, ಸುನಿಲ್ ಭೂದೇಶ್ ,ಶಿವರಾಂ ಸಂತೋಷ್ ,ರಾಜೇಶ್ವರಿ , ಮಲ್ಕಾಪುರದ ಗ್ರಾಮಸ್ಥರು, ಎಸ್ ಡಿ ಎಂ ಸಿ ಅಧ್ಯಕ್ಷರು  ಮಕ್ಕಳ ಕೊಡುಗೆಯನ್ನು ಶ್ಲಾಘಿಸಿದರು.

ಕರ್ನಾಟಕ ರತ್ನ   ಪುನೀತ್ ರಾಜಕುಮಾರ್  ಸಮಾಜ ಸೇವೆ ,ದೇಣಿಗೆ ನೀಡುವಲ್ಲಿ ವಿಶ್ವಕ್ಕೆ ಮಾದರಿಯಾಗಿದ್ದು ಇಂದು ವಿಶ್ವಾರ್ದ್ಯಂತ ಸ್ಪೂರ್ತಿದಿನವಾಗಿ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗಿರುವುದು ಕಂಡುಬರುತ್ತದೆ.

ಶಾಲಾ ಶಿಕ್ಷಕರು, ಊರಿನ ಗ್ರಾಮಸ್ಥರು, ಶಿಕ್ಷಣ ಇಲಾಖೆ ಹಳ್ಳಿಯ ಹಿರಿಯ ವಿದ್ಯಾರ್ಥಿಗಳ ಈ ಕೊಡುಗೆಯನ್ನು ಶ್ಲಾಘಿಸಿದರು.

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...