ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Monday 10 February 2020

ಮಂದಾರ ಮಕ್ಕಳ ಪತ್ರಿಕೆ .ಮಾರ್ಚ್

ಮಂದಾರ

ರಹಮತ್ ತರೀಕೆರೆ ಅವರ ಒಂದು ಲೇಖನ

#ರಹಮತ್ #ತರೀಕೆರೆ​ ಅವರ ಲೇಖನ .

#ಟಿಪ್ಪು #ಸುಲ್ತಾನ್​ #ಭಾರತದ #ಮೊದಲ #ಸ್ವಾತಂತ್ರ್ಯ #ಸೇನಾನಿ

ಮೈಸೂರ ಅರಮನೆಯನ್ನು ನೋಡುವಾಗ, ಚರಿತ್ರೆಯ ಎರಡು ವಿರುದ್ಧ ಸಂಗತಿಗಳು ಒಂದೇ ಕಡೆ ನೆಲೆಸಿರುವ ವಿಚಿತ್ರ ಅನುಭವವಾಗುತ್ತದೆ. ಈ ವೈರುಧ್ಯ ಉಂಟಾಗಿರುವುದು ಟಿಪ್ಪುವಿನ ಖಡ್ಗ ಹಾಗೂ ಅರಮನೆಯ ಗೋಡೆಗಳಲ್ಲಿರುವ ಭಿತ್ತಿಚಿತ್ರಗಳಿಂದ. ದರ್ಬಾರ್ ಸಭೆ, ಪಟ್ಟಾಭಿಷೇಕ ಉತ್ಸವ, ದಸರಾ, ಮದುವೆ, ರಾಜಕುವರರ ಹುಟ್ಟಿದಹಬ್ಬ ಇತ್ಯಾದಿ ಉತ್ಸವ ಮತ್ತು ಕಾರ್ಯಕ್ರಮಗಳಲ್ಲಿ, ಒಡೆಯರ ಜತೆ ಬ್ರಿಟಿಶ್ ಅಧಿಕಾರಿಗಳು ಕಾಲಮೇಲೆ ಕಾಲು ಹಾಕಿ ಸುಖಾಸೀನವಾಗಿ ಕುಳಿತಿರುವುದನ್ನು ಈ ವರ್ಣಚಿತ್ರಗಳು ಕಾಣಿಸುತ್ತವೆ.
ಈ ಚಿತ್ರಗಳನ್ನೂ ಅರಮನೆಯ ಸಿಂಹಾಸನ, ಪಲ್ಲಕ್ಕಿ ಇತ್ಯಾದಿಗಳ ಕಣ್ಕುಕ್ಕುವ ವೈಭವವನ್ನೂ ನೋಡಿಕೊಂಡು, ಬೆಳ್ಳಿಯ ಬಾಗಿಲು ಮೂಲಕ ಹೊರಹೋಗಲು ಕೆಳಕ್ಕೆ ಇಳಿದರೆ, ಅಲ್ಲಿ ಟಿಪ್ಪುವಿನ ಖಡ್ಗದ ಚಿತ್ರವಿಡಲಾಗಿದೆ. ಅದನ್ನು-ಉದ್ದೇಶಪೂರ್ವಕವಾಗಿ ಅಲ್ಲದೆ ಪ್ರಾಸಂಗಿಕವಾಗಿ ಇಡಲಾಗಿದೆ. ಆ ಖಡ್ಗದ ಚಿತ್ರದಡಿಯಲ್ಲಿ, ಟಿಪ್ಪು ಗಾಯಗೊಂಡು ಪ್ರಾಣಬಿಡುತ್ತಿದ್ದ ಹೊತ್ತಲ್ಲಿ ಅವನಿಂದ ಖಡ್ಗವನ್ನು ಹೇಗೆ ಕಿತ್ತುಕೊಳ್ಳಲಾಯಿತು, ನಂತರ ಈ ಖಡ್ಗ ಹೇಗೆ ಲಂಡನ್ನಿನ ಬ್ರಿಟಿಶ್ ಮ್ಯೂಸಿಯಂ ತಲುಪಿತು ಎಂಬ ವಿವರಣೆ ಕೊಡಲಾಗಿದೆ. ಅವನ ಕೊನೇ ಕ್ಷಣಗಳು ಎಂಥವು? ಗಾಯಗೊಂಡು ಬಿದ್ದಿದ್ದ ಟಿಪ್ಪುವಿನ ಖಡ್ಗವನ್ನು ಸಾಮಾನ್ಯ ಬ್ರಿಟಿಶ್ ಸೈನಿಕನೊಬ್ಬ ಕಿತ್ತುಕೊಳ್ಳಲು ಬಂದಾಗ, ಕೊನೆಯ ಸಲ ಪ್ರತಿರೋದಿಸುತ್ತಾನೆ.

ಸೈನಿಕನು ಟಿಪ್ಪುವೆಂದರಿಯದೆ, ಅವನ ತಲೆಗೆ ಗುಂಡು ಹಾರಿಸಿ ಕೊಂದು ಆ ಖಡ್ಗವನ್ನೂ ಅವನ ಉಡುಪಿನಲ್ಲಿದ್ದ ಬೆಲೆಬಾಳುವ ಆಭರಣಗಳನ್ನೂ ಕಿತ್ತುಕೊಳ್ಳುತ್ತಾನೆ. ಈ ದಾರುಣ ಪ್ರಸಂಗವನ್ನು ಮೊದಲ ಕಾದಂಬರಿಕಾರರಲ್ಲಿ ಒಬ್ಬರಾದ ಎಂ. ಎಸ್. ಪುಟ್ಟಣ್ಣನವರು, ತಮ್ಮ `ದಿ ಲಾಸ್ಟ್ ಹವರ್ ಆಫ್ ಟಿಪ್ಪುಸುಲ್ತಾನ್' ಎಂಬ ಲೇಖನದಲ್ಲಿ ವರ್ಣಿಸುತ್ತಾರೆ.

ಒಂದೆಡೆ, ಬ್ರಿಟಿಶರ ಜತೆ, ಅವರು ದಯಪಾಲಿಸಿದ ಜೆಸಿಇಸಿ ಇತ್ಯಾದಿ ಬಿರುದುಗಳನ್ನು ಧರಿಸಿ, ವಿರಾಜಮಾನರಾಗಿ ಕುಳಿತಿರುವ ಒಡೆಯರ ಚಿತ್ರ; ಇನ್ನೊಂದೆಡೆ, ತಾನು ಸೋಲುವ ಮತ್ತು ಸಾಯುವ ಅರಿವಿದ್ದರೂ ಶರಣಾಗದೆ, ಮೈಸೂರು ರಾಜ್ಯವನ್ನು ಉಳಿಸಿಕೊಳ್ಳಲು ಸ್ವಾಭಿಮಾನದಿಂದ ರಣರಂಗದಲ್ಲಿ ಹೋರಾಡಿ, ಶ್ರೀರಂಗಪಟ್ಟಣದ ಬೀದಿಯಲ್ಲಿ ಪ್ರಾಣಬಿಟ್ಟ ಟಿಪ್ಪುವಿನ ಕೊನೆಯ ದಿನದ ರೂಪಕವಾಗಿರುವ ಖಡ್ಗದ ಚಿತ್ರ. ತುಸುವೇ ರಾಜಿ ಮಾಡಿಕೊಂಡಿದ್ದರೆ, ಟಿಪ್ಪು ಕೂಡ ತಿರುವಾಂಕೂರು, ಹೈದರಾಬಾದ್, ಅವಧ್, ಪೇಶವೆ ಮುಂತಾದ ಸಂಸ್ಥಾನಿಕರಂತೆ, ಬ್ರಿಟಿಶರ ಜೊತೆ ‘ಗೌರವಾನ್ವಿತ ಒಪ್ಪಂದ’ ಮಾಡಿಕೊಂಡು, ‘ಸ್ವತಂತ್ರ’ ರಾಜನಾಗಿರಬಹುದಿತ್ತು.

ಇಲ್ಲವೆ ಸವಣೂರಿನ ನವಾಬನಂತೆ ಪೆನ್ಶನ್ ಪಡೆದು ಬದುಕಿರಬಹುದಿತ್ತು. ಆದರೆ ಸ್ವಾತಂತ್ರ್ಯ ಕಳೆದುಕೊಂಡು ಜೀವಿಸುವುದು ಅವನಿಗೆ ಬೇಡವೆನಿಸಿರಬಹುದು. ಮೂರನೇ ಮೈಸೂರು ಯುದ್ಧದ ಹೊತ್ತಿಗೆ ಅವನು ಸಾಕಷ್ಟು ಸೋಲು ಮತ್ತು ಮುಜುಗರ ಅನುಭವಿಸಿ ತಪ್ತನಾಗಿದ್ದನು. ಮಕ್ಕಳನ್ನು ಒತ್ತೆಯಿಟ್ಟಿದ್ದು ಅವನಿಗೆ ವೇದನೆಯ ಸಂಗತಿಯಾಗಿತ್ತು. ಬ್ರಿಟಿಷರು, ಮರಾಠರು, ನಿಜಾಮರು ಸೇರಿ ಅವನನ್ನು ಹಣ್ಣುಗಾಯಿ ಮಾಡಿದ್ದರು. ಇನ್ನೊಂದು ಯುದ್ಧ ನಡೆದರೆ ಸೋಲುವುದು ಖಚಿತವಾಗಿತ್ತು. ಆದರೂ ಸಾವು ಹೀಗೆ ಬಂದೆರಗಬಹುದೆಂದು ಆತ ಊಹಿಸಿರಲಿಕ್ಕಿಲ್ಲ.

ಅವನ ಶವವನ್ನು ಇಡೀರಾತ್ರಿ ದೊಂದಿಯ ಬೆಳಕಲ್ಲಿ ಹುಡುಕುವುದು, ಅದನ್ನು ಹೆಣಗಳ ರಾಶಿಯಲ್ಲಿ ಅಂಗರಕ್ಷಕನೊಬ್ಬ ಪತ್ತೆಮಾಡುವುದು, ಅದನ್ನು ಅರಮನೆಗೆ ತರುವುದು, ಮಹಿಳೆಯ ರೋದನ ಇತ್ಯಾದಿಯೆಲ್ಲವನ್ನೂ ಬ್ರಿಟಿಶ್ ಚಿತ್ರಕಾರರೇ ಚಿತ್ರಿಸಿದ್ದಾರೆ.
ಆದರೆ ಟಿಪ್ಪುವನ್ನು ಕೊಂದ ಬಳಿ ಮೈಸೂರು ರಾಜ್ಯವನ್ನು ವಶಪಡಿಸಿಕೊಂಡ ಬ್ರಿಟಿಶರು, ಒಡೆಯರನ್ನು ಹೀನಾಯವಾಗಿ ನಡೆಯಿಸಿಕೊಂಡರು.

ಕೆಲವು ಕಾಲ ಮುಮ್ಮಡಿಯನ್ನು ಸಿಂಹಾಸನದ ಮೇಲೆ ಕೂರಿಸಿದರೂ, ಏನೊ ನೆಪತೆಗೆದು (1831) ಕೆಳಗಿಳಿಸಿದರು. ಮುಂದಿನ 50 ವರ್ಷಕಾಲ ನಿಜವಾದ ಅಧಿಕಾರ ಬ್ರಿಟಿಶ್ ಕಮಿಶನರುಗಳ ಕೈಯಲ್ಲಿತ್ತು. ಈ ಪರಿಮಿತಿಯಲ್ಲೂ ಹತ್ತನೇ ಚಾಮರಾಜ ಒಡೆಯರ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರು ಆಧುನಿಕ ಮೈಸೂರು ರಾಜ್ಯವನ್ನು ಕಟ್ಟಲು ಮಾಡಿದ ಕೆಲಸಗಳು ಚಾರಿತ್ರಿಕವಾಗಿ ಮಹತ್ವದವು.

ಅದರಲ್ಲೂ ಹಿಂದುಳಿದ ಜಾತಿಗಳಿಗೆ ಅವರು ಜಾರಿತಂದ ಮೀಸಲಾತಿಯ ದೃಷ್ಟಿಯಿಂದ ಅವರ ಕಾರ್ಯವನ್ನು ಬಹಳ ಗೌರವದಿಂದ ದಾಖಲಿಸಬೇಕಿದೆ. ಆದರೆ, ಒಡೆಯರು ಬ್ರಿಟಿಶರ ವಿರುದ್ಧ ಯಾವುದೇ ರಾಷ್ಟ್ರೀಯ ಹೋರಾಟವೂ ಮೈಸೂರು ಸೀಮೆಯಲ್ಲಿ ಏಳದಂತೆ ದಮನಿಸುವ ಕೆಲಸವನ್ನೂ ಮಾಡಬೇಕಾಯಿತು.

ವಸಾಹತುಶಾಹಿಶಾಹಿ ವಿರೋಧಿಗಳಾಗಿದ್ದ ಸ್ವಾಮಿ ಅಪರಂಪಾರ, ಧೋಂಡಿಯಾವಾಘ್, ತರೀಕೆರೆಯ ಸರ್ಜಾ ರಂಗಪ್ಪನಾಯಕ, ಹನುಮಪ್ಪನಾಯಕ ಇವರೆಲ್ಲರನ್ನು ಅವರು ಕೊಂದರು. 1942ರ ಕ್ವಿಟ್ ಇಂಡಿಯಾ ಚಳುವಳಿ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಈಸೂರಿನಲ್ಲಿ ನಡೆದ ಹೋರಾಟದಲ್ಲಿ ಭಾಗಿಯಾದ 5 ಜನ ಹೋರಾಟಗಾರರು, ಜೀವದಾನ ಮಾಡಬೇಕೆಂದು ಅಪೀಲು ಸಲ್ಲಿಸಿದಾಗ, ಮೈಸೂರು ಅವರು ಕ್ಷಮಾದಾನ ಮಾಡಲಿಲ್ಲ. ಹಾಗೆ ಮಾಡುವುದು ಅವರ ಕೈಯಲ್ಲೂ ಇರಲಿಲ್ಲ.

ಈಸೂರ ವೀರರನ್ನು ಗಲ್ಲಿಗೇರಿಸಲಾಯಿತು. ವಿದುರಾಶ್ವತ್ಥದ ಹೋರಾಟವನ್ನು ಹೊಸಕಿಹಾಕಿದರು. ಇದು ಒಡೆಯರಿಗಿದ್ದ ‘ಸ್ವಾತಂತ್ರ್ಯ’ದ ಸ್ವರೂಪವನ್ನು ತಿಳಿಸುತ್ತದೆ. ಎಂತಲೇ ಮೈಸೂರು ಅರಮನೆಯಲ್ಲಿ ನಿರುದ್ದಿಶ್ಯವಾಗಿ ಇಟ್ಟಿರುವ ಟಿಪ್ಪುವಿನ ಖಡ್ಗದ ಕತೆಯುಳ್ಳ ಫಲಕವು, ಚಾರಿತ್ರಿಕ ವ್ಯಂಗ್ಯವನ್ನು ಹುಟ್ಟಿಸುತ್ತದೆ.ಅದು ಮೈಸೂರ ಅರಮನೆಯ ಜೊತೆ, (‘ಗುಲಾಮಿಗೂ ಚಿನ್ನದ ಮುಲಾಮು’ ಎಂದು ಕುವೆಂಪು ವರ್ಣಿಸಿದ ಅರಮನೆ ವೈಭವದ ಜೊತೆ) ಹೊಂದಿಕೊಳ್ಳುವುದಿಲ್ಲ.

ಈ ವೈರುಧ್ಯ ಕಥನ ಜಗನ್ಮೋಹಿನಿ ಅರಮನೆಯೊಳಗೂ ಮುಂದುವರೆಯುತ್ತದೆ. ಇಲ್ಲಿ ಕೂಡ ವಿಜಯದ ನಗೆಹೊತ್ತ ಬ್ರಿಟಿಶ್ ದೊರೆಗಳ ಆಳೆತ್ತರದ ಚಿತ್ರಗಳ ನಡುವೆ, ಟಿಪ್ಪು ತನ್ನ ಎಳೆಯ ಮಕ್ಕಳನ್ನು ಬ್ರಿಟಿಶರಿಗೆ ಒತ್ತೆ ಇಡುತ್ತಿರುವ ಹಾಗೂ ಅವನ ಮೃತದೇಹವನ್ನು ರಣರಂಗದಲ್ಲಿ ಹುಡುಕಿ ತೆಗೆಯುತ್ತಿರುವ ವರ್ಣಚಿತ್ರಗಳಿವೆ.

ಕುತೂಹಲಕರವೆಂದರೆ, ಕರ್ನಾಟಕದ ಚರಿತ್ರೆಕಾರರು ಟಿಪ್ಪು ಹಾಗೂ ಮೈಸೂರು ಒಡೆಯರನ್ನು ಚಿತ್ರಿಸುವ ವಿಧಾನದಲ್ಲಿರುವ ತಾರತಮ್ಯ. ಬ್ರಿಟಿಶರು ಟಿಪ್ಪುವನ್ನು ‘ಕ್ರೂರಿ’ ಎಂದೂ, ಬಲಾತ್ಕಾರ ಮತಾಂತರ ಮಾಡಿಸಿದ ಮತಾಂಧನೆಂದೂ, ಮೈಸೂರರಸರ ಅಧಿಕಾರ ಕಿತ್ತುಕೊಂಡ ವಂಚಕನ ಮಗನೆಂದೂ ಯಾಕೆ ಚಿತ್ರಿಸಿದರು ಎಂಬುದು ಸುಲಭವಾಗಿ ಅರ್ಥವಾಗುತ್ತದೆ.

ಆದರೆ ಕರ್ನಾಟಕದ ಕೆಲವು ಚರಿತ್ರೆಕಾರರೂ ಇದೇ ಧಾಟಿಯಲ್ಲಿ ಬರೆಯುವುದು ಅರ್ಥವಾಗುವುದಿಲ್ಲ. ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಹೈದರಾಲಿ ಮತ್ತು ಟಿಪ್ಪು ಆಳ್ವಿಕೆಯನ್ನು ಕೆಲವೇ ಸಾಲುಗಳಲ್ಲಿ ಮುಗಿಸಲು ಅವರು ತವಕಿಸುತ್ತಾರೆ. ಹೈದರ್ ಮತ್ತು ಟಿಪ್ಪು ಕುರಿತ ಅವರ ತಿರಸ್ಕಾರ ಎಂಥದ್ದೆಂದರೆ, ಕಡ್ಡಾಯವಾಗಿ ಮೈಸೂರು ಒಡೆಯರ ಬಗ್ಗೆ ಬಹುವಚನವನ್ನೂ, ಅಪ್ಪಮಕ್ಕಳಿಬ್ಬರಿಗೂ ಏಕವಚನವನ್ನೂ ಬಳಸುತ್ತಾರೆ; ಹೈದರನು `ಹಿಂದೂ’ ದೊರೆಗಳಿಂದ (ವಾಸ್ತವವಾಗಿ ದುರ್ಬಲರಾಗಿದ್ದ ಒಡೆಯರನ್ನು ಪಕ್ಕತಳ್ಳಿ ಆಳ್ವಿಕೆ ಮಾಡುತ್ತಿದ್ದ ದಳವಾಯಿಗಳಿಂದ) ಅಧಿಕಾರವನ್ನು ಕಸಿದುಕೊಂಡು `ಮುಸ್ಲಿಂ’ ಆಡಳಿತವನ್ನು ಆರಂಭಿಸಿದ `ಸರ್ವಾಧಿಕಾರಿ' ಎಂದು ಬರೆಯುತ್ತಾರೆ.

ಅವನೊಬ್ಬ ಸ್ವಾಮಿದ್ರೋಹಿ ಎಂಬುದು ಅವರ ನಂಬಿಕೆ. ಆಲೂರು ವೆಂಕಟರಾಯರ ‘ಕರ್ನಾಟಕ ವೀರರತ್ನಗಳು’ ಕೃತಿಯಲ್ಲಾಗಲಿ, ಚಿದಾನಂದಮೂರ್ತಿಯವರ ‘ಕನ್ನಡ ಸಂಸ್ಕøತಿ ನಮ್ಮ ಹೆಮ್ಮೆ’ಯಲ್ಲಾಗಲಿ ಹೈದರ್-ಟಿಪ್ಪು ಹೆಸರಿಲ್ಲ. ಕುವೆಂಪು ತಮ್ಮ ನಾಡಗೀತೆ `ಭಾರತ ಜನನಿಯ ತನುಜಾತೆ'ಯ ಮೊದಲನೆಯ ಕರಡುಪ್ರತಿಯಲ್ಲಿ ಟಿಪ್ಪು ಹೈದರರ ಹೆಸರನ್ನು ಸೇರಿಸಿದ್ದರು.

ನಂತರ ಯಾವ ಕಾರಣಕ್ಕೊ ತಿಳಿಯದು, ಅದನ್ನು ಕೈಬಿಟ್ಟರು. ಈ ಮನೋಭಾವದ ಮುಂದುವರಿಕೆ ಎಂದರೆ, ನಮ್ಮ ಶಾಲಾ ಗೋಡೆಗಳ ಮೇಲೆ ಬರೆಯಲಾಗುವ ವಸಾಹತುಶಾಹಿ ವಿರೋಧಿ ಹೋರಾಟಗಾರರ ಚಿತ್ರಗಳಲ್ಲಾಗಲಿ, ಸಾರ್ವಜನಿಕ ಜಾಗಗಳಲ್ಲಿ ನಿಲ್ಲಿಸಲಾಗುವ ಪ್ರತಿಮೆಗಳಲ್ಲಾಗಲಿ ಚೆನ್ನಮ್ಮ, ಮದಕರಿನಾಯಕ, ಕೃಷ್ಣದೇವರಾಯರ ಟಿಪ್ಪು ಇರದಂತೆ ನೋಡಿಕೊಂಡಿರುವುದು; ಟಿಪ್ಪು ನಿಧನವಾದ 200ನೇ ವರ್ಷದ ಕಾರ್ಯಕ್ರಮಗಳನ್ನು ಆಚರಿಸುವ ಪ್ರಸ್ತಾವನೆ ಬಂದಾಗ ವಿರೋಧ ವ್ಯಕ್ತವಾಗಿದ್ದು; ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಬೇಕು ಎಂಬ ಪ್ರಸ್ತಾಪ ಬಂದಾಗಲೂ ಇಂತಹುದೇ ವಿರೋಧ ಬಂದಿತು.

ಸಾಂಕೇತಿಕವಾದ ಸ್ಥಾವರ ಸ್ಮಾರಕಗಳು ಆಯಾ ವ್ಯಕ್ತಿಯ ವ್ಯಕ್ತಿತ್ವವನ್ನು ಚಿಂತನೆಯನ್ನು ಸಮಕಾಲೀನ ಜೀವನದಲ್ಲಿ ಪಸರಿಸುವುದಿಲ್ಲ ಎಂಬುದು ನಮಗೆ ಗಾಂಧಿಜಿ ಹೆಸರಿನ ರಸ್ತೆ, ನಗರ, ಪ್ರತಿಮೆ, ಸರ್ಕಲ್ಲುಗಳಿಂದ ಗೊತ್ತಾಗಿದೆ. ಆದರೆ ಇಂತಹ ಸಾಂಕೇತಿಕ ಮತ್ತು ಔಪಚಾರಿಕ ಸ್ಮರಣೆಗಳಿಗೂ ಬರುತ್ತಿರುವ ವಿರೋಧಗಳು, ಚರಿತ್ರೆಯ ಮತೀಯವಾದಿ ನೆಲೆಯ ತಾರ್ಕಿಕ ಮುಂದುವರಿಕೆಯಾಗಿವೆ.

ಇದೇ ಇತಿಹಾಸಕಾರರು, ಟಿಪ್ಪು ನಂತರ `ಹಿಂದೂ' ದೊರೆಗಳಾದ ಮೈಸೂರು ಒಡೆಯರನ್ನು ಬ್ರಿಟಿಶರು ನಡೆಸಿಕೊಂಡ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎನ್ನುವುದು ಕುತೂಹಲ ಹುಟ್ಟಿಸುತ್ತದೆ. ಒಡೆಯರನ್ನು ಬ್ರಿಟಿಶರು ಎಷ್ಟು ನಿಕೃಷ್ಟವಾಗಿ ನಡೆದುಕೊಂಡರು ಎಂಬುದಕ್ಕೆ ಅವರು ಚಾಮರಾಜ ಒಡೆಯರನ್ನು ಪಟ್ಟಕ್ಕೆ ತರುವಾಗ (1881) ಮಾಡಿಕೊಂಡ ಕರಾರು ಒಪ್ಪಂದದ ಕಲಮುಗಳೇ ಸಾಕ್ಷಿ.

ಇಡೀ ಈ ಒಪ್ಪಂದ ಪತ್ರವೂ ಕಲ್ಕತ್ತೆಯಿಂದ ಲಾರ್ಡ್ ಡಾಲ್‍ಹೌಸಿಯು ಬಂದಾಗ ಹೇಗೆ ದೀನವಾಗಿ ನಡೆದುಕೊಂಡರು ಎಂಬ ವಿವರಗಳನ್ನು ಆಸ್ಥಾನದ ಇತಿಹಾಸಕಾರರಾದ ಎಂ. ಶಿಂಗ್ರಯ್ಯನವರು ‘ಶ್ರೀ ಚಾಮರಾಜೇಂದ್ರ ಒಡೆಯರವರ ಚರಿತ್ರೆ’ಯಲ್ಲಿ (1903) ಮುಂಬರುವ ವ್ಯಾಖ್ಯಾನಕಾರರು ಹೊರಡಿಸುವ ಅರ್ಥದ ಪರಿವಿಲ್ಲದೆ ಅಮಾಯಕವಾಗಿ ಬರೆಯುತ್ತಾರೆ.

ಆದರೆ ಕೋಮುವಾದಿ ನಂಜಿನ ಈ ಚರಿತ್ರ ಲೇಖನಗಳಿಗೆ ಪ್ರತಿಯಾದ ಬರೆಹಗಳೂ ಇವೆ. ಇವು ಶ್ರೀರಂಗಪಟ್ಟಣದ ರಂಗನಾಥ, ನಂಜನಗೂಡಿನ ನಂಜುಂಡೇಶ್ವರ, ಮುಖ್ಯವಾಗಿ ಶೃಂಗೇರಿ ಮಠದ ಜೊತೆ ಟಿಪ್ಪು ನಡೆದುಕೊಂಡ ರೀತಿಯನ್ನೊ; ದಿವಾನ್ ಪೂರ್ಣಯ್ಯನಿಂದ ಹಿಡಿದು ತನ್ನ ಆಪ್ತ ಕಾರ್ಯದರ್ಶಿ ಶಿವಾಜಿಯ ತನಕ ಮುಖ್ಯ ಅದಿsಕಾರಿಗಳನ್ನು ಟಿಪ್ಪು ಮುಸ್ಲಿಮರಲ್ಲದವರ ಕೈಯಲ್ಲಿಟ್ಟಿದ್ದನ್ನೊ; ಹೈದರಾಬಾದ್, ಕರ್ನೂಲು, ಸವಣೂರುಗಳ ನಿಜಾಮ-ನವಾಬರನ್ನು ಅವನ ಮುಖ್ಯ ರಾಜಕೀಯ ಶತ್ರುಗಳಾಗಿ ಇದ್ದುದ್ದನ್ನೊ ಮುಂದಿಟ್ಟು, ಕೋಮುವಾದಿ ಚರಿತ್ರೆಯ ಆರೋಪ ಮತ್ತು ಪೂರ್ವಗ್ರಹಗಳಿಗೆ ಉತ್ತರಿಸುತ್ತವೆ.

ಇವುಗಳ ಸಮಸ್ಯೆಯೆಂದರೆ, ಟಿಪ್ಪುವನ್ನು ಯಾವ ತಪ್ಪೂ ಮಾಡದ ಸಜ್ಜನ ಎಂಬಂತೆ ಕಾಣಿಸುವ ಉದಾರ ಮಾನವತಾವಾದಿ ಉತ್ಸಾಹ. ಭಗವಾನ್ ಗಿದ್ವಾನಿಯವರ ‘ಟಿಪ್ಪೂಸುಲ್ತಾನನ ಖಡ್ಗ’ ಅಥವಾ ಶೇಕ್ ಆಲಿಯವರ `ಟಿಪ್ಪುಸುಲ್ತಾನ್' ಮುಂತಾದವು ರಕ್ಷಣಾತ್ಮಕ ಮಾದರಿಯ ಕೃತಿಗಳು. ಆದರೆ ಕೋಮುವಾದಿ ಚರಿತ್ರೆಕಾರರ ಆಪಾದನೆಗಳಿಗೆ ಎಡಪಂಥೀಯ ಚರಿತ್ರೆಕಾರರು ಕೊಡುವ ಉತ್ತರಗಳು ಬೇರೆ ತರಹ ಇವೆ.

ಅವರು ಹೈದರ್ ಮತ್ತು ಟಿಪ್ಪೂ ಹೇಗೆ ವಸಾಹತುಶಾಹಿಯನ್ನು ರಾಜಕೀಯ ಪ್ರಜ್ಙೆಯಲ್ಲಿ, ವಿಶಾಲವಾದ ರಾಷ್ಟ್ರಹಿತದ ದೃಷ್ಟಿಕೋನದಲ್ಲಿ ಅರ್ಥಮಾಡಿಕೊಂಡಿದ್ದ ದೇಶೀ ಪ್ರಭುಗಳಾಗಿದ್ದರು; ಮೈಸೂರು ರಾಜ್ಯವನ್ನು ಬಲಿಷ್ಠ ಆರ್ಥಿಕ ನೆಲೆಯ ಮೇಲೆ ಕಟ್ಟುವ ಆಧುನಿಕ ಮನಸ್ಸುಳ್ಳ ಕನಸುಗಾರ ದೊರೆಗಳಾಗಿದ್ದರು ಎಂಬುದನ್ನು ವಿಶ್ಲೇಷಿಸುತ್ತಾರೆ. ಇದಕ್ಕೆ ನಿದರ್ಶನ ಸಾಕಿಯವರು ರಚಿಸಿದ `ಮೇಕಿಂಗ್ ಹಿಸ್ಟರಿ’ (1997) ಪುಸ್ತಕ.

ಕುತೂಹಲಕರವೆಂದರೆ, ಕನ್ನಡ ಲೇಖಕರ ಪ್ರತಿಕ್ರಿಯೆ. ಇದು ಮಾಸ್ತಿಯವರಿಂದ ಆರಂಭಿಸಿ, ವೀರಕೇಸರಿ ಸೀತಾರಾಮಶಾಸ್ತ್ರಿ, ಹೆಚ್.ಎಸ್. ಶಿವಪ್ರಕಾಶ್, ಗಿರೀಶ್ ಕಾರ್ನಾಡ, ಲಿಂಗದೇವರು ಹಳೇಮನೆ, ಬಂಜಗೆರೆ ಜಯಪ್ರಕಾಶ್, ಎಂ.ಜೀವನ ತನಕ ಇದೆ. ಆಧುನಿಕ ಕನ್ನಡ ಸಾಹಿತ್ಯದ ಲೇಖಕರು ಹೈದರ್-ಟಿಪ್ಪು ಚರಿತ್ರೆಯನ್ನು ಕಥೆ ಕಾದಂಬರಿ ನಾಟಕ ಪದ್ಯಗಳ ಮೂಲಕ ಮರು ಸೃಷ್ಟಿಸಿದ್ದಾರೆ. ಮರುಸೃಷ್ಟಿಯೆಂದರೆ ಚರಿತ್ರೆಯ ಮರುವ್ಯಾಖ್ಯಾನವೇ.

ಇವರು ಕೋಮುವಾದಿ ಚರಿತ್ರೆಕಾರರು ನೋಡಲು ನಿರಾಕರಿಸಿದ ಸಂಗತಿಗಳನ್ನು ಕಾಳಜಿಯಿಂದ ಎತ್ತಿಕೊಳ್ಳುತ್ತಾರೆ; ಟಿಪ್ಪು ಒಬ್ಬ ದೊರೆಯಾಗಿ ಹಾಗೂ ಮನುಷ್ಯನಾಗಿ ಪಟ್ಟ ಪಾಡನ್ನು, ಅವನ ಬಾಳಿನ ದುಃಖ, ಸುಖ, ಕನಸು, ದುರಂತಗಳನ್ನು ನೋಡಲು ಯತ್ನಿಸುತ್ತಾರೆ. ಇದನ್ನು ಚರಿತ್ರೆಯ ಮಾನವೀಕರಣ ಎನ್ನಬಹುದು. ಈ ಸಾಲಿನಲ್ಲಿ ಮಾಸ್ತಿ ಕತೆ ಮಾತ್ರ (`ಡೂಬಾಯಿ ಪಾದ್ರಿಯ ಒಂದು ಪತ್ರ') ಟಿಪ್ಪು ಕುರಿತು ಕಟುವಾದ ನಿಲುವನ್ನು ತಳೆಯುತ್ತದೆ.

ಚರಿತ್ರೆಯ ಮಾನವೀಕರಣದಲ್ಲಿ ಕರ್ನಾಟಕ ಜಾನಪದ ಮನಸ್ಸಿನ ಪಾತ್ರ ವಿಶೇಷವಾದುದು. ಟಿಪ್ಪುವಿನ ಮೇಲೆ ಬಂದ ಲಾವಣಿಗಳನ್ನು ಗಮನಿಸಬೇಕು. ಟಿಪ್ಪುವನ್ನು ಕೊಂದ (1799) ಕೆಲವೇ ವರ್ಷಗಳಲ್ಲಿ ಮೈಸೂರು ಸೀಮೆಯಲ್ಲಿ ಲಾವಣಿಗಳು ಹುಟ್ಟಿಕೊಂಡಿದ್ದವು. ಜಾನ್ ಲೇಡನ್ 1803ರಲ್ಲಿ ಶ್ರೀರಂಗಪಟ್ಟಣದಲ್ಲಿ, ಮೊಟ್ಟಮೊದಲ ಟಿಪ್ಪು ಕುರಿತ ಲಾವಣಿಯನ್ನು ಸಂಗ್ರಹಿಸಿದ್ದನು.

ಅಲ್ಲಿಂದ ಮುಂದೆ ಅನೇಕ ಲಾವಣಿಗಳು ಕರ್ನಾಟಕದ ತುಂಬಾ ಹುಟ್ಟಿಕೊಂಡವು. ಇವುಗಳಲ್ಲಿ “ಭೇಷಕ್ ತಮಾಶಾ ಟೈಗರ್ ನಿಶಾನಾ ಟಿಪ್ಪು ಸುಲ್ತಾನನ ಹೆಸರಾಯ್ತು, ಮಸಲತ್ ಮಾಡಿದ ಮೀರ್ ಸಾದಿಕನಿಗೆ ದೇಶದ್ರೋಹಿ ಎಂಬ ಹೆಸರಾಯ್ತು” ಎಂದು ಶುರುವಾಗುವ ಲಾವಣಿಯು ಬಹಳ ಪ್ರಸಿದ್ಧವಾಯಿತು.

ಜಾನಪದ ಮನಸ್ಸು ಚರಿತ್ರೆಯನ್ನು ನಿಷ್ಠುರ ರಾಜಕೀಯ ಪ್ರe್ಞÉಯಲ್ಲಿ ಗ್ರಹಿಸುವುದಿಲ್ಲ. ಬದಲಿಗೆ ಮನುಷ್ಯ ಸ್ವಭಾವದ ಗುಣ ದೋಷಗಳಲ್ಲಿ, ನೈತಿಕತೆಯಲ್ಲಿ ಗ್ರಹಿಸುತ್ತದೆ. ಬಹಳ ಸಲ ಈ ನೈತಿಕ ಚೌಕಟ್ಟು, ಸಂಕೀರ್ಣವಾದ ರಾಜಕೀಯ ಸಾಮಾಜಿಕ ಧಾರ್ಮಿಕ ಸಂಘರ್ಷಗಳನ್ನು ಸರಳೀಕರಿಸುತ್ತದೆ.

ಆದರೆ ಅದು ಶಕ್ತಿಶಾಲಿ ವ್ಯವಸ್ಥೆಯೊಂದರ ವಿರುದ್ಧ ಹೋರಾಡುವ ದುರ್ಬಲರ ಸೋಲು ನೋವು ಹಾಗೂ ಸಾವುಗಳ ಜತೆಯಲ್ಲಿ ಸದಾ ಇರುತ್ತದೆ; ಅವರ ಮಾನವೀಯ ಸಂಕಟಗಳನ್ನು ಆಪ್ತವಾಗಿ ಚಿತ್ರಿಸುತ್ತದೆ. ಕೋಮುವಾದಿ ಚರಿತ್ರೆ ತಳೆಯಲಾಗದ ನಿಲುವನ್ನು ಅದು ತಳೆಯುತ್ತದೆ. ಟಿಪ್ಪು ಲಾವಣಿಗಳ ಒಳಗಿನ ರಾಜಕೀಯ ನಿಲುವು ಕೂಡ ಇದೇ ಆಗಿದೆ.

ಇಲ್ಲೇ ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ, ಚರಿತ್ರೆಕಾರರು ಹೆಮ್ಮೆಯಿಂದ ವರ್ಣಿಸುವ ಕರ್ನಾಟಕವನ್ನು ಆಳಿದ ಸುಪ್ರಸಿದ್ಧ ದೊರೆಗಳನ್ನು ಕುರಿತು ಜನ ಹಾಡು ಕಟ್ಟಲಿಲ್ಲ? ಯಾಕೆ ಕಂಪಿಲಿಯ ಕುಮಾರರಾಮ, ಪಿರಿಯಾಪಟ್ಟಣದ ವೀರರಾಜ, ಟಿಪ್ಪು, ಸುರಪುರದ ವೆಂಕಟಪ್ಪ ನಾಯಕ, ಚಿತ್ರದುರ್ಗದ ಮದಕರಿ ನಾಯಕ, ಸಂಗೊಳ್ಳಿ ರಾಯಣ್ಣ, ತರೀಕೆರೆಯ ಸರ್ಜಾ ಹನುಮಪ್ಪ ನಾಯಕ, ಕಿತ್ತೂರ ಚನ್ನಮ್ಮ, ಮುಂಡರಗಿ ಭೀಮರಾಯ, ಮೈಲಾರದ ಮಹದೇವಪ್ಪ, ಕನ್ನೇಶ್ವರದ ರಾಮ- ಮುಂತಾದ ಕೆಲವೇ ಚಾರಿತ್ರಿಕ ವ್ಯಕ್ತಿಗಳನ್ನು ಅದು ತನ್ನ ಸಾಂಸ್ಕøತಿಕ ವೀರರನ್ನಾಗಿ ಸ್ವೀಕರಿಸಿತು? ಇವರಲ್ಲಿ ಬಹಳ ಜನ ಟಿಪ್ಪುವಿನಂತೆ ದೊಡ್ಡರಾಜ್ಯ ಕಟ್ಟಿ ಆಳಿದವರಲ್ಲ. ಕೇವಲ ತುಂಡರಸರು ಅಥವಾ ಅವರ ಭಂಟರು.

ಜಾನಪದವು ಒಬ್ಬ ವ್ಯಕ್ತಿಯನ್ನು ತಮ್ಮ ಹಾಡಿನ ನಾಯಕನಾಗಿ ಆಯ್ದುಕೊಳ್ಳಲು ಮುಖ್ಯವಾಗಿ ಎರಡು ಮಾನದಂಡಗಳನ್ನು ಇಟ್ಟುಕೊಂಡಂತೆ ಕಾಣುತ್ತದೆ.

1. ಸಾಮಾನ್ಯ ವ್ಯಕ್ತಿ ಅಸಾಮಾನ್ಯ ಸಾಹಸ-ಸಾಮಥ್ರ್ಯ ತೋರಿ ದೊಡ್ಡದಾಗಿ ಬೆಳೆಯುವುದು. ಜನಪದ ಕಥೆಗಳ ನಾಯಕರು ಕಡ್ಡಾಯವಾಗಿ ಇಂಥವರು;

2. ಬೃಹತ್ ಶಕ್ತಿಯೊಂದನ್ನು ಧೈರ್ಯದಿಂದ ಮುಖಾಮುಖಿ ಮಾಡುವುದು. ಸಂಘರ್ಷದ ಬಳಿಕ ಸೋಲುವುದು ಅಥವಾ ಸಾಯುವುದು. ಟಿಪ್ಪುವನ್ನೊಳಗೊಂಡಂತೆ ಮೇಲೆ ಉಲ್ಲೇಖಿಸಿದ ಸಾಂಸ್ಕøತಿಕ ಮತ್ತು ಚಾರಿತ್ರಿಕ ನಾಯಕರು ಹೀಗೆ ಹೋರಾಡಿ ಹುತಾತ್ಮರಾದವರು.

ಕುಮಾರ ರಾಮನು ದೆಹಲಿ ಸುಲ್ತಾನರ, ಪಿರಿಯಾಪಟ್ಟಣದ ವೀರರಾಜನು ಮೈಸೂರು ಅರಸರ, ಸಿರುಮಣ ನಾಯಕನು ವಿಜಯನಗರ ಅರಸರ ಹಾಗೂ ಮದಕರಿ ನಾಯಕನು ಹೈದರಾಲಿಯ ವಿರುದ್ಧ ಕಾದುವಾಗ ಸೋಲನುಂಡವರು ಅಥವಾ ಮಡಿದವರು; ಆದರೆ ಹೆಚ್ಚಿನ ವೀರರು ಕಂಪನಿ ಸರ್ಕಾರದ ವಿರುದ್ಧ ಕಾದು ಮಡಿದವರು.

ಯಾಕೆ ಕೃಷ್ಣದೇವರಾಯ ಅಥವಾ ಕಂಠೀರವ ನರಸರಾಯರ ಬಗ್ಗೆ ಲಾವಣಿ ಇಲ್ಲ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ತಾನೇ ಸ್ಪಷ್ಟವಾಗಿದೆ. ದೊಡ್ಡಶಕ್ತಿಯಾಗಿ ದುರ್ಬಲರನ್ನು ಹೊಸಕಿ ಹಾಕಿದವರು ಅಥವಾ ದೊಡ್ಡ ಶಕ್ತಿಯ ಜೊತೆಯ ರಾಜಿ ಮಾಡಿಕೊಂಡು ನಿರುಮ್ಮಳವಾಗಿ ಇದ್ದವರು, ಜನಪದರ ನಾಯಕರಾಗಲಿಲ್ಲ. ಬದಲಿಗೆ ತಮ್ಮ ಆಸ್ಥಾನ ಕವಿಗಳು ಬರೆದ ಕಾವ್ಯಗಳ ನಾಯಕರಾದರು, ಇಲ್ಲವೇ ಅರಮನೆಯ ಕಲಾವಿದರು ರಚಿಸಿದ ಭಿತ್ತಿಚಿತ್ರಗಳಿಗೆ ರೂಪದರ್ಶಿಗಳಾದರು. ಮೈಸೂರು ಅರಮನೆಯಲ್ಲಿರುವ ಭಿತ್ತಿಚಿತ್ರಗಳು ಇಂತಹವು.

ಟಿಪ್ಪು ‘ಮೈಸೂರು ಹುಲಿ’ ಎಂದೂ ಹೆಸರಾಗಿದ್ದಾನಷ್ಟೆ. ಹುಲಿಪಟ್ಟೆ ಅವನ ಧ್ವಜ ಚಿಹ್ನೆಯಾಗಿತ್ತು. ಬ್ರಿಟಿಶರ ಪಾಲಿಗೆ ಆತ ಹುಲಿಯಂತಿದ್ದ ಎಂಬರ್ಥದಲ್ಲಿ ಜನ ಈ ಬಿರುದನ್ನು ನೀಡಿರಬಹುದು. ಟಿಪ್ಪು ಬ್ರಿಟಿಷ್ ಸೈನಿಕರ ಮೇಲೆ ಹುಲಿಯೊಂದು ಎರಗಿ ಅಕ್ರಮಣ ಮಾಡುತ್ತಿರುವಂತೆ ಒಂದು ಆಟಿಕೆಯಂತ್ರ ಮಾಡಿಸಿದ್ದ. ಕೀಲಿ ಕೊಟ್ಟರೆ ಹುಲಿ ಗುರ್ರೆಂದು ಶಬ್ದ ಮಾಡುತ್ತ, ಸೈನಿಕನು ಚೀತ್ಕರಿಸುತ್ತಾ ಇರುವಂತೆ ಅದನ್ನು ನಿರ್ಮಿಸಲಾಗಿತ್ತು.

(ಯುದ್ಧಾನಂತರ ಅರಮನೆಯ ಸೂರೆಯಲ್ಲಿ ಸಿಕ್ಕ ಈ ಯಂತ್ರವನ್ನು ದೋಚಿದ ಬ್ರಿಟಿಶರು ಅದನ್ನು ಲಂಡನ್ನಿಗೆ ಕಳುಹಿಸಿಕೊಟ್ಟಿದ್ದು, ಈಗಲೂ ಅದು ಬ್ರಿಟಿಷ್ ಮ್ಯೂಸಿಯಂನಲ್ಲಿದೆ.) ಆದರೆ ಟಿಪ್ಪುವಿನ ಜನಪ್ರಿಯ ಚಿತ್ರದಲ್ಲಿ, ಎಗರಿ ನಿಂತಿರುವ ಹುಲಿಯ ಬಾಯನ್ನು ಆತ ತನ್ನ ಎರಡು ಕೈಯಲ್ಲಿ ಸೀಳುತ್ತಿರುವ ಭಂಗಿ ಇದೆ. ಬಹುಶಃ ಕಲಾವಿದನ ಕಲ್ಪನೆಯಲ್ಲಿ ಈ ಹುಲಿ, ಬರೀ ಹುಲಿಯೊ ಕಂಪನಿ ಸರ್ಕಾರವೊ ತಿಳಿಯದು. ಜನಪದರಿಗೆ ತಮ್ಮ ನಾಯಕರು ಅಥವಾ ದೈವಗಳು ಒಂದೋ ಹುಲಿ ಸವಾರಿ ಮಾಡಬೇಕು. ಇಲ್ಲವೇ ಹುಲಿಯನ್ನು ಕೊಲ್ಲಬೇಕು.

ಈ ಹುಲಿ ಪ್ರತಿಮೆಗೆ ಇನ್ನೊಂದು ಆಯಾಮವಿದ್ದಂತಿದೆ. ಅದು ಮೊಹರಂ ಹಬ್ಬದ ಹುಲಿವೇಷ. ಮೊಹರಂ ಅಥವಾ ಕರ್ಬಲಾ ಹಾಡುಗಳ ನಾಯಕರು, ತಮಗೆ ನ್ಯಾಯವಾಗಿ ಸಿಗಬೇಕಾಗಿದ್ದ ರಾಜ್ಯಾಧಿಕಾರವನ್ನು ಪಡೆಯಲೆಂದು ಮಾಡಿದ ಸಂಘರ್ಷದಲ್ಲಿ, ಟಿಪ್ಪುವಿನಂತೆಯೆ ರಣರಂಗದಲ್ಲಿ ಪ್ರಾಣ ತೆತ್ತವರು. ಎಂತಲೇ ಅವರು ಜನಪದರ ಸಾಂಸ್ಕøತಿಕ ನಾಯಕರೂ ಆಗಿದ್ದಾರೆ.

ಕರ್ಬಲಾ ಯುದ್ಧದ ದಾರುಣ ದುರಂತಗಳನ್ನು ಚಿತ್ರಿಸುವ ಪರಂಪರೆಗೆ ಟಿಪ್ಪುವನ್ನು ಚಿತ್ರಿಸುವುದು ಕಷ್ಟವಾಗಿರಲಿಕ್ಕಿಲ್ಲ. ಇದಕ್ಕೆ ಪೂರಕವಾಗಿ ಟಿಪ್ಪು ಎರಡುಕಾಲ ಮೇಲೆ ನಿಂತಿರುವ ಪಟ್ಟೆಹುಲಿಯ ಬಾಯಿಗೆ ಕೈಹಾಕಿ ಅದನ್ನು ಸೀಳುತ್ತಿರುವ ಚಿತ್ರಪಟವೊಂದು ಬಹುಕಾಲ ಮೈಸೂರು ಸೀಮೆಯ ಮುಸ್ಲಿಮರ ಮನೆಗಳಲ್ಲಿ ಕಾಣಬಹುದಿತ್ತು.

ಬ್ರಿಟಿಶರು ಟಿಪ್ಪುವನ್ನು ಕೊಂದು ಮೈಸೂರು ರಾಜ್ಯ ವಶಪಡಿಸಿಕೊಂಡ ದಿನದಿಂದ ಈ ದೇಶ ಬಿಟ್ಟುಹೋಗುವ ತನಕ, ಬ್ರಿಟಿಶರ ವಿರುದ್ಧ ಹೋರಾಡಿದ ನಾಯಕರ ಸಂಕಟಗಳನ್ನು ಎದೆ ಬಿರಿಯುವಂತೆ ವರ್ಣಿಸುತ್ತಾ ಜನರ ನಡುವಿದ್ದ ಈ ಲಾವಣಿಗಳು, ಮೂಡಿಸಿರಬಹುದಾದ ರಾಜಕೀಯ ಪ್ರತಿರೋಧ ಎಂಥದ್ದಿರಬಹುದು? ಚರಿತ್ರೆಯನ್ನು ವರ್ತಮಾನದ ರಾಜಕೀಯ ಕ್ರಿಯೆಗಳಿಗೆ ಪ್ರೇರಣೆಯಾಗಿಸಿಕೊಳ್ಳುವ ಸಮುದಾಯದ ಪ್ರತಿಭೆಯ ಸ್ವರೂಪ ಎಂತಹುದ್ದು? ಇದನ್ನೆಲ್ಲ ಸರಳೀಕರಿಸದೆ ನೋಡಲು ಸಾಧ್ಯವಾಗಬೇಕಿದೆ. ಟಿಪ್ಪು ಲಾವಣಿಗಳಲ್ಲಿ ಎರಡು ಸಂಗತಿಗಳು ಮುಖ್ಯವಾಗಿ ಕಾಣುತ್ತವೆ.

1. ಅನ್ಯಾಯಕ್ಕೊಳಗಾದ ಅಮಾಯಕರು ಗುಪ್ತ ಶತ್ರುಗಳಾಗಿ ಸೇಡು ತೀರಿಸಿಕೊಳ್ಳುವುದು: ಬೆಳಗಾವಿ ಜಿಲ್ಲೆಯಲ್ಲಿ ಸಿಕ್ಕಿರುವ ಲಾವಣಿಯಲ್ಲಿ ಪೂರ್ಣಯ್ಯನ ಸುಂದರ ಮಗಳನ್ನು ಟಿಪ್ಪು ಸೈನಿಕನೊಬ್ಬ ಕೆಡಿಸಿ ಬಿಡುತ್ತಾನೆ. ಈ ಅಪಮಾನ ನೋವುಗಳಿಂದ ಪೂರ್ಣಯ್ಯ ಇಡೀ ಟಿಪ್ಪು ರಾಜ್ಯವನ್ನೇ ಪತನ ಮಾಡಬೇಕೆಂದು ಶಪಥ ಮಾಡುತ್ತಾನೆ. ಯುದ್ಧದ ನಿರ್ಣಾಯಕ ವೇಳೆಯಲ್ಲಿ ಬ್ರಿಟಿಶರಿಗೆ ಕೋಟೆಗೆ ನುಗ್ಗುವಂತೆ ಸನ್ನೆ ಮಾಡುತ್ತಾನೆ. ಮಾಸ್ತಿಯವರು ಬರೆದಿರುವ ಕತೆಯಲ್ಲಿ ಕೂಡಾ, ಬಲಾತ್ಕಾರ ಮತಾಂತರಕ್ಕೆ ಒಳಗಾದ ನರಸಿಂಹನು (ಅಲಿಯಾಸ್ ಅಬ್ಬಾಸನು), ಮೈಸೂರು ರಾಣಿಯ ಪರವಾಗಿ ಬ್ರಿಟಿಶರ ಜೊತೆ ಸೇರಿ ಟಿಪ್ಪು ವಿರುದ್ಧ ಫಿತೂರಿ ಮಾಡಿ ಸೇಡು ತೀರಿಸಿಕೊಳ್ಳುತ್ತಾನೆ. ಈ ಮಿತ್‍ಗಳು ಏನನ್ನು ಹೇಳುತ್ತವೆ? ಟಿಪ್ಪು ಬ್ರಿಟಿಶರ ಅನ್ಯಾಯಕ್ಕೆ ಒಳಗಾದವನು ನಿಜ. ಆದರೆ ಅವನ ರಾಜ್ಯದಲ್ಲಿ ಅಸಹಾಯಕ್ಕೊಳಗಾದ ಅಸಹಾಯಕರೂ ಇದ್ದರೆಂದೇ? ಅವರ ಮನಸ್ಸು ಮುರಿದುದಕ್ಕಾಗಿ ಅವನು ಬೆಲೆ ತೆರಬೇಕಾಯಿತು ಎಂದೆ? ಎಲ್ಲ ಪ್ರಭುತ್ವಕ್ಕೂ ಹಿಂಸೆಯ ಮುಖವೊಂದು ಇದ್ದೇ ಇರುತ್ತದೆ.

2. ಆಪ್ತರೆನಿಸಿಕೊಂಡವರೇ ವಿಶ್ವಾಸ ದ್ರೋಹ ಮಾಡುವುದು; ರಾಜ್ಯವನ್ನು ರಕ್ಷಿಸುವ ಜವಾಬ್ದಾರಿ ಹೊತ್ತವರೇ ಕೇಡು ಬಯಸುವಂತಾಗುವುದು. ‘ಏನು ಮೋಸವಾಯಿತು’ ಎಂದು ಆರಂಭವಾಗುವ ಲಾವಣಿಯಲ್ಲಿ ಈ ಪಲ್ಲವಿ ರಿಪೀಟಾಗುತ್ತಾ ಗಾಢವಿಷಾದ ಸೂಸುತ್ತದೆ. ಮೀರ್‍ಸಾದಿಕ್, ಸೈಯದ್ ಸಾಹೇಬ್, ಖಮ್ರುದ್ದೀನ್ ಇವರು ಶ್ರೀರಂಗಪಟ್ಟಣದ ಪತನದಲ್ಲಿ ಮುಖ್ಯ ಫಿತೂರಿಗಾರರು. ಇವರೆಲ್ಲಾ ಟಿಪ್ಪುವಿನ ಮಂತ್ರಿಗಳು ಹಾಗೂ ದಂಡನಾಯಕರು. ಲಾವಣಿಗಳಲ್ಲಿ ಈ ವಿಶ್ವಾಸಘಾತುಕರ ಮೇಲೆ ಬಹಳ ಆಕ್ರೋಶ. `ಮೀರ್‍ಸಾದಿಕ್' ಎನ್ನುವುದು ಹಳೇ ಮೈಸೂರು ಸೀಮೆಯಲ್ಲಿ ವಿಶ್ವಾಸಘಾತ ವಂಚನೆಗಳ ಬದಲಿ ನುಡಿಗಟ್ಟಾಗಿದೆ.

‘ಮೀರ್‍ಸಾಬರ ಗೋರಿ ಮೇಲೆ ನೂರೊಂದು ಯಕಡ ಬಿತ್ತು’ ಎಂದು ಹೇಳುವಷ್ಟು ಕಟುವಾದ ಆಕ್ರೋಶ ಲಾವಣಿಗಳಲ್ಲಿದೆ. ಸೋಜಿಗವೆಂದರೆ, ಚರಿತ್ರೆಯಲ್ಲಿ ದಕ್ಷ ಮಂತ್ರಿಯಾಗಿ, ಹೈದರ್‍ನಂತಹ ಸಿಪಾಯಿಯನ್ನು ರಾಜನನ್ನಾಗಿಸಿ ಕಿಂಗ್‍ಮೇಕರ್ ಆಗಿ ಚಿತ್ರಣಗೊಳ್ಳುವ ದಿವಾನ್ ಪೂರ್ಣಯ್ಯನ ಹೆಸರು ಸಹ, ಮೈಸೂರು ಸೀಮೆಯ ಆಡುಮಾತಲ್ಲಿ ವಂಚನೆಯ ನುಡಿಗಟ್ಟು ಆಗಿರುವುದು. ``ಕೋಟೆ ಮೇಲೆ ಕೂತುಕೊಂಡು ಹಸಿರು ಬಾವುಟ ಹಿಡಿದುಕೊಂಡು ವಸ್ತ್ರ ಬೀಸಿ ಕರೆಯುತಾನೆ ಪೂರ್ಣಯ್ಯ ತಾಯಿಗಂಡ’’ ಎಂದು ಲಾವಣಿ ಕಟುವಾಗಿ ನುಡಿಯುತ್ತದೆ.

ಉಪ್ಪಿನ ಋಣಕ್ಕೆ ಎರಡು ಬಗೆದವನೆಂದು ಅವನನ್ನು ವರ್ಣಿಸುತ್ತದೆ. ಟಿಪ್ಪುವಿನ ಮೇಲೆ ಹುಟ್ಟಿರುವ ಲಾವಣಿಗಳು ಕರ್ನಾಟಕದ ಜನಸಮುದಾಯದ ಚರಿತ್ರೆಯನ್ನು ಗ್ರಹಿಸುವ, ರಾಜಕೀಯ ಪ್ರತಿರೋಧ ಹುಟ್ಟಿಸುವ, ಮಾನವೀಯ ಸಂಕಟಗಳಿಗೆ ಮಿಡಿಯುವ ಅನೇಕ ಪರಿಯನ್ನು ಸೂಚಿಸುತ್ತವೆ. ದಮನಿತರ ಸೋತವರ ಜೊತೆ ಇರುವ ರಾಜಕಾರಣದ ಭಾಗವಾಗಿ ಇವು ರೂಪುಗೊಂಡಿವೆ.

ನಿನ್ನಯ ಜನಕೆ ಪೂರ್ಣಯ್ಯ ಮನ್ನಣೆ ಒಳಗಿದ್ದ
ಸನ್ನೆಯಿಂದಲೇ ಕೊಟ್ಟ ನಿನ್ನ ಪಟ್ಟಣಗಳ
ಹನ್ನೆರಡು ಗಂಟೆ ಹೊತ್ತು ನಿಂತ ಮಧ್ಯಾಹ್ನದಲ್ಲಿ
ಏನು ಮೋಸವಾಯಿತೋ ಸಿರಿರಂಗಪಟ್ನ ಗಳಿಗೆಯಲ್ಲಿ ಸೂರೆಹೋಯಿತೋ

ಈ ಹೊತ್ತಿನ ಭಾರತದ ಆಳುವ ವರ್ಗಗಳ ನೀತಿಯನ್ನು ಗಮನಿಸಿದರೆ, ಅವರಲ್ಲಿ ಬಹಳ ಜನ ಮನ್ನಣೆ ಒಳಗಿದ್ದವರಾಗಿ ಸನ್ನೆಯಿಂದಲೆ ನಮ್ಮ ಸಿರಿಯ ರಂಗಪಟ್ಟಣಗಳನ್ನು ಸೂರೆಹೊಡೆಯಲು ಶತ್ರುಗಳನ್ನು ಆಹ್ವಾನಿಸುವ ನೀತಿಯನ್ನುಳ್ಳವರು ಅನಿಸತೊಡಗುತ್ತದೆ.

ಅದರಲ್ಲೂ ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರವು ತೆಗೆದುಕೊಂಡಿರುವ ನಿರ್ಣಯಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸಿ, ನಮ್ಮ ರೈತರ ನೀರು ಭೂಮಿ ಕಾಡುಗಳನ್ನು ಕೊಡುತ್ತಿರುವ ಈ ಆಳುವವರು, ಮೈಸೂರು ಅರಮನೆಯ ಭಿತ್ತಿಚಿತ್ರಗಳಲ್ಲಿ ಬ್ರಿಟಿಶರ ಜೊತೆ ಸುಖಕರ ಒಪ್ಪಂದಗಳನ್ನು ಮಾಡಿಕೊಂಡು ಕುಳಿತ ಅರಸರನ್ನು ನೆನಪಿಸುತ್ತಾರೆ.

ಎಂತಲೇ ವಸಾಹತುಶಾಹಿಗಳ ಬಗ್ಗೆ ರಾಜಿ ಮಾಡಿಕೊಳ್ಳದ, ಸಮೃದ್ಧ ಮೈಸೂರು ರಾಜ್ಯವನ್ನು ಕಟ್ಟುವ ಕನಸನ್ನು ಕಟ್ಟಿಕೊಂಡಿದ್ದ ಟಿಪ್ಪುವನ್ನು ಮತೀಯವಾದಿಗಳ ವಿರೋಧಿಸುವುದು ಆಶ್ಚರ್ಯವಲ್ಲ. ಇವರು ಏಕಕಾಲಕ್ಕೆ ಅಮೆರಿಕದ ಚೀನಾದ ಅಧ್ಯಕ್ಷರಿಗೆ ಹಡದಿ ಹಾಸಿ ಕರೆಯುವುದು, ಅವರು ಬಂದಾಗ ಭಯಭಕ್ತಿ ತೋರುವುದು; ಆದರೆ ಶ್ರೀಲಂಕಾ ಮಾಲ್ಡೀವ್ಸ್ ಬಾಂಗ್ಲಾ ನೇಪಾಳ ಮುಂತಾದ ಸಣ್ಣಪುಟ್ಟ ದೇಶಗಳನ್ನು ಹೆದರಿಸುವುದೂ ಕೂಡಾ ಇದೇ ತರ್ಕಕ್ಕೆ ಅನುಸಾರವಾಗಿದೆ.

#ಚಿತ್ರ_ಹಾದಿಮನಿ

ಐತಿಹಾಸಿಕ ಪ್ರಮುಖ ಘಟನೆಗಳ ಉಪಯುಕ್ತ ಸಂಪೂರ್ಣ ಮಾಹಿತಿ

ನಮ್ಮ ದೇಶದ ಸಂಪೂರ್ಣ ಮಾಹಿತಿ 
  ಕ್ರಿ.ಪೂ.2005-1500. ಹರಪ್ಪ ನಾಗರಿಕತೆ.
 ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ.
 ಕ್ರಿ.ಪೂ.1000 ಕಬ್ಬಿಣದ ಬಳಕೆ.
 ಕ್ರಿ.ಪೂ.1000-500 ವೇದಗಳ ಕಾಲ
ಕ್ರಿ.ಪೂ.563-483 ಗೌತಮ ಬುದ್ಧನ ಕಾಲ
ಕ್ರಿ.ಪೂ.540-468 ಮಹಾವೀರನ ಕಾಲ
ಕ್ರಿ.ಪೂ.542-490 ಹರ್ಯಂಕ ಸಂತತಿ
ಕ್ರಿ.ಪೂ.413-362 ಶಿಶುನಾಗ ಸಂತತಿ.
ಕ್ರಿ.ಪೂ.362-324 ನಂದ ಸಂತತಿ.
ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ
ಕ್ರಿ.ಪೂ.324-183 ಮೌರ್ಯ ಸಂತತಿ.
ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ
ಕ್ರಿ.ಪೂ.298-273 ಬಿಂದುಸಾರನ ಕಾಲ.
ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ.
ಕ್ರಿ.ಪೂ.185-147 ಶುಂಗ ಸಂತತಿ.
ಕ್ರಿ.ಪೂ.73-28 ಕಣ್ವರ ಆಳ್ವಿಕೆ.
ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ.
ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ.
ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ)
ಕ್ರಿ.ಶ.78-101 ಕಾನಿಷ್ಕನ ಕಾಲ.
ಕ್ರಿ.ಶ.78 ಶಕ ಸಂವತ್ಸರ
: ಕ್ರಿ.ಶ.320-540 ಗುಪ್ತ ಸಾಮ್ರಜ್ಯ.
 ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ.
ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ.
ಕ್ರಿ.ಶ.535-757 ಬದಾಮಿಯ ಚಾಲುಕ್ಯರು.
 ಕ್ರಿ.ಶ.300-888 ಕಂಚಿಯ ಪಲ್ಲವರು.
 ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ.
ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್.
 ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ.
 ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು.
 ಕ್ರಿ.ಶ.760-1142 ಬಂಗಾಳದ ಪಾಲರು.
ಕ್ರಿ.ಶ.800-1036 ಕನೌಜಿನ ಪ್ರತಿಹಾರರು
ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು.
 ಕ್ರಿ.ಶ.907-1256 ಚೋಳ ಸಾಮ್ರಾಜ್ಯ. 
ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು.
 ಕ್ರಿ.ಶ.974-1233 ಮಾಳ್ವದ ಪಾರಮಾರರು.
ಕ್ರಿ.ಶ. 1118-1190 ಬಂಗಾಳದ ಸೇನರು.
ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು.
 ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ.
 ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ.
 ಕ್ರಿ.ಶ.1290-1320  ಖಿಲ್ಜಿ ಸಂತತಿ.
ಕ್ರಿ.ಶ.1320-1414 ತುಘಲಕ್ ಸಂತತಿ.
 ಕ್ರಿ.ಶ.1414-1451 ಸೈಯದ್ ಸಂತತಿ.
ಕ್ರಿ.ಶ. 1451-1525 ಲೂಧಿ ಸಂತತಿ.
ಕ್ರಿ.ಶ.1336-1649 ವಿಜಯನಗರದ ಆಳ್ವಕೆ.
 ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ.
 ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ.
ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ.
 ಕ್ರಿ.ಶ.1627-1680 ಶಿವಾಜಿಯ ಕಾಲ.
 ಕ್ರಿ.ಶ.1757 ಪ್ಲಾಸಿ ಕದನ.
 ಕ್ರಿ.ಶ.1764 ಬಕ್ಸಾರ ಕದನ.
 ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ.
ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ.
 ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ.
 ಕ್ರಿ.ಶ.1824-ಕಿತ್ತೂರು ದಂಗೆ.
 ಕ್ರಿ.ಶ.1857 ಸಿಪಾಯಿ ದಂಗೆ.
 ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ.
 ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ.
🔶1905- ಬಂಗಾಳ ವಿಭಜನೆ.
🔶1906-ಮುಸ್ಲಿಂ ಲೀಗ್ ಸ್ಥಾಪನೆ.
🔶1907- ಸೂರತ್ ಅಧಿವೇಶನ/ಸೂರತ್ ಒಡಕು
🔶1909- ಮಿಂಟೋ ಮಾಲ್ರೇ ಸುಧಾರಣೆ.
🔶1911- ಕಲ್ಕತ್ತಾ ಅಧಿವೇಶನ.
🔶1913 -ಗದ್ದಾರ್ ಪಕ್ಷ ಸ್ಥಾಪನೆ.
🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ.
🔶1916 -ಲಕ್ನೋ ಅಧಿವೇಶನ.
🔶1917 -ಚಂಪಾರಣ್ಯ ಸತ್ಯಾಗ್ರಹ
🔶1918 -ಹತ್ತಿ ಗಿರಣಿ ಸತ್ಯಾಗ್ರಹ'
🔶1919 -ರೌಲತ್ ಕಾಯಿದೆ.
🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ.
🔶1920 -ಖಿಲಾಪತ್ ಚಳುವಳಿ.
🔶1922 -ಚೌರಾಚೌರಿ ಘಟನೆ.
🔶1923 -ಸ್ವರಾಜ್ ಪಕ್ಷ ಸ್ಥಾಪನೆ.
🔶1927-ಸೈಮನ್ ಆಯೋಗ.
🔶1928- ನೆಹರು ವರದಿ.
🔶1929- ಬಾ‌ಡ್ರೋಲೀ ಸತ್ಯಾಗ್ರಹ.
🔶1930 -ಕಾನೂನ ಭಂಗ ಚಳುವಳಿ.
🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು.
🔶1937 -ಪ್ರಾಂತೀಯ ಚುಣಾವಣೆ
🔶1939 -ತ್ರೀಪುರಾ ಬಿಕ್ಕಟ್ಟು.
🔶1940 -ಅಗಷ್ಟ ಕೊಡುಗೆ.
🔶1942 -ಕ್ರಿಪ್ಸ ಆಯೋಗ
🔶1945 -ಸಿಮ್ಲಾ ಸಮ್ಮೇಳನ
🔶1946- ಕ್ಯಾಬಿನೆಟ್ ಆಯೋಗ
🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ.
⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ...
⭐1973-ಕರ್ನಾಟಕ ಮರುನಾಮಕರಣ.

#ಪ್ರಮುಖ_ಹುದ್ದೆಗಳ_ಅವದಿ 🍡

⚫ ರಾಷ್ಟ್ರಪತಿ=5ವರ್ಷ
⚫ ಉಪರಾಷ್ಟ್ರಪತಿ=5ವರ್ಷ
⚫ ರಾಜ್ಯ ಸಭಾ ಸದಸ್ಯ=6ವರ್ಷ
⚫ ಲೋಕ ಸಭಾ ಸದಸ್ಯ=5ವರ್ಷ
⚫ ರಾಜ್ಯಪಾಲರು= 5ವರ್ಷ
⚫ ವಿಧಾನ ಸಭಾ ಸದಸ್ಯ=5ವರ್ಷ
⚫ ವಿಧಾನ ಪರಿಷತ್ ಸದಸ್ಯ=6ವರ್ಷ
📌📌📌📌📌📌📌
🍡 ಚುನಾವಣೆ ಸ್ಪರ್ಧಿಸುವ ವಯಸ್ಸು 🍡
⚫ ರಾಷ್ಟ್ರಪತಿ=35ವರ್ಷ
⚫ ಉಪರಾಷ್ಟ್ರಪತಿ=35ವರ್ಷ
⚫ ರಾಜ್ಯ ಸಭಾ ಸದಸ್ಯ=30ವರ್ಷ
⚫ ಲೋಕ ಸಭಾ ಸದಸ್ಯ=25ವರ್ಷ
⚫ ರಾಜ್ಯಪಾಲರು= 35ವರ್ಷ
⚫ ವಿಧಾನ ಸಭಾ ಸದಸ್ಯ=25ವರ್ಷ
⚫ ವಿಧಾನ ಪರಿಷತ್ ಸದಸ್ಯ=30ವರ್ಷ
⚫ ಗ್ರಮ ಪಂಜಾಯತ್ ಸದಸ್ಯ=21ವರ್ಷ
⚫ ಮತದಾನ ವಯಸ್ಸು=18ವರ್ಷ
📌📌📌📌📌📌📌
🍡 ಭಾರತದ ನೌಕಾಪಡೆ ಕಛೇರಿ🍡
⚫ ಪಶ್ಚಿಮ ನೌಕಾಪಡೆ=ಮುಂಬಯಿ
⚫ ಪೂರ್ವ ನೌಕಾಪಡೆ=ವಿಶಾಖಪಟ್ಟಣಂ
⚫ ದಕ್ಷಿಣ ನೌಕಾಪಡೆ=ಕೊಚ್ಚಿ
⚫ ಆಗ್ನೇಯ ನೌಕಾಪಡೆ=ಅಂಡಮಾನ್ ನಿಕೋಬಾರ್
📌📌📌📌📌📌📌
🍡ಪ್ರಾಣಿಗಳ ಉಸಿರಾಟದ ಅಂಗಗಳು🍡
⚫ಮೀನು=ಕಿವಿರು
⚫ಕಪ್ಪೆ=ತೇವಭರಿತ ಚರ್ಮ ಹಾಗೂ ಶ್ವಾಸಕೋಶ
⚫ಸಸ್ತನಿ= ಶ್ವಾಸಕೋಶ
⚫ಎರೆಹುಳು ಜಿಗಣಿ= ಚರ್ಮ
⚫ಕೀಟಗಳು=ಟಕ್ರಯಾ(ಶ್ವಾಸನಾಳ)
📌📌📌📌📌📌📌
🍡ಪ್ರಪಂಚದ ಪ್ರಮುಖ ಸಸ್ಯವರ್ಗಗಳು🍡
⚫ಅಮೆರಿಕಾ=ಪ್ರೈರಿ ಹುಲ್ಲುಗಾವಲು
⚫ದಕ್ಷಿಣ ಅಮೆರಿಕಾ=ಪಂಪಸ್ ಹುಲ್ಲುಗಾವಲು
⚫ಆಫ್ರಿಕಾ=ಸವನ್ನಾ ಹುಲ್ಲುಗಾವಲು
⚫ದಕ್ಷಿಣ ಆಫ್ರಿಕಾ=ವೈಲ್ಡಿ ಹುಲ್ಲುಗಾವಲು
⚫ಆಸ್ಟ್ರೇಲಿಯಾ=ಡೌನ್ಸ್ ಹುಲ್ಲುಗಾವಲು
⚫ಏಷ್ಯಾ=ಸ್ಟೆಪಿಸ್ ಹುಲ್ಲುಗಾವಲು
⚫ಯುರೋಪ್=ಸ್ಟೆಪಿಸ್ ಹುಲ್ಲುಗಾವಲು
⚫ಗಯಾನಾ=ಲಾನಸ್ ಹುಲ್ಲುಗಾವಲು
⚫ಹಂಗೇರಿ=ಪುಷ್ಟಿಸ್ ಹುಲ್ಲುಗಾವಲು
🍡ಕಣಿವೆ ಮಾರ್ಗ🍡
⚫ಶಿವಮೊಗ್ಗದಿಂದ ಉಡುಪಿ=ಆಗುಂಬೆ ಘಾಟ
⚫ಚಿಕ್ಕಮಂಗಳೂರುದಿಂದ ಮಂಗಳೂರು=ಚಾರ್ಮಡಿ ಘಾಟ
⚫ಶಿರೂರುದಿಂದ ಬೈಂದೂರು=ಕೊಲ್ಲೂರು ಘಾಟ
* ಭಾರತದ ನಗರಗಳು ಮತ್ತು ಅವುಗಳ ಅಡ್ಡಹೆಸರುಗಳು
1.ವಿಶಾಖಪಟ್ಟಣ     --  ಭಾಗ್ಯನಗರ,(city of destiny)
2.ವಿಜಯವಾಡ      --  ಗೆಲುವಿನ ಸ್ಥಾನ (place of victory)  
3.ಗುಂಟುರು         --  ಮೆಣಸಿನಕಾಯಿಗಳ ನಗರ, ಮಸಾಲೆ ನಗರ 
 

 ಉತ್ತರಪ್ರದೇಶ
1.ಆಗ್ರಾ           --  ತಾಜನಗರಿ
2.ಕಾನ್ಪುರ         --  ವಿಶ್ವದ ಚರ್ಮದ ನಗರ, ಉತ್ತರ ಭಾರತದ ಮಾಂಚೆಸ್ಟರ್
3.ಲಕ್ನೋ          --  ನವಾಬರ ನಗರ (city of nawab's)
4.ಪ್ರಯಾಗ        --  ದೇವರ ಮನೆ
5.ವಾರಾಣಾಸಿ     --  ಭಾರತದ ಧಾರ್ಮಿಕ & ಆಧ್ಯಾತ್ಮಿಕ ನಗರ, ದೀಪಗಳ ನಗರ, ಭೂಮಿಯ ಮೇಲಿರುವ ಜೀವಂತ ಹಳೆಯ ನಗರ, ಪವಿತ್ರ ನಗರ.

ಗುಜರಾತ
1. ಅಹಮದಾಬಾದ   --  ಭಾರತದ ಬೋಸ್ಟಾನ್, ಭಾರತದ ಮಾಂಚೆಸ್ಟರ್, 
2.ಸೂರತ್           --   ಭಾರತದ ವಜ್ರಗಳ ನಗರ, ಭಾರತದ ಬಟ್ಟೆಯ ನಗರ.
ಕರ್ನಾಟಕ
1.ಬೆಂಗಳೂರು    --  ಭಾರತದ ಎಲೆಕ್ಟ್ರಾನಿಕ ನಗರ, ಉದ್ಯಾನ ನಗರ, ಭಾರತದ ಸಿಲಿಕಾನ ಕಣಿವೆ, ವೇತನದಾರರ ಸ್ವರ್ಗ, ಬಾಹ್ಯಾಕಾಶ ನಗರ, ಭಾರತದ ವಿಜ್ಞಾನ ನಗರ.
2.ಕೂರ್ಗ್ಸ           --   ಭಾರತದ ಸ್ಕಾಟ್ಲೆಂಡ್.
3.ಮೈಸೂರ         --   ಸಾಂಸ್ಕ್ರತಿಕ ನಗರಿ.
ಓಡಿಸ್ಸಾ
1.ಭುವನೇಶ್ವರ    --  ಭಾರತದ ದೇವಾಲಯ ನಗರ
ತಮಿಳುನಾಡು
1.ಕೊಯಮತ್ತೂರು   --    ಭಾರತದ ಬಟ್ಟೆ ನಗರ, ಭಾರತದ ಎಂಜಿನಿಯರರ ನಗರ, ದಕ್ಷಿಣ ಭಾರತದ ಮಾಂಚೆಸ್ಟರ್
2.ಮಧುರೈ           --    ಪೂರ್ವದ ಅಥೆನ್ಸ್. ಹಬ್ಬಗಳ ನಗರ, ನಿದ್ರಾರಹಿತ ನಗರ(sleepless city)
3.ಸಲೇಂ             --    ಮಾವಿನ ಹಣ್ಣಿನ ನಗರ. 
4.ಚೆನ್ನೈ              --    ಭಾರತದ ಬ್ಯಾಂಕಿಂಗ್ ರಾಜಧಾನಿ, ದಕ್ಷಿಣ ಭಾರತದ ಹೆಬ್ಬಾಗಿಲು, ಭಾರತದ ಆರೋಗ್ಯ ರಾಜಧಾನಿ, auto hub of india
ಪಶ್ಚಿಮ ಬಂಗಾಳ
1.ಡಾರ್ಜಿಲಿಂಗ್    --   ಬೆಟ್ಟಗಳ ರಾಣಿ,
2.ದುರ್ಗಾಪೂರ    --   ಭಾರತದ ರೋರ್
3.ಮಾಲ್ಡಾ         --   ಮಾವಿನ ಹಣ್ಣಿನ ನಗರ. 
4.ಕಲ್ಕತ್ತ          --    ಅರಮನೆಗಳ ನಗರ. 
ಜಾರ್ಖಂಡ್ 
1.ಧನಬಾದ್         --   ಭಾರತದ ಕಲ್ಲಿದ್ದಲು ರಾಜಧಾನಿ.
2.ಜಮಶೇಡಪುರ     --   ಭಾರತದ ಸ್ಟೀಲ್ ನಗರ
ತೆಲಂಗಾಣ
1.ಹೈದ್ರಾಬಾದ್      --  ಮುತ್ತುಗಳ ನಗರ, ಹೈಟೆಕ್ ಸಿಟಿ.
ರಾಜಸ್ತಾನ    
1.ಜೈಪುರ           --  ಗುಲಾಬಿ ನಗರ, ಭಾರತದ ಪ್ಯಾರಿಸ್
2.ಜೈಸಲ್ಮೇರ್       --  ಭಾರತದ ಸ್ವರ್ಣ ನಗರ
3.ಉದಯಪುರ      --  ಬಿಳಿನಗರ
4.ಜೋಧಪುರ       --  ನೀಲಿನಗರ, ಸೂರ್ಯನಗರ.
ಜಮ್ಮು ಕಾಶ್ಮೀರ
1.ಕಾಶ್ಮೀರ         --     ಭಾರತದ ಸ್ವಿಜರ್ಲೇಂಡ್
2.ಶ್ರೀನಗರ        --     ಸರೋವರಗಳ ನಗರ
ಕೇರಳ
1.ಕೊಚ್ಚಿ           --     ಅರಬ್ಬೀ ಸಮುದ್ರದ ರಾಣಿ, ಕೇರಳದ ಹೆಬ್ಬಾಗಿಲು 
2.ಕೊಲ್ಲಂ          --     ಅರಬ್ಬೀ ಸಮುದ್ರದ ರಾಜ.
ಮಹಾರಾಷ್ಟ್ರ
1.ಕೊಲ್ಲಾಪುರ      --     ಕುಸ್ತಿಪಟುಗಳ ನಗರ
2.ಮುಂಬೈ         --     ಏಳು ದ್ವೀಪಗಳ ನಗರ, ಕನಸುಗಳ ನಗರ, ಭಾರತದ ಹೆಬ್ಬಾಗಿಲು, ಭಾರತದ ಹಾಲಿವುಡ್.
3.ನಾಗ್ಪುರ್         --    ಕಿತ್ತಳೆ ನಗರ
4.ಪುಣೆ             --     ದಕ್ಷಿಣದ ರಾಣಿ(deccan queen)
5.ನಾಸಿಕ್         --      ಭಾರತದ ಮದ್ಯದ(wine) ರಾಜಧಾನಿ, ದ್ರಾಕ್ಷಿ ಹಣ್ಣುಗಳ ನಗರ, ಭಾರತದ ಕ್ಯಾಲಿಫೋರ್ನಿಯಾ.
ಉತ್ತರಖಂಡ
1.ಋಷಿಕೇಶ       --    ಋಷಿಗಳ ನಗರ, ಯೋಗ ನಗರ.
ದೆಹಲಿ
1.ದೆಹಲಿ          --     ಚಳುವಳಿಗಳ ನಗರ.
ಪಯಣ
1.ಪಟಿಯಾಲಾ    --    royal city of india, 
2.ಅಮೃತಸರ್    --    ಸ್ವರ್ಣಮಂದಿರದ ನಗರ.
ಹರಿಯಾಣ
1.ಪಾಣಿಪತ್ತ      --    ನೇಕಾರರ ನಗರ, ಕೈಮಗ್ಗದ ನಗರ.

: ★★★ ಕರ್ನಾಟಕ ನಮ್ಮ ರಾಜ್ಯ★★★ 

 1.ಕರ್ನಾಟಕ ಎಂಬ ಹೆಸರಿನ ಪದದ ಬಳಕೆ ಪ್ರಪ್ರಥಮವಾಗಿ ಮಹಾಭಾರತದಲ್ಲಿ ಕಂಡು ಬಂದಿದೆ.
 2.ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಕರುನಾಡು(ಕಪ್ಪು ಮಣ್ಣಿನ ನಾಡು) ಎಂದು ಕರೆಯುತ್ತಿದ್ದರು.
 3.ತಮಿಳು ಭಾಷೆಯ ಶಿಲಪ್ಪದಿಕಾರಂ ಕೃತಿಯಲ್ಲಿ ಕರುನಾಟ್ ಎಂಬ ಶಬ್ದದಿಂದ ಕರೆಯಲಾಗಿದೆ.
 4.ಕರುನಾಟ್ ಎಂಬ ಔಚಿತ್ಯವಾದ ಪದವನ್ನು ತಮಿಳರು ನೀಡಿರುತ್ತಾರೆ.
5.ಬಾದಾಮಿಯ ಚಾಲುಕ್ಯರ ಸೈನ್ಯಕ್ಕೆ ಹಿಂದೆಯೇ ಹೇಳಿರುವಂತೆ ಕರ್ಣಾಣಬಲ ಎಂಬ ಹೆಸರಿತ್ತು.
 6.ಇಂಡೋನೇಷಿಯಾದ ಜಾವಾ ದ್ವೀಪದಲ್ಲಿನ 12 ನೇಯ ಶತಮಾನದ ಒಂದು ಶಾಸನದಲ್ಲಿ ಕರ್ಣಾಟಕವನ್ನು ಉಲ್ಲೇಖಿಸಲಾಗಿದೆ.
7.ರಾಷ್ಟ್ರಕೂಟರ ಅಮೋಘವರ್ಷ ನೃಪತುಂಗನ ಕವಿ ಶ್ರೀ ವಿಜಯನ ಕವಿರಾಜಮಾರ್ಗದಲ್ಲಿ ಕರ್ನಾಟಕವು ಕಾವೇರಿ ನದಿಯಿಂದ ಗೋದಾವರಿ ನದಿಯವರೆಗೂ ವಿಸ್ತರಿಸಿತು ಎಂದು ಬರೆಯಲಾಗಿದೆ
8.ಭಾರತ ಸ್ವಾತಂತ್ರ್ಯ ಪಡೆದ ಸಂಸ್ಥಾನಗಳಲ್ಲಿ ಮೈಸೂರು ಎರಡನೇಯ ದೊಡ್ಡದಾದ ಸಾಮ್ರಾಜ್ಯವಾಗಿತ್ತು.
9.1953 ರಲ್ಲಿ ಮೈಸೂರು ಅರಸರ ಒಡೆತನದಲ್ಲಿದ್ದ 9 ಜಿಲ್ಲೆಗಳನ್ನು ಒಳಗೊಂಡ ಮೈಸೂರ ರಾಜ್ಯ ಉದಯವಾಯಿತು.

10.ನವೆಂಬರ್ 1956 ರಲ್ಲಿ ಭಾಷಾವಾರು ಪ್ರಾಂತ್ಯಗಳು ಕರ್ನಾಟಕದಲ್ಲಿ ವಿಲಿನಗೊಂಡು ವಿಶಾಲ ಮೈಸೂರು ರಾಜ್ಯ ಉದಯವಾಯಿತು.
11.ಪ್ರತಿವರ್ಷ ನವೆಂಬರ್ 01, ರಂದು ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುವುದು.
12.1973 ನವೆಂಬರ್ 1 ರಂದು ಕರ್ನಾಟಕ ಎಂದು ನಾಮಕರಣ ಮಾಡಲಾಯಿತು, ಆಗ ಮುಖ್ಯಮಂತ್ರಿಯಾಗಿದ್ದವರು ದೇವರಾಜ್ ಅರಸ್.
13.ಕರ್ನಾಟಕ ಎಂಬ ಪದವನ್ನು ನೀಡಿದವರು ಆಲೂರು ವೆಂಕಟರಾಯರು.

★★★ ಕರ್ನಾಟಕದ ಪ್ರಥಮಗಳು ★★★

1.ಮೊದಲ ಪತ್ರಿಕೆ : ಮಂಗಳೂರು ಸಮಾಚಾರ್.
2.ಮೊದಲ ವರ್ಣಚಲನಚಿತ್ರ : ಸತಿಸುಲೋಚನಾ.
3.ಕನ್ನಡ ಭಾಷೆಯ ಮೊದಲ ಪದ : ಇಸಿಲ.
4.ಮೊದಲ ಜ್ಞಾನಪೀಠ ವಿಜೇತ : ಕುವೆಂಪು.
5.ಕನ್ನಡ ಭಾಷೆಯ ಮೊದಲ ಶಾಸನ : ಹಲ್ಮಿಡಿ ಶಾಸನ.
6.ಕನ್ನಡದ ಮೊದಲ ನಾಟಕ : ಮಿತ್ರಾವಿಂದ ಗೋವಿಂದ
7.ಕನ್ನಡದ ಮೊದಲ ವಂಶ : ಕದಂಬ
8.ಉತ್ತರ ಭಾರತಕ್ಕೆ ದಂಡಯಾತ್ರೆ ಕೈಗೊಂಡ ಮೊದಲ ಅರಸ : 1 ನೇ ಧ್ರುವ
9.ಕನ್ನಡದ ಮೊದಲ ಕಾದಂಬರಿ : ಇಂದಿರಾಬಾಯಿ.

10.ಜೈವಿಕ ತಂತ್ರಜ್ಞಾನ ನೀತಿಯನ್ನು ರೂಪಿಸಿದ ಮೊದಲ ರಾಜ್ಯ

★★★ ಕರ್ನಾಟಕದ ಭೌಗೋಳಿಕ ಸ್ಥಾನ★★★

1.ಕರ್ನಾಟಕವು ಭಾರತದ ದಕ್ಷಿಣ ದಿಕ್ಕಿಗಿದೆ.
2.ಕರ್ನಾಟಕ ಭಾರತದ ಪರ್ಯಾಯ ದ್ವೀಪದ ಪಶ್ಚಿಮ ಮಧ್ಯಭಾಗದಲ್ಲಿದೆ
3.ಅಕ್ಷಾಂಶ – 11 – 31′ ರಿಂದ 18 – 45′ ಉತ್ತರ ಅಕ್ಷಾಂಶದಲ್ಲಿದೆ.
4.ರೇಖಾಂಶ – 74 – 12′ ರಿಂದ 78 – 40′ ಪೂರ್ವ ರೇಖಾಂಶದಲ್ಲಿದೆ.
5.ಉತ್ತರದ ತುದಿ – ಬೀದರ ಜಿಲ್ಲೆಯ ಔರಾದ ತಾಲ್ಲೂಕ.
6.ದಕ್ಷಿಣದ ತುದಿ – ಚಾಮರಾಜನಗರ ಜಿಲ್ಲೆ.
7.ಪಶ್ಚಿಮದ ತುದಿ – ಉತ್ತರ ಕನ್ನಡ ಜಿಲ್ಲೆಯ ಕಾರವಾರ.
8.ಪೂರ್ವದ ತುದಿ – ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕ,
9.ದಕ್ಷಿಣೋತ್ತರವಾಗಿ ಕರ್ನಾಟಕದ ಉದ್ದ – 750
10.ಪೂರ್ವ ಪಶ್ಚಿಮವಾಗಿ ಕರ್ನಾಟಕದ ಉದ್ದ – 400
11.ಕರ್ನಾಟಕದೊಂದಿಗೆ ಭೂಗಡಿ ಹೊಂದಿರುವ ರಾಜ್ಯಗಳು – ಮಹಾರಾಷ್ಟ್ರ,ಗೋವಾ,ಕೇರಳ,ತಮಿಳುನಾಡು,ಆಂದ್ರಪ್ರದೇಶ
12.ಕರ್ನಾಟಕವು ಗೋಡಂಬಿಯ ಆಕಾರವನ್ನು ಹೋಲುತ್ತದೆ.

★★★ ಕರ್ನಾಟಕದ ವಿಸ್ತೀರ್ಣ ★★★

1.ಒಟ್ಟು ವಿಸ್ತೀರ್ಣ – 191791 ಚಕಿಮೀಗಳು.
2.ದೇಶದ ಒಟ್ಟು ವಿಸ್ತೀರ್ಣದಲ್ಲಿ ಕರ್ನಾಟಕದ ವಿಸ್ತೀರ್ಣ – 5.83
3.ವಿಸ್ತೀರ್ಣದಲ್ಲಿ 7 ನೇ ದೊಡ್ಡ ರಾಜ್ಯ.
4.ಜನಸಂಖ್ಯೆ – 61130704 (2011 ಜನಗಣತಿಯಂತೆ)
5.ಜನಸಂಖ್ಯೆಯಲ್ಲಿ ಭಾರತದ 10 ನೇ ಸ್ಥಾನ ಹೊಂದಿದೆ.
6.ಕಂದಾಯ ವಿಭಾಗಗಳು – 04
7.ಮಹಾನಗರಗಳು – 10
8.ಜಿಲ್ಲೆಗಳು – 30
9.ತಾಲ್ಲೂಕಗಳು – 177
10.ಹೋಬಳಿಗಳು – 347
11.ಮುನಸಿಪಲ್ ಕಾರ್ಪೋರೇಷನಗಳು – 219
12.ಮಹಾನಗರಗಳು – ಬೆಂಗಳೂರು,ಹುಬ್ಬಳಿ-ಧಾರವಾಡ,ಮೈಸೂರು,ಕಲಬುರಗಿ,ಬೆಳಗಾವಿ,ಮಂಗಳೂರು,ಬಿಜಾಪೂರ,ದಾವಣಗೆರೆ,ಬಳ್ಳಾರಿ ಮತ್ತು ತುಮಕೂರು.
13.ವಿಸ್ತೀರ್ಣದಲ್ಲಿ ದೊಡ್ಡ ಜಿಲ್ಲೆ – ಬೆಳಗಾವಿ
14.ವಿಸ್ತೀರ್ಣದಲ್ಲಿ ಚಿಕ್ಕದಾದ ಜಿಲ್ಲೆ – ಬೆಂಗಳೂರು ನಗರ
15.ನಾಲ್ಕು ಕಂದಾಯ ವಿಭಾಗಗಳು – ಬೆಂಗಳುರು, ಮೈಸೂರು,ಬೆಳಗಾವಿ,ಕಲಬುರಗಿ

★★★ ಕರ್ನಾಟಕದ ಒಂದು ಪಕ್ಷಿನೋಟ ★★★

1.ರಾಜ್ಯಪಕ್ಷಿ – ನೀಲಕಂಠ(ಇಂಡಿಯನ್ ರೋಲರ್)
2.ರಾಜ್ಯ ಪ್ರಾಣಿ – ಆನೆ.
3.ರಾಜ್ಯ ವೃಕ್ಷ – ಶ್ರೀಗಂಧ.
4.ರಾಜ್ಯಪುಷ್ಪ – ಕಮಲ
5.ನಾಡಗೀತೆ – ಜಯಭಾರತ ಜನನಿಯ ತನುಜಾತೆ(ಕುವೆಂಪು ರಚಿತ)
6.ಕರ್ನಾಟಕ ಸರ್ಕಾರದ ಚಿನ್ಹೆ – ಗಂಡಭೇರುಂಡ
7.ಗಂಡಭೇರುಂಡ ಎರಡು ತಲೆಗಳನ್ನು ಹೊಂದಿರುವ ಕಾಲ್ಪನಿಕ ಪಕ್ಷಿಯಾಗಿದೆ.
8.ಭಾರತದಲ್ಲಿ ಅತಿ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯುವ ರಾಜ್ಯ – ಕರ್ನಾಟಕ
9.ಕರ್ನಾಟಕದ ಮೊದಲ ನಾಡಗೀತೆ – ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು(ಹುಯಿಲಗೋಳ್ ನಾರಾಯಣರಾವ)
10.ಕರ್ನಾಟಕ ಚಲನಚಿತ್ರ ಮಂಡಳಿಯ ಹೆಸರು – ಸ್ಯಾಂಡಲವುಡ್.
11.ಕರ್ನಾಟಕ ದ್ವಿಸದನ ವ್ಯವಸ್ಥೆ ಹೊಂದಿದೆ.
12.ವಿಧಾನಸಭೆಯ ಸದಸ್ಯರ ಸಂಖ್ಯೆ – 225.
13.ವಿಧಾನ ಪರಿಷತ್ತ ಸದಸ್ಯರ ಸಂಖ್ಯೆ – 75
14.ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 28
15.ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಂಸದರ ಸಂಖ್ಯೆ – 12
16.ಭಾರತದಲ್ಲಿಯೇ ಪ್ರಥಮಬಾರಿಗೆ ಹಿಂದುಳಿದ ವರ್ಗಗಳ ಆಯೋಗವೊಂದನ್ನು ನೇಮಿಸಿದ್ದು ಮೈಸೂರು ರಾಜ್ಯ – 1918 ರಲ್ಲಿ ಮಿಲ್ಲರ ಆಯೋಗ.
17.ಮೊದಲ ರಾಜ್ಯಪಾಲ – ಜಯಚಾಮರಾಜೇಂದ್ರ ಒಡೆಯರ್
18.ಮೊದಲ ಮುಖ್ಯಮಂತ್ರಿ – ಕೆ.ಚಂಗಲರಾಯರೆಡ್ಡಿ.
19.ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ – ಎಸ್,ನಿಜಲಿಂಗಪ್ಪ
20.ವಿಧಾನಸಭೆಯ ಮೊದಲ ಸಭಾಪತಿ – ವಿ,ವೆಂಕಟಪ್ಪ
21.ವಿಧಾನಸಭೆಯ ಏಕೈಕ ಮಹಿಳಾ ಸಭಾಪತಿ – ಕೆ.ಎಸ್.ನಾಗರತ್ನಮ್ಮ
22.ಕರ್ನಾಟಕ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಧೀಶ – ಆರ್ , ವೆಂಕಟರಾಮಯ್ಯ.
23.ಭಾರತದ ಉಪಗ್ರಹ ನಿಯಂತ್ರಣ ಕೇಂದ್ರವಿರಿವುದು – ಹಾಸನದಲ್ಲಿ
24.ಕಾಫಿ ಹಾಗೂ ಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು – ಪ್ರಥಮ ಸ್ಥಾನದಲ್ಲಿದೆ.

ಅಂತೆಯೇ ,

2017ರ ಗಣತಿಯ ಪ್ರಕಾರ ಭಾರತದ ಧರ್ಮಾಧಾರಿತ ಜನಸಂಖ್ಯೆ*
         *ಭಾರತಾದ್ಯಂತ ಜನಸಂಖ್ಯೆ*
      ಹಿಂದೂ ಜನಸಂಖ್ಯೆ - 74.33%
      ಮುಸ್ಲಿಂ ಜನಸಂಖ್ಯೆ - 14.20%
             ಕ್ರಿಶ್ಚಿಯನ್ - 5.84%
                  ಸಿಖ್ಖ್ - 1.86%
     ಜನಾಂಗೀಯ ಧರ್ಮಗಳು - 1.35%
               ಬೌದ್ಧ - 0.82%
        ಧರ್ಮವಿಲ್ಲದವರು - 0.48%
             ಇತರ - 0.47% 
               
               *ಆಂಧ್ರಪ್ರದೇಶ*
ಹಿಂದೂ - 89.0%
ಮುಸ್ಲಿಂ - 9.2%
ಕ್ರಿಶ್ಚಿಯನ್ - 1.6%(3.0%)
ಇತರ - 0.2%
             
            *ಅರುಣಾಚಲ ಪ್ರದೇಶ*
ಹಿಂದೂ - 34.6%
ಜನಾಂಗೀಯ ಧರ್ಮಗಳು - 30.7%
ಬೌದ್ಧ - 13.0%
ಕ್ರಿಶ್ಚಿಯನ್ - 18.7%(25%)
ಮುಸ್ಲಿಂ - 1.9%

                   *ಅಸ್ಸಾಂ*
ಹಿಂದೂ - 65%
ಮುಸ್ಲಿಂ - 30.9%
ಕ್ರಿಶ್ಚಿಯನ್ - 3.7%(7.0%)
ಬೌದ್ಧ - 0.2%
ಇತರ - 0.2%

                 *ಬಿಹಾರ*
ಹಿಂದೂ - 83.2%
ಮುಸ್ಲಿಂ - 16.5%
ಕ್ರಿಶ್ಚಿಯನ್ - 0.1%(0.3%)

                 *ಛತ್ತೀಸಘಡ್*
 ಹಿಂದೂ - 94.7%
ಮುಸ್ಲಿಂ - 2.0%
ಕ್ರಿಶ್ಚಿಯನ್ - 1.9%(2.5%)
ಇತರ - 1.5%

                   *ದೆಹಲಿ*
ಹಿಂದೂ - 82%
ಮುಸ್ಲಿಂ - 11.7%
ಸಿಖ್ - 4.0%
ಜೈನ್ - 1.1%
ಕ್ರಿಶ್ಚಿಯನ್ - 0.9%(1.86%)

                 *ಗೋವಾ*
ಹಿಂದೂ - 65.8%
ಕ್ರಿಶ್ಚಿಯನ್ - 26.7%
ಮುಸ್ಲಿಂ - 6.8%
ಇತರ - 0.2%

                  *ಗುಜರಾತ್*
ಹಿಂದೂ - 89.1%
ಮುಸ್ಲಿಂ - 9.1%
ಜೈನ್ - 1.0%
ಕ್ರಿಶ್ಚಿಯನ್ - 0.6%(1.2%)

                *ಹರ್ಯಾಣ*
ಹಿಂದೂ - 88.2%
ಮುಸ್ಲಿಂ - 5.8%
ಸಿಖ್ - 5.5%
ಜೈನ್ - 0.3%
ಕ್ರಿಶ್ಚಿಯನ್ - 0.1%(0.3%)

           *ಹಿಮಾಚಲ ಪ್ರದೇಶ*
ಹಿಂದೂ - 95.4%
ಮುಸ್ಲಿಂ - 2.0%
ಬೌದ್ಧ - 1.3%
ಸಿಖ್ - 1.2%
ಕ್ರಿಶ್ಚಿಯನ್ - 0.1%(0.2%)

             *ಜಮ್ಮು ಕಾಶ್ಮೀರ*
ಮುಸ್ಲಿಂ - 67.0%
ಹಿಂದೂ - 29.6%
ಸಿಖ್ - 2.0%
ಬೌದ್ಧ - 1.1%
ಕ್ರಿಶ್ಚಿಯನ್ - 0.2%(0.3%)

                *ಜಾರ್ಖಂಡ್*
ಹಿಂದೂ - 68.6%
ಮುಸ್ಲಿಂ - 13.8%
ಬುಡಕಟ್ಟು ಧರ್ಮ - 13.0%
ಕ್ರಿಶ್ಚಿಯನ್ - 4.1%(6.0%)

                *ಕರ್ನಾಟಕ*
ಹಿಂದೂ - 83.9%
ಮುಸ್ಲಿಂ - 12.2%
ಕ್ರಿಶ್ಚಿಯನ್ - 1.9%(4.0%)
ಜೈನ್ - 0.8%
ಬೌದ್ಧ - 0.7%

                   *ಕೇರಳ*
ಹಿಂದೂ - 56.2%
ಮುಸ್ಲಿಂ - 24.7%
ಕ್ರಿಶ್ಚಿಯನ್ - 19.0%(35.5%)

               *ಮಧ್ಯ ಪ್ರದೇಶ*
ಹಿಂದೂ - 91.1%
ಮುಸ್ಲಿಂ - 6.4%
ಜೈನ್ - 0.9%
ಕ್ರಿಶ್ಚಿಯನ್ - 0.3%(2.2%)
ಇತರ - 1.2%

                 *ಮಹಾರಾಷ್ಟ್ರ*
ಹಿಂದೂ - 80.4%
ಮುಸ್ಲಿಂ - 10.6%
ಬೌದ್ಧ - 6.0%
ಜೈನ್ - 1.3%
ಕ್ರಿಶ್ಚಿಯನ್ - 1.1%(2%)
ಇತರ - 0.4%

                   *ಮಣಿಪುರ*
ಹಿಂದೂ - 46%
ಕ್ರಿಶ್ಚಿಯನ್ - 34%(41.8%)
ಮುಸ್ಲಿಂ - 8.8%
ಇತರ - 11.2%

                 *ಮೇಘಾಲಯ*
ಕ್ರಿಶ್ಚಿಯನ್ - 70.3%(76%)
ಹಿಂದೂ - 13.3%
ಮುಸ್ಲಿಂ - 4.3%
ಇತರ - 11.8%

              *ಮಿಜೋರಾಮ್*
ಕ್ರಿಶ್ಚಿಯನ್ - 87%(89.6%)
ಬೌದ್ಧ - 7.9%
ಹಿಂದೂ - 3.6%
ಮುಸ್ಲಿಂ - 1.1%

               *ನಾಗಾಲ್ಯಾಂಡ್*
ಕ್ರಿಶ್ಚಿಯನ್ - 90%(93.1%)
ಹಿಂದೂ - 7.7%
ಮುಸ್ಲಿಂ - 1.8%

                  *ಒರಿಸ್ಸಾ*
ಹಿಂದೂ - 94.4%
ಕ್ರಿಶ್ಚಿಯನ್ - 2.4%(2.0%)
ಮುಸ್ಲಿಂ - 2.1%
ಇತರ - 1.1%

                  *ಪಂಜಾಬ್*
ಸಿಖ್ - 59.9%
ಹಿಂದೂ - 36.9%
ಕ್ರಿಶ್ಚಿಯನ್ - 1.2%(2.2%)
ಮುಸ್ಲಿಂ - 1.6%
ಇತರ - 0.4%

                  *ರಾಜಸ್ಥಾನ*
ಹಿಂದೂ - 88.8%
ಮುಸ್ಲಿಂ - 8.5%
ಸಿಖ್ - 1.4%
ಜೈನ್ - 1.2%
ಕ್ರಿಶ್ಚಿಯನ್ - 0.1%(0.4%)

                    *ಸಿಕ್ಕಿಂ*
ಹಿಂದೂ - 60.9%
ಬೌದ್ಧ - 28.1%
ಕ್ರಿಶ್ಚಿಯನ್ - 6.7%(7.5%)
ಮುಸ್ಲಿಂ - 1.4%
ಇತರ - 2.6%

               *ತಮಿಳುನಾಡು*
ಹಿಂದೂ - 88.1%
ಕ್ರಿಶ್ಚಿಯನ್ - 6.1%(19.0%)
ಮುಸ್ಲಿಂ - 5.6%
ಇತರ - 0.2%

                   *ತ್ರಿಪುರ*
ಹಿಂದೂ - 85.6%
ಮುಸ್ಲಿಂ - 8.0%
ಬೌದ್ಧ - 3.1%
ಕ್ರಿಶ್ಚಿಯನ್ - 3.2%(5.5%)

            *ಉತ್ತರ ಪ್ರದೇಶ*
ಹಿಂದೂ -  80.6%
ಮುಸ್ಲಿಂ - 18.5%
ಸಿಖ್ - 0.4%
ಬೌದ್ಧ - 0.2%
ಕ್ರಿಶ್ಚಿಯನ್ - 0.1%(0.3%)
ಜೈನ್ - 0.1%

               *ಉತ್ತರಕಾಂಡ್*
ಹಿಂದೂ - 85%
ಮುಸ್ಲಿಂ - 11.9%
ಸಿಖ್ - 2.5%
ಕ್ರಿಶ್ಚಿಯನ್ - 0.3%(0.6%)
ಬೌದ್ಧ - 0.1%
ಜೈನ್ - 0.1%

             *ಪಶ್ಚಿಮ ಬಂಗಾಳ*
ಹಿಂದೂ - 72.5%
ಮುಸ್ಲಿಂ - 25.2%
ಕ್ರಿಶ್ಚಿಯನ್ - 0.6%(1.2%)
ಬೌದ್ಧ - 0.3%
ಇತರ - 1.3%

2017ನೇ ಸಾಲಿನ ರಾಜೀವ್ ಗಾಂಧಿ ಖೇಲ್ ರತ್ನ, ದ್ರೋಣಾಚಾರ್ಯ, ಅರ್ಜನ ಹಾಗೂ ಧ್ಯಾನ್ ಚಂದ್ ಪ್ರಶಸ್ತಿಗಳನ್ನೊಂಡ ಸಂಪೂರ್ಣ ಕ್ರೀಡಾ ಪ್ರಶಸ್ತಿಗಳ ಪಟ್ಟಿಯನ್ನು ಕ್ರೀಡಾ ಸಚಿವಾಲಯ ಘೋಷಿಸಿದೆ... ✍

2017 ಆಗಸ್ಟ್ 29ರಂದು ರಾಷ್ಟ್ರಪತಿ ಭವನದಲ್ಲಿ ಜರಗಲಿರುವ ವಿಶೇಷ ಸಮಾರಂಭದಲ್ಲಿ ಗೌರವಾನ್ವಿತ ರಾಷ್ಟ್ರಪತಿ ಅವರಿಂದ ಪ್ರಶಸ್ತಿಗೆ ಭಾಜನವಾಗಲಿದ್ದಾರೆ.
ಸಂಪೂರ್ಣ ಪಟ್ಟಿ ಇಲ್ಲಿದೆ:

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ 2017:

1. ಶ್ರೀ ದೇವೇಂದ್ರ, ವಿಭಾಗ- ಪ್ಯಾರಾ ಅಥ್ಲೀಟ್
2. ಶ್ರೀ ಸರ್ದಾರ್ ಸಿಂಗ್, ವಿಭಾಗ- ಹಾಕಿ

ದ್ರೋಣಾಚಾರ್ಯ ಪ್ರಶಸ್ತಿ 2017:

1. ದಿವಂಗತ ಡಾ.ಆರ್. ಗಾಂಧಿ, ವಿಭಾಗ- ಅಥ್ಲೀಟಿಕ್ಸ್
2. ಹೀರಾ ನಂದ್ ಕಟರಿಯಾ, ವಿಭಾಗ - ಕಬಡ್ಡಿ
3. ಜಿ.ಎಸ್.ಎಸ್.ವಿ ಪ್ರಸಾದ್, ವಿಭಾಗ - ಬ್ಯಾಡ್ಮಿಂಟನ್ (ಜೀವಮಾನ)
4. ಬ್ರಿಜ್ ಭುಷನ್ ಮೊಹಂತಿ, ವಿಭಾಗ - ಬಾಕ್ಸಿಂಗ್ (ಜೀವಮಾನ)
5. ಪಿ.ಎ. ರಾಫೇಲ್, ವಿಭಾಗ- ಹಾಕಿ (ಜೀವಮಾನ),
6. ಸಂಜಯ್ ಚಕ್ರವರ್ತಿ, ವಿಭಾಗ - ಶೂಟಿಂಗ್ (ಜೀವಮಾನ)
7. ರೋಶನ್ ಲಾಲ್, ವಿಭಾಗ- ಕುಸ್ತಿ (ಜೀವಮಾನ)

ಅರ್ಜುನ ಪ್ರಶಸ್ತಿ 2017

1. ವಿ.ಜೆ, ಸುರೇಖಾ, ವಿಭಾಗ- ಆರ್ಚರಿ
2. ಖುಷ್ಬಿರ್ ಕೌರ್, ವಿಭಾಗ - ಅಥ್ಲೇಟಿಕ್ಸ್
3. ಅರೋಕಿಯಾ ರಾಜೀವ್, ವಿಭಾಗ - ಅಥ್ಲೇಟಿಕ್ಸ್
4. ಪ್ರಶಾಂತಿ ಸಿಂಗ್, ವಿಭಾಗ - ಬಾಸ್ಕೆಟ್ಬಾಲ್
5. ಸಬ್. ಲೈಶ್ರಾಂ ದೆಬೆಂದ್ರೊ ಸಿಂಗ್, ವಿಭಾಗ- ಬಾಕ್ಸಿಂಗ್
6. ಚೇತೇಶ್ವರ ಪೂಜಾರ, ವಿಭಾಗ- ಕ್ರಿಕೆಟ್
7. ಹರ್ಮನ್ಪ್ರೀತ್ ಕೌರ್, ವಿಭಾಗ - ಕ್ರಿಕೆಟ್
8. ಬೆಂಬೆಮ್ ದೇವಿ, ವಿಭಾಗ - ಫುಟ್ಬಾಲ್
9. ಎಸ್.ಎಸ್.ಪಿ ಚೌರಾಸಿಯಾ, ವಿಭಾಗ - ಗಾಲ್ಫ್
10. ಎಸ್. ವಿ, ಸುನಿಲ್, ವಿಭಾಗ- ಹಾಕಿ
11. ಜಸ್ವೀರ್ ಸಿಂಗ್, ವಿಭಾಗ - ಕಬಡ್ಡಿ
12. ಪಿ.ಎಲ್. ಪ್ರಕಾಶ್, ವಿಭಾಗ - ಶೂಟಿಂಗ್
13. ಅಮಲ್ರಾಜ್, ವಿಭಾಗ - ಟೇಬಲ್ ಟೆನಿಸ್
14. ಸಾಕೇತ್ ಮೈನೇನಿ, ವಿಭಾಗ - ಟೆನಿಸ್
15. ಸತ್ಯವರ್ತ್ ಕಡಿಯನ್, ವಿಭಾಗ - ಕುಸ್ತಿ
16. ಮರಿಯಪ್ಪನ್ ತಂಗವೇಲು, ವಿಭಾಗ - ಪ್ಯಾರಾ ಅಥ್ಲೀಟ್
17. ವರುಣ್ ಸಿಂಗ್ ಭಾಟಿ,ವಿಭಾಗ - ಪ್ಯಾರಾ ಅಥ್ಲೀಟ್

ಧ್ಯಾನ್ ಚಂದ್ ಪ್ರಶಸ್ತಿ 2017

1. ಭುಪೇಂದ್ರ ಸಿಂಗ್, ವಿಭಾಗ - ಅಥ್ಲೇಟಿಕ್ಸ್
2. ಸೈಯದ್ ಶಾಹೀದ್ ಹಕೀಂ, ವಿಭಾಗ - ಫುಟ್ಬಾಲ್
3. ಸುಮರೈ ಟೆಟೆ, ವಿಭಾಗ - ಹಾಕಿ.

ಭಾರತ–ನೇಪಾಳ ಸಂಬಂಧ ಸುಧಾರಿಸಲಿದೆ ಹೊಸ ಸೇತುವೆ

ಭಾರತ ಮತ್ತು ನೇಪಾಳ ಗಡಿಯಲ್ಲಿರುವ ಮೇಚಿ ನದಿಯ ಮೇಲೆ ₹ 158.65 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸುವ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ. ಭಾರತ–ನೇಪಾಳ ನಡುವಣ ಸಂಬಂಧ ವೃದ್ಧಿಯಾಗುವಲ್ಲಿ ಈ ಸೇತುವೆ ಮಹತ್ವದ ಪಾತ್ರ ವಹಿಸಲಿದೆ ಎಂದು ಮೂಲಗಳು ಹೇಳಿವೆ

* ಮೇಚಿ ನದಿಯ ಮೇಲೆ ಈಗಾಗಲೇ ಇರುವ ಎರಡು ಪಥಗಳ ಸೇತುವೆಯ ಮೇಲಿನ ಸಂಚಾರ ಒತ್ತಡವನ್ನು ತಗ್ಗಿಸಲು ಹೊಸ ಸೇತುವೆ ನಿರ್ಮಿಸಲಾಗುತ್ತದೆ

* ಹಳೆಯ ಸೇತುವೆಯಿಂದ ಉತ್ತರದಲ್ಲಿ 165 ಮೀಟರ್‌ ದೂರದಲ್ಲಿ ಹೊಸ ಸೇತುವೆ ನಿರ್ಮಿಸಲಾಗುತ್ತದೆ

* ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಸಾಲದ ಮೂಲಕ ಭಾರತವೇ ಯೋಜನೆಯ ವೆಚ್ಚ ಭರಿಸಲಿದೆ

* ಭಾರತದ ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಸೇತುವೆಯನ್ನು ನಿರ್ಮಿಸಲಿದೆ

* ಭಾರತ–ನೇಪಾಳದ ಮಧ್ಯೆ ಸರಕು ಸಾಗಣೆ ಮತ್ತಷ್ಟು ಸರಾಗವಾಗಲಿದೆ

* ಸರಕು ಸಾಗಣೆ ಸಾಮರ್ಥ್ಯ ಹೆಚ್ಚಳ

* ನೇಪಾಳಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿನ ವಿಳಂಬ ತಪ್ಪಿಸಲಿದೆ

* ನೇಪಾಳಕ್ಕೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳುವ ಚೀನಾದ ಯತ್ನಕ್ಕೆ ಹಿನ್ನಡೆಯಾಗಲಿದೆ

* ಎರಡೂ ದೇಶಗಳ ಮಧ್ಯೆ ವಾಣಿಜ್ಯ ಮತ್ತು ಕೈಗಾರಿಕಾ ಸಂಬಂಧ ಸುಧಾರಿಸಲಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಸಹಕಾರಿಯಾಗಲಿದೆ

******************************************

24.7 ಮೀಟರ್‌/ ಸೇತುವೆಯ ಅಗಲ

11 ಮೀಟರ್/ ಒಂದು ಕಡೆಯ ರಸ್ತೆಯ ಅಗಲ

0.5 ಮೀಟರ್‌/ ತಡೆಗೋಡೆಯ ಅಗಲ

1.2 ಮೀಟರ್/ ರಸ್ತೆ ವಿಭಜಕದ ಅಗಲ

ಪಾದಚಾರಿ ಮಾರ್ಗ

ಸರ್ವಿಸ್ ರಸ್ತೆ

ಮುಖ್ಯ ಪಥಗಳು

*****************

675 ಮೀಟರ್‌

ಸೇತುವೆಯ ಉದ್ದ

545 ಮೀಟರ್

ನೇಪಾಳದ ಕಡೆಯ ರಸ್ತೆಯ ಉದ್ದ

280 ಮೀಟರ್

ಭಾರತದ ಕಡೆಯ ರಸ್ತೆಯ ಉದ್ದ

ಏಷಿಯನ್ ಹೆದ್ದಾರಿ

ಭಾರತ

ನೇಪಾಳ

ಹಳೆಯ ಸೇತುವೆ

ಪ್ರಸ್ತಾವಿತ ಹೊಸ ಸೇತುವೆ

ಬಾಂಗ್ಲಾದೇಶ

***************

₹ 158.65 ಕೋಟಿ ಯೋಜನೆಯ ಮೊತ್ತ

ಮಾಹಿತಿ: ಪಿಟಿಐ ಮತ್ತು ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವಿಸ್ತೃತ ಯೋಜನಾ ವರದಿ

🔴 ಪ್ರಪಂಚದ ಸರೋವರಗಳು ಮತ್ತು ದೇಶಗಳು 

*.ಕ್ಯಾಸ್ಪೀಯನ ಸರೋವರ-  ಇರಾನ್ 

*.ಸುಪೇರೀಯರ ಸರೋವರ-  ಅಮೆರಿಕ

*.ವಿಕ್ಟೋರಿಯಾ ಸರೋವರ-   ತಂಜೇನಿಯ 

*.ಯೂರಲ್ ಸರೋವರ-  ರಷ್ಯ

*.ಮಿಚಿಗನ್ ಸರೋವರ-  ಅಮೆರಿಕ

*.ಬೈಕಲ್ ಸರೋವರ-  ರಷ್ಯ

*.ಗ್ರೇಟಬೀಯರ ಸರೋವರ-  ಕೆನಡಾ

*.ಲದೂಗ ಸರೋವರ-  ರಷ್ಯ

*.ಮಾನಸ ಸರೋವರ-  ಟಿಬೆಟ್ 

*.ಸೋಸೇಕುರ ಸರೋವರ-  ಟಿಬೆಟ್ 

*.ಟಿಟಿಕಾಕ ಸರೋವರ-  ಪೆರು 

*.ರುಡಾಲ್ಫ್ ಸರೋವರ-  ಕೀನ್ಯಾ 

*.ನ್ಯಾಸ ಸರೋವರ-  ತಾಂಜೇನಿಯ 

*.ವಾನೇರ್ಸ ಸರೋವರ-  ಸ್ವಿಡನ

🔴ಪ್ರಪಂಚದ ಪ್ರಮುಖ ಮರುಭೂಮಿಗಳು :-
(Great Deserts of the World)

ಭೂಮಿಯ ಯಾವ ಪ್ರದೇಶದಲ್ಲಿ ನೀರಿನ ಪ್ರಮಾಣವು ಕಡಿಮೆ ಇರುತ್ತದೋ ಅಥವಾ ವಾರ್ಷಿಕವಾಗಿ 250 ಮಿ.ಮೀಗಿಂತ ಕಡಿಮೆ ಇರುತ್ತದೋ ಅಂತಹ ಪ್ರದೇಶವನ್ನು # ಮರುಭೂಮಿ ಎಂದು ಕರೆಯುತ್ತಾರೆ.

1.ಅಂಟಾರ್ಟಿಕ ಮರುಭೂಮಿ

2.ಸಹಾರ ಮರುಭೂಮಿ

3.ಆರ್ಟಿಕ್ ಮರುಭೂಮಿ

4.ಅರೇಬಿಯನ್ ಮರುಭೂಮಿ

5.ಕಲಹರಿ ಮರುಭೂಮಿ

6.ಪೆಟಗೋನಿಯನ್ ಮರುಭೂಮಿ

7.ಗ್ರೇಟ್ ವಿಕ್ಟೋರಿಯಾ ಮರುಭೂಮಿ

8.ಗ್ರೇಟ್ ಬಸಿನ್ ಮರುಭೂಮಿ

9.ಸೈರಿಯನ್ ಮರುಭೂಮಿ

1⃣ ಅಂಟಾರ್ಟಿಕ ಮರುಭೂಮಿ

💢 ಅಂಟಾರ್ಟಿಕ ಮರುಭೂಮಿಯು ದಕ್ಷಿಣ ಧ್ರುವದಲ್ಲಿ ಕಂಡು ಬರುವ ಮರುಭೂಮಿಯಾಗಿದೆ.

💢 ಈ ಮರುಭೂಮಿಯು ಜಗತ್ತಿನ ವಿಸ್ತೀರ್ಣದಲ್ಲಿ ಅತಿ ದೊಡ್ಡ ಮರುಭೂಮಿಯಾಗಿದ್ದು ಶೀತಮರುಭೂಮಿಯಾಗಿದ. ಈ ಮರುಭೂಮಿಯು ಹಿಮದಿಂದ ಕೂಡಿದ್ದು, ಸರಾಸರಿ 1.6 ಕಿ.ಮೀ ದಪ್ಪದ ಹಿಮವನ್ನು ಒಳಗೊಂಡಿದೆ. ಇಲ್ಲಿ ಪೆಂಗ್ವಿನ್, ನೀಲಿ ತಿಮಿಂಗಿಲ, ಸೀಲ್ ಪ್ರಮುಖ ಪ್ರಾಣಿಗಳಿವೆ.

2⃣ ಸಹಾರ ಮರುಭೂಮಿ

💢 ಸಹರಾ ಮರುಭೂಮಿಯು ಉತ್ತರ ಆಫ್ರಿಕಾ ಖಂಡದಲ್ಲಿದೆ. ಈ ಮರುಭೂಮಿಯನ್ನು "ಗ್ರೇಟ್ ಡೆಸರ್ಟ್" ಎಂದು ಕರೆಯುವರು,  

💢 ಇದು ಅಲ್ಜೀರಿಯಾ, ಚಾದ್, ಈಜಿಪ್ಪ್, ಲಿಬಿಯಾ ಎರಿಟ್ರಿಯಾ, ಮಾಲಿ, ಮಾಯುರಟಾನಿಯ, ಮಾರಕೋ, ನೈಜಿರ್, ಸುಡಾನ್ ಟುನೇಶಿಯಾ ವೆಸ್ಟರ್ ಸಹಾರ್ ದೇಶಗಳಲ್ಲಿ ಹರಡಿಕೊಂಡಿದೆ.

💢ಇದರ ವಿಸ್ತೀರ್ಣ 9,100,000 ಚ.ಕಿ.ಮೀ ಆಗಿದ್ದು ಜಗತ್ತಿನ 2 ನೇ ಅತಿದೊಡ್ಡ ಮರುಭೂಮಿ, ಜಗತ್ತಿನ ಅತಿ ದೊಡ್ಡ "ಉಷ್ಣ ಮರುಭೂಮಿ" ಆಗಿದೆ. 

💢ಇಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಒಂಟೆ, ಚಿರತೆ, ನರಿ, ಹಲ್ಲಿ, ಆಫ್ರಿಕನ್ ಕಾಡು ನಾಯಿ, ಉಷ್ಟ್ರಪಕ್ಷಿ, ಮರುಭೂಮಿ ಮೊಸಳೆ.

3⃣ ಆರ್ಟಿಕ್ ಮರುಭೂಮಿ

💢 ಆರ್ಟಿಕ್ ಮರುಭೂಮಿ ಭೂಮಿಯ ಉತ್ತರ ದ್ರುವದಲ್ಲಿ ಕಂಡು ಬರುತ್ತದೆ. ಈ ಮರುಭೂಮಿ ಜಗತ್ತಿನ 3ನೇ ದೊಡ್ಡ ಮರುಭೂಮಿಯಾಗಿದ್ದು ಹಾಗೂ 2ನೇ ಅತಿ ದೊಡ್ಡ ಶೀತ ಮರುಭೂಮಿಯಾಗಿದೆ. 

💢 ಇದರ ವಿಸ್ತೀರ್ಣವು 2,600,000 ಚ.ಕಿ.ಮೀಗಳಾಗಿವೆ. ಈ ಮರುಭೂಮಿ ಹಿಮದಿಂದ ಕೂಡಿದೆ.

💢 ಈ ಮರುಭೂಮಿಯು ಅರ್ಟಿಕ್ ಸಾಗರ, ಕೆನಡಾ, ರಷ್ಯಾ, ಗ್ರೀನಲ್ಯಾಂಡ್, ಯುನೈಟೆಡ್ ಸ್ಪೇಟ್ಸ್, ನಾರ್ವೆ, ಸ್ಪೀಡನ್, ಪಿನಲ್ಯಾಂಡನ್ ಸ್ಪಲ್ಪ ಭಾಗವನ್ನು ಒಳಗೊಂಡಿದೆ.

💢 ಇಲ್ಲಿನ ಪ್ರಮುಖ ಪ್ರಾಣಿಗಳೆಂದರೆ ಆರ್ಟಿಕ್ ಮೊಲಸಾರಂಗ, ಅರ್ಟಿಕ್ ನರಿ ಮತ್ತು ತೋಳ, ಧ್ರುವ ಕರಡಿ, ಸೀಲ್, ಮುಂತಾದವುಗಳು. 

💢ಈ ಮರುಭೂಮಿಯು ಇತ್ತೀಚಿಗೆ ಜಾಗತಿಕ ತಾಪಮಾನ ಫಲವಾಗಿ ಇಲ್ಲಿನ ನೀರ್ಲಗಲ್ಲುಗಳು ಕರಗುತ್ತಿದೆ.

4⃣ ಅರೇಬಿಯನ್ ಮರುಭೂಮಿ

💢 ಈ ಮರುಭೂಮಿಯು ಮಧ್ಯ ಪೂರ್ವ ಪ್ರಾಂತ್ಯದಲ್ಲಿದ್ದು, ಇದು ಯಮನ್ ದೇಶದಿಂದ ಪರ್ಷಿಯನ್ ಗಲ್ಪ್ ವರೆಗೂ ಮತ್ತು ಒಮಾನ್ ನಿಂದ ಜೋರ್ಡಾನ ಮತ್ತು ಇರಾಕ್ ವರೆಗೂ ವಿಸ್ತರಿಸಿದೆ.

💢 ಇದು ಅರೆಬಿಯನ್ ಉಪಖಂಡದಲ್ಲಿ ವ್ಯಾಪಿಸಿದೆ. ಇದು ಜೋರ್ಡಾನ್, ಕುವೈತ್, ಇರಾಕ್, ಕತಾರ್, ಉಮ್ಮಾನ್, ಸೌದಿ ಅರೇಬಿಯಾ, ಯುನೈಟೆಡ್ ಎಮರೈಟಿಸ್, ಎಮನ್ ದೇಶದಲ್ಲಿ ವ್ಯಾಪಿಸಿದೆ.

💢 ಇದರ ವಿಸ್ತೀರ್ಣವು 2,330,000 ಚ.ಕಿ.ಮೀ, ಇಲ್ಲಿ ತೈಲ ಸ್ವಾಭಾವಿಕ ಅನಿಲ, ಪಾಸ್ಪೇಟ್, ಮತ್ತು ಗಂಧಕದ ಸಂಪನ್ಮೂಲವಿದೆ. ಈ ಮರುಭೂಮಿ ಬಹುತೇಕ ಸೌದಿ ಅರೇಬಿಯಾದಲ್ಲಿ ವಿಸ್ತರಿಸಿಕೊಂಡಿದೆ.

5⃣ ಕಲಹರಿ ಮರುಭೂಮಿ

💢 ಈ ಮರುಭೂಮಿಯು ದಕ್ಷಿಣ ಆಫ್ರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದೆ. ಈ ಮರುಭೂಮಿಯಲ್ಲಿ ಬಾಡ್ಸಾನಾ, ನಮೀಬಿಯಾ, ದಕ್ಷಿಣ ಆಪ್ರ್ಹಿಕಾ ದೇಶಗಳಲ್ಲಿ ವ್ಯಾಪಿಸಿದೆ.

💢 ಈ ಮರುಭೂಮಿಯಲ್ಲಿ ಚೋಬೆ ನ್ಯಾಷನಲ್ ಪಾರ್ಕ, ಸೆಂಟ್ರಲ್ ಕಲಹರಿ ಗೇಮ್ ರಿಸರ್ವ, ಕಲಹರಿ ಬೇಸಿನ್ಸ್, ಕಲಹರಿ ಜೇಮ್ಸ್ ಬಾಕ್ ನ್ಯಾಷನಲ್ ಪಾರ್ಕ, ಮಾಕಗಾಡಿ ಪಾನ್ಸ್ ಸ್ಥಳಗಳು ಕಂಡು ಬರುತ್ತವೆ.

💢 ಕಲಹರಿ ಮರುಭೂಮಿಯ ವಿಸ್ತೀರ್ಣ 900,000 ಚ.ಕಿ.ಮೀ ಈ ಮರುಭೂಮಿ ಪಕ್ಕದಲ್ಲಿ ಅರೆಂಜ್ ನದಿಯು ಹರಿಯುತ್ತದೆ. ಬ್ರಾಂಡ್ ಬರ್ಗ ಪರ್ವತವು ಅತಿ ದೊಡ್ಡ ಪರ್ವತವಾಗಿದೆ 8560 ಅಡಿ.

6⃣ ಪೆಟಗೋನಿಯನ್ ಮರುಭೂಮಿ

💢 ಈ ಮರುಭೂಮಿಯು ವಿಸ್ತೀರ್ಣದಲ್ಲಿ ಜಗತ್ತಿನ 7ನೇ ದೊಡ್ಡ ಮರುಭೂಮಿ. ಈ ಮರುಭೂಮಿಯ ವಿಸ್ತೀರ್ಣ 670,000 ಚ.ಕಿ.ಮೀಗಳು.

💢 ಈ ಮರುಭೂಮಿಯು ದಕ್ಷಿಣ ಅಮೇರಿಕಾದಲ್ಲಿ ಕಂಡು ಬರುವ ಉಷ್ಣ ಮರುಭೂಮಿಯಾಗಿದ್ದು, ಪ್ರಮುಖವಾಗಿ ಅರ್ಜೆಂಟೈನಾ ಮತ್ತು ಚಿಲಿ ದೇಶಗಳಲ್ಲಿ ವ್ಯಾಪಿಸಿದೆ.

💢 ಇಲ್ಲಿ ಹುಲ್ಲುಗಳಿಗೆ ಬದಲಾಗಿ ಪೊದೆಗಳು ಕಂಡು ಬರುತ್ತದೆ. ಈ ಮರುಭೂಮಿಯಲ್ಲಿ ಕಂಡು ಬರುವ ಪ್ರಾಣಿಗಳೆಂದರೆ ಗೂಬೆ, ಮರುಭೂಮಿ ಹಲ್ಲಿ, ಪಿಗ್ಮಿ ಆರಿಡಿಲೋ ಮುಂತಾದಗಳು.

7⃣ ಗ್ರೇಟ್ ವಿಕ್ಟೋರಿಯಾ ಮರುಭೂಮಿ

💢 ದಕ್ಷಿಣ ಆಸ್ಟ್ರೇಲಿಯಾದಲ್ಲಿ ಕಂಡು ಬರುವ ಮರುಭೂಮಿಯಾಗಿದೆ, ಇದು ಆಸ್ಟ್ರೇಲಿಯಾದ ಅತಿ ದೊಡ್ಡ ಮರುಭೂಮಿ ಸಣ್ಣ ಸಣ್ಣ ಮರಳಿನ ಬೆಟ್ಟೆಗಳು ಕಂಡು ಬರುತ್ತದೆ.

💢 1875ರಲ್ಲಿ ಬ್ರಿಟಿಷ್ ನಾವಿಕ ಎರನೆಸ್ಟ್ ಗೆಲಿಸ್ ಮೊಟ್ಟ ಮೊದಲ ಬಾರಿಗೆ ಈ ಮರುಭೂಮಿಯಲ್ಲಿ ಹಾದು ಹೋದ ಯುರೋಪಿಯೆನ್ ಆಗಿದ್ದಾರೆ.

💢 ಈ ಮರುಭೂಮಿಯಲ್ಲಿ ವರ್ಲ್ಡ ವೈಡ್ ಲೈಫ್ ಫಂಡ್ ನ ಎಕೋ ರಿಜನ್ ಆಗಿದೆ. ಈ ಮರುಭೂಮಿಯಲ್ಲಿ ಗ್ರೇಟ್ ಡೆಸರ್ಟ ಸ್ಕಿಂಕ್ ಮತ್ತು ಸ್ಯಾಂಡಿ ಹಿಲ್ ಡುನಾಲ್ಡ್ ಎಂಬ ಪ್ರಾಣಿ ಕಂಡು ಬರುತ್ತದೆ.

8⃣ ಗ್ರೇಟ್ ಬಸಿನ್ ಮರುಭೂಮಿ

💢 ಈ ಮರುಭೂಮಿಯು ಉತ್ತರ ಅಮೇರಿಕಾದಲ್ಲಿ ವ್ಯಾಪಿಸಿದೆ. ಈ ಮರುಭೂಮಿಯು 492,000 ಕಿ.ಮೀ ವಿಸ್ತೀರ್ಣ ಹೊಂದಿದೆ.

💢 ಈ ಮರುಭೂಮಿಯು ನವೆಡಾ, ಕ್ಯಾಲಿಪೋರ್ನಿಯಾ, ಉತ್ತಾ ದೇಶಗಳಿಂದ ಕೊಲೊಡೊ ನದಿಯವರೆಗೆ ವ್ಯಾಪಿಸಿದೆ. ಇದು ಪ್ರಮುಖವಾಗಿ ಯುನೈಟೆಡ್ ಸ್ಟೇಟ್ಸ್ ದೇಶದಲ್ಲಿ ಹರಡಿಕೊಂಡಿದೆ.

💢 ಇಲ್ಲಿ ಆಲ್ಟ್ರಿಪ್ಲೆಕ್ಸ್ ಎಂಬ ವಿಶೇಷ ಜಾತಿಯ ಸಸ್ಯವು ಕಂಡು ಬರುತ್ತದೆ. ಸೆಜೆ ಬ್ರಷ್ ಎಂಬುದು ಈ ಮರುಭೂಮಿಯಲ್ಲಿ ಕಂಡುಬರುವ ಪ್ರಮುಖವಾದಂತಹ ಸಸ್ಯವಾಗಿದೆ.

9⃣ ಸೈರಿಯನ್ ಮರುಭೂಮಿ

💢 ಈ ಮರುಭೂಮಿಯು ಮಧ್ಯಪೂರ್ವ ಪ್ರಾಂತ್ಯದಲ್ಲಿ ಕಂಡು ಬರುತ್ತದೆ. ಈ ಮರುಭೂಮಿಯು ಜಗತ್ತಿನ ಅತಿ ದೊಡ್ಡ ಮರುಭೂಮಿಯಾಗಿದೆ.

💢 ಇದರ ವಿಸ್ತೀರ್ಣ 520,000 ಆಗಿದೆ. ಈ ಮರುಭೂಮಿಯು ಸೈರಿಯಾ, ಇರಾಕ್, ಜೋಡಾರ್ನ, ಸೌದಿ ಅರೇಬಿಯಾಗಳಲ್ಲಿ ಕಂಡು ಬರುತ್ತದೆ.

*2017 ರ ಪ್ರಮುಖ ಜಾಗತಿಕ ಸೂಚ್ಯಂಕ ಗಳಲ್ಲಿ ಭಾರತದ ಸ್ಥಾನ*
--------------------
1) ಜಾಗತಿಕ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ- 1
2) ನವೀಕರಿಸಬಲ್ಲ ಇಂಧನ ಸೂಚ್ಯಂಕ- 2
3) ವಿಶ್ವ ಸ್ಪರ್ಧಾತ್ಮಕ ಸೂಚ್ಯಂಕ- 45
4) ಸುಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕ-116
5) ವಿಶ್ವ ಸಂತೋಷ ಸೂಚ್ಯಂಕ- 122
6) ಮಾನವ ಅಭಿವೃದ್ಧಿ ಸೂಚ್ಯಂಕ-131
7) ಜಾಗತಿಕ ಶಾಂತಿ ಸೂಚ್ಯಂಕ--137
8) ಅಂತರಾಷ್ಟ್ರೀಯ ಆರ್ಥಿಕ ಅನುಸೂಚಿ- 143

👉ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಪಾರ್ಕ್‌ಗಳು
೧) ಫುಡ್ ಪಾರ್ಕ್- ತುಮಕೂರು
೨)ರೈಸ್‌ ಪಾರ್ಕ್- ಕಾರಟಗಿ
೩) ಅಕ್ಷಯ ಆಹಾರ ಪಾರ್ಕ್- ಹಿರಿಯೂರು
೪)ಸ್ಪೈಸ್ ಪಾರ್ಕ್- ಬ್ಯಾಡಗಿ
೫) ಗ್ರೀನ್ ಪುಡ್ ಪಾರ್ಕ್- ಬಾಗಲಕೋಟೆ
೬)ಸಾಗರೊತ್ಪನ್ನ ಪಾರ್ಕ್-ಮಂಗಳೂರ
೭)ಇನ್ನೊವ ಅಗ್ರಿ ಬಯೊಪಾರ್ಕ- ಮಾಲೂರು
೮)ತೊಗರಿ ಟೆಕ್ನಾಲಜಿ ಪಾರ್ಕ್- ಕಲಬುರಗಿ
೯)ಮೆಕ್ಕೆಜೋಳ ಟೆಕ್ನಾಲಜಿ ಪಾರ್ಕ್- ರಾಣೆಬೆನ್ನೂರು
೧೦)ತೆಂಗು ಸಂಸ್ಕರಣಾಘಟಕ- ತಿಪಟೂರು ತಾಲೂಕಿನ  ಕೊನೇಹಳ್ಳಿ

ಅಣೆಕಟ್ಟು- ಸ್ಥಳ- ನದಿ- ಜಲಾಶಯ

✍✍ಭಾಕ್ರನOಗಲ್ ಅಣೆಕಟ್ಟು
.ಸ್ತಳ -ಬಿಲಸಪೂರ(ಹಿಮಾಚಲ ಪ್ರದೇಶ )
.ನದಿ -ಸಟ್ಲೇಜ 
.ಜಲಶಯನ ಹೆಸರು -ಗೋವಿಂದ ಸಾಗರ ಜಲಶಯ.

✍✍ಹಿರಾಕುಡ್ ಅಣೆಕಟ್ಟು 
.ಸ್ತಳ -ಸಂಬಲಪುರ (ಒಡಿಶಾ )
.ನದಿ -ಮಹಾನದಿ.

✍✍ಮೇಟ್ಟುರು ಅಣೆಕಟ್ಟು 
.ಸ್ತಳ -ಮೇಟ್ಟುರು (ಸೇಲಮ ) ತಮಿಳುನಾಡು 
.ನದಿ -ಕಾವೇರಿ 
.ಜಲಶಯದ ಹೆಸರು -ಸ್ಟೇನ್ಲಿ ಜಲಶಯ.

✍✍ನಾಗಾರ್ಜುನ ಅಣೆಕಟ್ಟು 
.ಸ್ತಳ -ನೇಲಗೋಂಡ ಜಿಲ್ಲೆ(ಆOದ್ರಪ್ರದೇಶ )
.ನದಿ -ಕೃಷ್ಣ.

✍✍ಇಡುಕ್ಕಿ ಆಣೇಕಟ್ಟು 
.ಸ್ತಳ -ಇಡುಕ್ಕಿ (ಕೇರಳ )
.ನದಿ -ಪೆರಿಯಾರ್.

✍✍ರಾಮ ಗಂಗಾ ಅಣೆಕಟ್ಟು 
.ಸ್ತಳ -ಕಲಾಗಡ (ಉತ್ತರಾಖಂಡ )
.ನದಿ -ರಾಮಗOಗಾ.

✍✍ಪೋಡOಪಾಡು ಅಣೆಕಟ್ಟು 
.ಸ್ತಳ -ನೀಜಮಾಬಾದ (ತೆಲಂಗಾಣ )
.ನದಿ -ಗೋದಾವರಿ.

✍✍ಊಕ್ಕೈ ಅಣೆಕಟ್ಟು 
ಸ್ತಳ -ಊಕ್ಕೈ (ಗುಜರಾತ್ )
.ಜಲಶಯದ ಹೆಸರು -ವಲ್ಲಭ ಸಾಗರ್ 
ನದಿ -ತಪತಿ.

✍✍ಪೋಂಗ ಅಣೆಕಟ್ಟು 
.ಸ್ತಳ -ತಲವಾರ ( ಹಿಮಾಚಲ ಪ್ರದೇಶ )
.ನದಿ -ಬಿಯಾಸ್.

✍✍✍ ಗಾಂಧಿ ಸಾಗರ್ ಅಣೆಕಟ್ಟು 
.ಸ್ತಳ -ಮ್ಯಂಡ್ ಸಾರ್ 
ನದಿ - ಚೇಂಬಲ ಯಮೂನ ನದಿ.

✍✍ಕೋಯನ್ನ ಅಣೆಕಟ್ಟು 
.ಸ್ತಳ -ಕೊಯ್ನ (ಮಹರಾಷ್ಟ)
.ನದಿ -ಕೋಯನ್ 
.ಜಲಶಯದ ಹೆಸರು - ಶಿವಾಜಿ ಸಾಗರ್ ಸರೋವರ

✍✍ಅಲಮಟ್ಟಿ ಅಣೆಕಟ್ಟು 
.ಸ್ತಳ -ಅಲಮಟ್ಟಿ ( ಕರ್ನಾಟಕ )
.ನದಿ -ಕೃಷ್ಣ 
.ಜಲಶಯದ ಹೆಸರು -ಲಾಲ್ ಬಹುದೂರ ಶಾಸ್ತ್ರಿ.

✍✍ತವಾ ಅಣೆಕಟ್ಟು
.ಸ್ತಳ -ಹೊಸಂಗಾಬಾದ 
( ಮಧ್ಯ ಪ್ರದೇಶ )
.ನದಿ -ತವಾ

✍✍ಜಯಕವಡಿ ಅಣೆಕಟ್ಟು 
.ಸ್ತಳ -ಜಯಕವಡಿ (ಮಹರಸ್ಟ್ರ )
.ನದಿ -ಗೋದವರೀ 
.ಜಲಶಯದ ಹೆಸರು -ನಾಥಸಾಗರ್ ಜಲಶಯ

✍✍ರಿಹಂದ ಅಣೆಕಟ್ಟು 
.ಸ್ತಳ -ಸೂನಭದ್ರ
( ಉತ್ತರ ಪ್ರದೇಶ )
.ನದಿ -ರಿಹಂದ

✍✍ಸರ್ದರ ಸರೋವರ ಅಣೆಕಟ್ಟು
.ಸ್ತಳ -ನವಗO (ಗುಜರಾತ್)
.ನದಿ - ನರ್ಮದಾ

✍✍✍ರಣ ಪ್ರತಾಪ್ ಸಾಗರ್ ಅಣೆಕಟ್ಟು
.ಸ್ತಳ -ರವಬತ (ರಾಜಸ್ತಾನ್ )

 

ಉತ್ತರ ಭಾರತದ ನದಿಗಳು :
1.ನದಿ :— ಸಿಂಧೂ (ಇಂಡಸ್ ನದಿ) 
●.ನದಿಯ ಉಗಮ ಸ್ಥಾನ :— ಮಾನಸ ಸರೋವರ, ಟಿಬೆಟ್
●.ಕೊನೆಗೆ ಸೇರುವ ಪ್ರದೇಶ (Drain Into) :— ಪಾಕಿಸ್ತಾನ, ಅರಬ್ಬೀ ಸಮುದ್ರ
●.ವ್ಯಾಪ್ತಿ ರಾಜ್ಯಗಳು :—  (ಪಾಕಿಸ್ತಾನ, ಭಾರತ) ಜಮ್ಮು ಕಾಶ್ಮೀರ, ಗುಜರಾತ್
●.ಪ್ರಮುಖ ಉಪನದಿಗಳು :— ಝಸ್ಕಾರ್, ರವಿ, ಬಿಯಾಸ್, ಸಟ್ಲೇಜ್, ಚೆನಾಬ್, ಝೀಲಂ
●.ಪ್ರಮುಖ ಅಣೆಕಟ್ಟುಗಳು :— ಮಂಗ್ಲಾ ಅಣೆಕಟ್ಟು (ಝೀಲಂ ನದಿ), ತರಬೇಲಾ ಅಣೆಕಟ್ಟು
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಇಲ್ಲಾ.
●.ವಿಶೇಷತೆಗಳು :— 
1.ಟಿಬೆಟ್ ನಲ್ಲಿ ಸಿಂಧೂ ನದಿಗೆ 'ಸಿಂಘೆ ಕಂಬಾಬ್' ಎಂದು ಕರೆಯುವರು.
2.ಸಿಂಧೂ ನದಿಗೆ ಪಾಕಿಸ್ತಾನದಲ್ಲಿ ಸೇರುವ ಉಪನದಿಗಳೆಂದರೆ 'ಜೋದಾಲ್, ಕಾಬೂಲ್, ತಾಚಿ' ಪ್ರಮುಖವಾದವುಗಳು.
2.ನದಿ :— ಗಂಗಾ
●.ನದಿಯ ಉಗಮ ಸ್ಥಾನ :— ಗಂಗೋತ್ರಿ, ಉತ್ತರಾಖಂಡ್
●.ಕೊನೆಗೆ ಸೇರುವ ಪ್ರದೇಶ :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಉತ್ತರಾಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್
●.ಪ್ರಮುಖ ಉಪನದಿಗಳು :— ಗೋಮತಿ, ಘಗ್ರಾ, ಗಂಡಕ್, ಕೊಸಿ, ಯಮುನಾ, ಸೊನ್, ಪುಂಪುನ್, ದಾಮೋದರ್, ರಿಹಾಂದ್,ರಾಮಗಂಗಾ, ಬೇಟ್ವಾ,
●.ಪ್ರಮುಖ ಅಣೆಕಟ್ಟುಗಳು :— ತೆಹ್ರಿ ಅಣೆಕಟ್ಟು (ಭಾಗೀರಥಿ ನದಿ), ಬನಸಾಗರ್ ಅಣೆಕಟ್ಟು (ಸನ್ ನದಿ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾರ್ಬೆಟ್ ರಾಷ್ಟ್ರೀಯ ಪಾರ್ಕ್ (ರಾಮಗಂಗಾ ನದಿ)
●.ವಿಶೇಷತೆಗಳು :—  
1.ಭಾರತದ ಅತೀ ಉದ್ದವಾದ ನದಿ
2.ಪ್ರಪಂಚದ ಅತ್ಯಂತ ದೊಡ್ಡ ನದೀಮುಖಜ ಭೂಮಿಯಾದ 'ಸುಂದರ್ ಬನ್ಸ್' ಗಂಗಾನದಿಯ ಮುಖಜ ಭೂಮಿಯಾಗಿದೆ.
3.ದಾಮೋದರ್ ನದಿಯು ಪಶ್ಚಿಮ ಬಂಗಾಳದ ದುಃಖದ ನದಿಯಾಗಿದೆ.
4.ಕೊಸಿ ನದಿಯು ಬಿಹಾರದ ದುಃಖದ ನದಿಯಾಗಿದೆ.
3.ನದಿ :— ಬ್ರಹ್ಮಪುತ್ರ
●.ನದಿಯ ಉಗಮ ಸ್ಥಾನ :— (ಮಾನಸ ಸರೋವರ) ಚೆಮಯಂಗ್ ಡಂಗ್, ಟಿಬೆಟ್
●.ಕೊನೆಗೆ ಸೇರುವ ಪ್ರದೇಶ (Drain Into) :— ಬಾಂಗ್ಲಾದೇಶ, ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಅಸ್ಸಾಂ, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ.
●.ಪ್ರಮುಖ ಉಪನದಿಗಳು :— ದಿಬಂಗ್, ದಿಕು, ಕೊಪಿಲಿ, ಬುರ್ಹಿ, ದಿಹಿಂಗ್, ಧನಶ್ರೀ, ತೀಸ್ತಾ, ಲೋಹಿತ್, ಕಮೆಂಗ್, ಮಾನಸ್
●.ಪ್ರಮುಖ ಅಣೆಕಟ್ಟುಗಳು :— ಫರಕ್ಕಾ ಬ್ಯಾರೇಜ್ (ಪಶ್ಚಿಮ ಬಂಗಾಳ)
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಕಾಜಿರಂಗಾ ರಾಷ್ಟ್ರೀಯ ಉದ್ಯಾನ (ಬ್ರಹ್ಮಪುತ್ರ ನದಿ)
●.ವಿಶೇಷತೆಗಳು :—  
1. ಈ ನದಿಗೆ ಟಿಬೆಟಿನಲ್ಲಿ 'ಸಾಂಗ್ ಪೋ', 'ಯಾರ್ಲುಂಗ್ ಜಾಂಗ್ಬೋ ಜಿಯಾಂಗ್' ಹೆಸರಿನಿಂದ ಕರೆಯುತ್ತಾರೆ.
2.. ಅರುಣಾಚಲ ಪ್ರದೇಶವನ್ನು ಪ್ರವೇಶಿಸುವ ಮೂಲಕ ಭಾರತಕ್ಕೆ ಪ್ರವೇಶಿಸುತ್ತದೆ. ಆ ಪ್ರವೇಶಿಸುವ ಭಾಗವನ್ನು 'ಡಿಹಾಂಗ್ ಕಂದರ' ಎನ್ನುವರು.
3. ಈ ನದಿ ಆಸ್ಸಾಂ ರಾಜ್ಯದ ದುಃಖದ ನದಿಯಾಗಿದೆ.
4.ಆಸ್ಸಾಂ ರಾಜ್ಯದಲ್ಲಿ ಬ್ರಹ್ಮಪುತ್ರ ನದಿಯಲ್ಲಿ 'ಮಜೂಲಿ ಎಂಬ ಅಂತರ ನದಿ ದ್ವೀಪವಿದ್ದು, ಇದು ಪ್ರಪಂಚದ ಅತ್ಯಂತ ದೊಡ್ಡ ಅಂತರ ನದಿ ದ್ವೀಪ ವ್ಯವಸ್ಥೆಯಾಗಿದೆ.
5.ತ್ಸಾಂಗ್ ಪೋ ನದಿಗೆ ಟಿಬೆಟಿನ ಕಣ್ಣೀರಿನ ನದಿ ಎನ್ನುವರು.
4..ನದಿ :— ಯಮುನಾ 
●.ನದಿಯ ಉಗಮ ಸ್ಥಾನ :— ಯಮುನೋತ್ರಿ, ಉತ್ತರಾಖಂಡ್.
●.ಕೊನೆಗೆ ಸೇರುವ ಪ್ರದೇಶ (Drain Into) :— ಬಂಗಾಳ ಕೊಲ್ಲಿ.
●.ವ್ಯಾಪ್ತಿ ರಾಜ್ಯಗಳು :— ಉತ್ತರ ಪ್ರದೇಶ, ಹರಿಯಾಣ & ಉತ್ತರಾಖಂಡ್,
●.ಪ್ರಮುಖ ಉಪನದಿಗಳು :— ಹಿಂದೊನ್, ಕೆನ್, ಚಂಬಲ್, ಬೇತ್ವಾ, ಸಿಂಧ್, ಟೊನ್ಸ್.
●.ಪ್ರಮುಖ ಅಣೆಕಟ್ಟುಗಳು :— ಗಾಂಧಿ ಸಾಗರ ಅಣೆಕಟ್ಟು (ಚಂಬಲ್), ರಾಣಾ ಪ್ರತಾಪ್ ಸಾಗರ ಅಣೆಕಟ್ಟು (ಚಂಬಲ್),
●.ರಾಷ್ಟ್ರೀಯ ಉದ್ಯಾನಗಳು / ಅಭಯಾರಣ್ಯಗಳು :— ಪನ್ನಾ ರಾಷ್ಟ್ರೀಯ ಉದ್ಯಾನ (ಕೆನ್ ನದಿ)
●.ವಿಶೇಷತೆಗಳು :—  
1. ಭಾರತದ ಅತ್ಯಂತ ಉದ್ದವಾದ ಉಪನದಿ (ಗಂಗಾ)
5..ನದಿ :— ಸಬರಮತಿ
●.ನದಿಯ ಉಗಮ ಸ್ಥಾನ :— ಉದಯಪುರ್,  ರಾಜಸ್ಥಾನ .
●.ಕೊನೆಗೆ ಸೇರುವ ಪ್ರದೇಶ (Drain Into) :— ಅರಬ್ಬೀ ಸಮುದ್ರ.
●.ವ್ಯಾಪ್ತಿ ರಾಜ್ಯಗಳು :— ಗುಜರಾತ್, ರಾಜಸ್ಥಾನ
●.ಪ್ರಮುಖ ಉಪನದಿಗಳು :— ವಕಾಲ್, ಸೇಯ್ ನಾಡಿ, ಮಧುಮತಿ, ಹರ್ನಾವ್, ಹಾಥ್ ಮತಿ
●.ಪ್ರಮುಖ ಅಣೆಕಟ್ಟುಗಳು :— ಧರೋಯಿ ಅಣೆಕಟ್ಟು
★ ದಕ್ಷಿಣ ಭಾರತದ ನದಿಗಳು :
1.ನದಿ :— ಕೃಷ್ಣಾ  (ದ.ಭಾರತದ ಪೂರ್ವಕ್ಕೆ ಹರಿಯುವ ನದಿ) 
●.ನದಿಯ ಉಗಮ ಸ್ಥಾನ :— ಮಹಾರಾಷ್ಟ್ರದ ಮಹಾಬಲೇಶ್ವರ.
●.ಕೊನೆಗೆ ಸೇರುವ ಪ್ರದೇಶ :— ಬಂಗಾಳ ಕೊಲ್ಲಿ (ಆಂಧ್ರಪ್ರದೇಶ)
●.ವ್ಯಾಪ್ತಿ ರಾಜ್ಯಗಳು :— ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ
●.ಪ್ರಮುಖ ಉಪನದಿಗಳು :— ತುಂಗಭದ್ರ, ಕೊಯ್ನ, ಘಟಪ್ರಭಾ, ಮಲಪ್ರಭಾ, ಭೀಮಾ, ದಿಂಡಿ, ಯೆರ್ಲಾ, ವರ್ಣಾ, ಪಂಚಗಂಗಾ, ಧೂದಗಂಗಾ, ದೋಣಿ ಮತ್ತು ಮುಸಿ.
●.ಪ್ರಮುಖ ಅಣೆಕಟ್ಟುಗಳು :— ನಾಗಾರ್ಜುನ ಸಾಗರ ಜಲಾಶಯ, ಶ್ರೀಶೈಲಂ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ಧೋಮ್ ಅಣೆಕಟ್ಟು 
●.ವಿಶೇಷತೆಗಳು :— 
ಇದು ದಕ್ಷಿಣ ಭಾರತದ 2 ನೇ ಅತಿ ಉದ್ದವಾದ ಮತ್ತು ಪ್ರಸ್ಥಭೂಮಿಯಲ್ಲಿ ಗೋದಾವರಿ ನದಿಯ ನಂತರದ 2 ನೇ ಅತಿ ದೊಡ್ಡ ನದಿ.
2..ನದಿ :— ನರ್ಮದಾ (ರೇವಾ)  (ದ.ಭಾರತದ ಪಶ್ಚಿಮಕ್ಕೆ ಹರಿಯುವ ನದಿ) 
●.ನದಿಯ ಉಗಮ ಸ್ಥಾನ :— ಅಮರಕಂಟಕ್, ಮಧ್ಯಪ್ರದೇಶ
●.ಕ?

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...