ಮಕ್ಕಳ ಮಂದಾರ -ಮಕ್ಕಳ ತೋಟದ ಬರಹಗಳ ಪದ ಮಾಲೆ

Wednesday 13 December 2017

ಮಾಸ್ ಮಪ್ತಿ ನರ್ತನ್

ಕ್ರೌಯ ರಂಜನೆಯ ಮಾಸ್ ಮಪ್ತಿ  ನರ್ತನ್...

ವ್ಯವಸ್ಥೆಯ ಲೋಪದಿಂದ  ಸಾಂಧರ್ಭಿಕವಾಗಿ ರೂಪುಗೊಂಡ " ರಾಕ್ಷಸ ರೂಪದ ಕರ್ತವ್ಯ ವ್ಯಕ್ತಿತ್ವ  ಹಾಗೂ  ಅಂತವನನ್ನು ಬಂಧಿಸಲು ಬಂದು ತಾನೇ  ಬಂಧಿಯಾಗುವ ಕರ್ತವ್ಯ ರೂಪದ ರಾಕ್ಷಸ ವ್ಯಕ್ತಿತ್ವ ವನ್ನು  ಕ್ರೌರ್ಯ ರಂಜನೆಯ ಕತೆಯನ್ನಿಟ್ಟುಕೊಂಡು  ನಿರ್ದೇಶಕ ನರ್ತನ ಅವ್ರು ಮೊದಲ ಪ್ರಯತ್ನದಲ್ಲೇ  ಕನ್ನಡ ಸಿನಿಮೊದ್ಯಮ ಅವರತ್ತ ನೋಡುವಂತ ಸಿನಿಮಾ ಮಾಡಿದ್ದು ಅವರ ಪ್ರತಿಭೆಗೆ ಸಾಕ್ಷಿ.ಅವರನ್ನು ಪ್ರೋತ್ಸಾಹಿಸಲು ನೀವೊಮ್ಮೆ ಈ ಸಿನಿಮಾ ನೋಡಬೇಕು.

ಕ್ರೌರ್ಯ ರಂಜನೆಯ ಕತೆ ಜೊತೆಗೆ ಕಣ್ಣಂಚಲಿ  ಕಣ್ಣಿರಾಡುವಂತೆ ಮಾಡುವ ಅಣ್ಣ ತಂಗಿ ಸೆಂಟಿಮೆಂಟ್ ಜೊತೆಗೆ  ಕತೆಗೆ ಗಟ್ಟಿ ತನ ತಂದುಕೊಡಬಲ್ಲ  ಸಂಬಾಷಣೆ , ಒಬ್ಬರಿಗೊಬ್ಬರು ಹಠಕ್ಕೆ ಬಿದ್ದು  ಅದ್ಬುತ ಅಭಿನಯ ನೀಡಲು ಶ್ರಮಿಸಿರುವುದು ಚಿತ್ರದುದ್ದಕ್ಕೂ ನಿಮ್ಮನ್ನು ಪ್ರತಿ ಕ್ಷಣವೂ ಪ್ರತಿ ಪ್ರೇಮುಗಳು ಥಿಯೇಟರಿನಲ್ಲೇ ನಿಮ್ಮನ್ನು ಹಿಡಿದುಕೂರಿಸುತ್ತದೆ.
ರವಿ ಬಸರುರ್ ಹಿನ್ನಲೆ ಸಂಗೀತದ ಅಬ್ಬರದ ಜೊತೆಗೆ ಭೈರತಿ ರಣಗಲ್ಲು , ಗಣ, ಸಿಂಗ, ಠಾಕೂರ್, ಮತ್ತಿತರ ಪಾತ್ರಗಳೆಲ್ಲ ನಿಮ್ಮನ್ನು ಮತ್ತೆ ಮತ್ತೆ ಥಿಯೇಟರಿಗೆ   ಕರೆಯುವುದು ಮಪ್ತಿಯ ಹೆಚ್ಚುಗಾರಿಕೆ.
ರವಿರಾಜ್ ಸಾಗರ್

ಸುಳ್ಳೂರ ಶಾಲೆಯಲ್ಲಿ ಪಾಲಕರಿಂದ ಸ್ವಚ್ಛತಾ ಸಪ್ತಾಹ

ಊರಿನ ಗ್ರಾಮಸ್ಥರಿಂದ ಸುಳ್ಳೂರು ಶಾಲೆಯಲ್ಲಿ ಸ್ವಚ್ಛತಾ ಸಪ್ತಾಹ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಳ್ಳೂರಿನ ಹಿರಿಯ ವಿದ್ಯಾರ್ಥಿಗಳು , ಪಾಲಕರೆಲ್ಲರೂ ಸೇರ...